ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯಿಂದ ಜನರು ಪರದಾಡುವಂತಾಗಿದೆ . ವಿಪರೀತ ಮಳೆಯಿಂದ ಜನರು ಸಂಚಾರ ಮಾಡಲು ಹಾಗೂ ಕೆಲಸದ ಕಡೆ ಮುಖ ಮಾಡಿ ಹೋಗಲು ತುಂಬಾ ಪರದಾಡುವಂತಾಗಿದೆ. ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಮನಗರ, ಮೈಸೂರು, ಮಂಡ್ಯ, ಕೋಲಾರ ,ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ಕಲಬುರಗಿ, ಹಾವೇರಿ ಧಾರವಾಡ, ಬೀದರ್, ಅಲ್ಲಿ ಕೂಡ ಸಾಧಾರಣದ ಮಳೆಯಾಗುತ್ತಿದೆ.
Lakme Absolute 3D Lash Volumizer 15 ml
ಕರ್ನಾಟಕದ ಹಲವೆಡೆ ಭಾರೀ ಮಳೆಯಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆಯಿಂದ ಜನರು ತಮ್ಮ ಪ್ರತಿನಿತ್ಯದ ಕೆಲಸಕ್ಕೆ ಹೋಗಲು ಚಿಂತಿಸುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಬಿಸಿಲಿನಿಂದ ಮಳೆ ಕೂಡಿದೆ. ಮೋಡಕವಿದ ವಾತಾವರಣ ನಿರ್ಮಾಣವಾಗಿದೆ.
ಇದನ್ನು ಓದಿ :ಧರ್ಮಸ್ಥಳ ಅಸ್ಥಿಪಂಜರ ಅಸಲೀಯತ್ತು ಬಯಲು ಆಗುವುದು ಹೇಗೆ.?!
ಮೈಸೂರಿನ ಕೆಲವು ಭಾಗದಲ್ಲಿ ತುಂತುರು ಮಳೆಯಾಗುತ್ತದೆ. ಬಿಟ್ಟು,ಬಿಟ್ಟು ಮಳೆ ಬರುವುದರಿಂದ ಜನರು ಸಂಚಾರಕ್ಕೆ ಹಾಗೂ ಅವರ ಬೆಳೆದ ಬೆಳೆಗಳು ಮಳೆಯಿಂದ ನಾಶವಾಗುತ್ತಿದೆ. ರೈತರು ಸಾಕಷ್ಡು ಸಂಕಷ್ಟವನ್ನು ಪಡುತ್ತಿದ್ದಾರೆ. ಅವರು ಬೆಳೆ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಕೂಡ ದೊರಕುತ್ತಿಲ್ಲ.
ಜನರು ತಾವು ಬೆಳದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ದೊರಕುತ್ತಿಲ್ಲ, ಅವರು ಕಷ್ಟಪಟ್ಟು ಬೆಳೆದ ಬೆಳೆಗಳು ನೀರುಪಾಲಗಿ ಹೋಗಿದೆ. ರೈತರು ಬೆಳದ ತರಕಾರಿ, ಹಣ್ಣು, ಹೂಗಳು ಎಲ್ಲಾವು ಮಳೆಯಿಂದ ನಾಶವಾಗುತ್ತಿವೆ. ರೈತರು ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದಾರೆ.