ಧರ್ಮಸ್ಥಳ: ಧರ್ಮಸ್ಥಳದ ಅಸಹಜ ಸಾವುಗಳು ಮತ್ತು ಶವ ಹೂತಿಟ್ಟ ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಅನಾಮಿಕ ದೂರುದಾರನ ದೂರಿನ ಅನ್ವಯ ಉತ್ಖನನ ನಡೆಯುತ್ತಿದೆ. ಇದಕ್ಕೆ ಸರ್ಕಾರ ಎಸ್ಐಟಿಯನ್ನು ರಚಿಸಿದೆ. ಆದರೆ ಇದು ಒಂದು ಭಾಗವಾದರೆ ಇನ್ನೊಂದು ಕಡೆ ಹೊಸ ವಿಚಾರ ಕೇಳಿ ಬರುತ್ತಿದ್ದು, ಧಾರ್ಮಿಕ ಕೇಂದ್ರವಾದ ಧರ್ಮಸ್ಥಳವನ್ನು ಮತ್ತು ಅದರ ಹೆಸರನ್ನು ಹಾಳು ಮಾಡಲು “ಟಾರ್ಗೆಟ್ ಧರ್ಮಸ್ಥಳ ಟೂಲ್ ಕಿಟ್” ಎಂಬ ಮಿಷನ್ ಶುರುವಾಗಿದೆ ಎಂಬ ಆರೋಪ ಹೆಚ್ಚಾಗುತ್ತಿದೆ...
ಶಬರಿಮಲೆ, ಶನಿಸಿಂಗಾಪುರ, ಈಶ, ಇವೆಲ್ಲ ಆದ ಬಳಿಕ ಧರ್ಮಸ್ಥಳವಾಗಿದೆ ಎಂಬ ಆರೋಪ ಸದ್ಯ ಓಡಾಡುತ್ತಿದೆ, ಈ ಮಾಹಿತಿಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್. ಸಂತೋಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.Levi's Men's Slim Fit Mid Rise 511 Mid-Rise Jeans
ಇದು ಹೀಗೆ ಮುಂದುವರಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಎಂಎಲ್ಸಿ ಸಿಟಿ. ರವಿ, ಮಾಜಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದ್ದು ಧರ್ಮಸ್ಥಳ ಭಕ್ತವೃಂದದಿಂದ ಮಡಿಕೇರಿ, ಮಂಗಳೂರು, ಉಡುಪಿಗಳಲ್ಲಿ ಶುಕ್ರವಾರ ಪ್ರತಿಭಟನೆಗಳು ನಡೆದಿದೆ..
ಇದನ್ನು ಓದಿ: ಮಲಯಾಳಂ ನಟಿ ಶ್ವೇತಾ ಮೆನನ್ ಅವರ ವಿರುದ್ಧ ಕೇರಳದಲ್ಲಿ ಕೇಸ್ ದಾಖಲು: ಕಾರಣ ಅಶ್ಲೀಲ ವಿಷಯವಂತೆ!
ಧರ್ಮಸ್ಥಳ ಗ್ರಾಮ ಕೇಸ್ಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ “ಎಚ್ಚೆತ್ತುಕೊಳ್ಳೋಣ” ಶಬರಿಮಲೆ, ಶನಿ ಸಿಂಗಾಪುರ, ಈಶ, ಈಗ ಧರ್ಮಸ್ಥಳ ಎಂದು ಪೋಸ್ಟ್ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದೆ ವೇಳೆ ಧರ್ಮಸ್ಥಳ ಗ್ರಾಮದಲ್ಲಿನ ಇತ್ತೀಚಿಗಿನ ಬೆಳವಣಿಗೆಗೆ ಸಂಬಂಧಿಸಿದಂತೆ ವಿಶ್ವ ಹಿಂದು ಪರಿಷತ್ ಖಂಡನೆ ವ್ಯಕ್ತಪಡಿಸಿದೆ.
ಬಿಜೆಪಿ ನಾಯಕರ ಕಿಡಿ: ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ 13 ಅಲ್ಲ 20 ಪಾಯಿಂಟ್ ಹುಡುಕಲಿ ನಮ್ಮ ಅಭ್ಯಂತರವಿಲ್ಲ ಅಲ್ಲಿ ಏನು ಸಿಕ್ಕಿದೆ ಎಂಬುದು ಎಲ್ಲರಿಗೂ ಗೊತ್ತಿದೆ, ಆ ಭಾಗದಲ್ಲಿ ಧಾರ್ಮಿಕ ವಿಚಾರದಲ್ಲಿ ನಂಬಿಕೆ ಹಾಳುಮಾಡಿವ ಕೆಲಸ ನಡೆಯುತ್ತಿರುವುದು ಕಂಡುಬರುತ್ತಿದೆ, ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಅಪಪ್ರಚಾರ ಮಾಡಿದರೆ ಇದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಿಟಿ. ರವಿ, ಪ್ರತಾಪ್ ಸಿಂಹ ಕೂಡ ದನಿ ಎತ್ತಿದ್ದಾರೆ.