ಬಹುನಿರೀಕ್ಷಿತ 2025 ರ ಏಷ್ಯಾಕಪ್ ಟೂರ್ನಿಗೆ ಸಜ್ಜಾಗಿರುವ ಭಾರತ ತಂಡವು ಟಿ20 ಸರಣಿಗೆ ಭರ್ಜರಿಯಾಗಿ ತಯಾರಿ ನಡೆಸುವುದರೊಟ್ಟಿಗೆ ಉತ್ತಮ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ವಿಮುಖ ತೋರಲಿದೆ ಎಂದರೆ ನಿಮಗೆ ಕುತೂಹಲ ಮೂಡಬಹದು. ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಕಾದಿರುವ ಹಾಗಿದೆಯೇನೋ! ನೆಚ್ಚಿನ ಆಟಗಾರರೊಬ್ಬರ ಅಲಭ್ಯತೆ ಬೇಸರ ತರಿಸಲಿದೆ ಎಂದರೆ ಸಂಶಯವಿಲ್ಲ.
ಇದೇ ಸೆಪ್ಟಂಬರ್ 09ರಿಂದ ಶುರುವಾಗಲಿರುವ ಏಷ್ಯಾ ಕಪ್ ಪಂದ್ಯಾವಳಿ ಮುಂದಿನ ವರ್ಷದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮಾದರಿಯಾಲಿ ನಡೆಸಲು ಎಸಿಸಿ ತೀರ್ಮಾನಿಸಿರುವುದಾದದರೂ ಹಾಲಿ ಚಾಂಪಿಯನ್ ಭಾರತಕ್ಕೆ ಒಳ್ಳೆಯ ಆಟಗಾರರ ಕೈಬಿಡುವ ಟೆನ್ಷನ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಇಂತಹ ವ್ಯಾಲ್ಯೂವಬಲ್ ಆಟಗಾರರಾಗಿ ಹೊರಹೊಮ್ಮಿದವರು ಸೂರ್ಯಕುಮಾರ್ ಯಾದವ್. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ಜನವಿರೋಧಿ ಸರ್ಕಾರದ ನಿರ್ಲಕ್ಷ್ಯಕ್ಕೆ ಧಿಕ್ಕಾರ ಎಂದು ಬಿಜೆಪಿ ಕಿಡಿ!
ಭಾರತದ ಟಿ20 ನಾಯಕರಾಗಿ ಸೂರ್ಯಕುಮಾರ್ ಯಾದವ್, 22 ಬಾರಿ ತಂಡವನ್ನು ಮುನ್ನಡೆಸಿದ್ದು, 17 ಬಾರಿ ಟೀಂ ಇಂಡಿಯಾವನ್ನು ಗೆಲ್ಲಿಸಿದ್ದರು ಹಾಗೂ ಪ್ರಮುಖ ಬ್ಯಾಟರ್ ಎನಿಸಿಕೊಂಡಿದ್ದಾರೆ. ಐಪಿಎಲ್ನಲ್ಲೂ ಉತ್ತಮ ಪ್ರದರ್ಶನ ತೋರಿದ್ದ ಅವರು ಸ್ಪೋರ್ಟ್ ಹರ್ನಿಯಾ ಸರ್ಜರಿ ಮಾಡಿಸಿಕೊಂಡು ನೂರರಷ್ಟು ಫಿಟ್ ಆಗುವುದು ಅನುಮಾನವಿದೆ ಎನ್ನಲಾಗಿದೆ. ಅವರ ಕೊಡುಗೆ ತಂಡಕ್ಕೆ ಮಹತ್ವದ್ದಾಗಿದೆ ಎನ್ನಲಾಗಿದೆ.