ರಕ್ಷಾಬಂಧನ, ಗಣೇಶ ಚತುರ್ಥಿ ಮತ್ತು ಸ್ವಾತಂತ್ರ್ಯ ದಿನದಂತಹ ಭಾರತದ ಸಂತೋಷಕರ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ, ಸಾಂಪ್ರದಾಯಿಕವಾಗಿ ಅಡುಗೆಮನೆಗಳಲ್ಲಿ ಒಂದು ರುಚಿಕರವಾದ ಅಡುಗೆ ತಯಾರಾಗುತ್ತದೆ. ಪರಿಚಿತ ಸಿಹಿತಿಂಡಿಗಳು ಆಧುನಿಕ ಮತ್ತು ಆರೋಗ್ಯಕರವಾದ ಆಹಾರಗಳು ತಯಾರಾಗುತ್ತವೆ, ಅದರಲ್ಲೂ ಒಂದು ರೀತಿಯ ವಿಶಿಷ್ಟವಾದ ರುಚಿಕರವಾದ ಸಿಹಿತಿಂಡಿ ತಯಾರಾಗುತ್ತದೆ ಅದೇನೆಂದರೆ- ಕ್ರ್ಯಾನ್ಬೆರಿಗಳು.
ಒಮ್ಮೆ ಕೇವಲ ಪಾಶ್ಚಿಮಾತ್ಯ ಖಾದ್ಯಗಳಲ್ಲಿ ಕಂಡುಬರುತ್ತಿದ್ದ ಈ ರೋಮಾಂಚಕ ಮತ್ತು ಟಾರ್ಟ್ ಕ್ರ್ಯಾನ್ಬೆರಿಗಳು ಈಗ ಭಾರತದಲ್ಲಿ ಆಚರಿಸುವ ಹಬ್ಬದಲ್ಲಿ ಯಾವುದೇ ಕಾರಣಕ್ಕೂ ತಪ್ಪಿಸದೇ ಈ ತಿಂಡಿಗಳನ್ನು ಮಾಡುತ್ತಾರೆ. ಸಿಹಿತಿಂಡಿಗಳಿಗೆ ತಾಜಾತನ ಮತ್ತು ಬಣ್ಣವನ್ನು ಸೇರಿಸಿ ಆ ಒಂದು ಆಹಾರಕ್ಕೆ ಒಂದೊಳ್ಳೆಯ ಆಕಾರವನ್ನು ನೀಸುವುದಾಗಿದೆ. ಈ ಪ್ರವೃತ್ತಿಯ ಕೇಂದ್ರಬಿಂದುವಿನಲ್ಲಿ ಒಂದು ಸಿಹಿತಿಂಡಿಯಿದೆ, ಅದು ಭಾವನಾತ್ಮಕತೆಯನ್ನು ವಿಶ್ವದ ರುಚಿಯೊಂದಿಗೆ ಸಂಯೋಜಿಸುತ್ತದೆ, ಕ್ರ್ಯಾನ್ಬೆರಿ ಶ್ರೀಖಂಡ್ ಟ್ರೈಫಲ್.
ಈ ಸಿಹಿ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿರುವವರು ಖ್ಯಾತ ಶೆಫ್ ಸಂಜೀವ್ ಕಪೂರ್, ಅವರು ಸಾಂಪ್ರದಾಯಿಕತೆ ಮತ್ತು ಆವಿಷ್ಕಾರದ ಸಮತೋಲನವನ್ನು ಈ ರೆಸಿಪಿಗೆ ತರುತ್ತಾರೆ. ಶೆಫ್ ಸಂಜೀವ್ ಕಪೂರ್ ಹೇಳುವಂತೆ, “ಶ್ರೀಖಂಡ್ ಒಂದು ಶಾಶ್ವತವಾದ ಕ್ಲಾಸಿಕ್, ಆದರೆ ಕ್ರ್ಯಾನ್ಬೆರಿಗಳೊಂದಿಗೆ ಇದನ್ನು ಲೇಯರ್ಡ್ ಟ್ರೈಫಲ್ನಂತೆ ಒಡಗೂಡಿಸುವುದು ಇದನ್ನು ಹಬ್ಬದ, ರೋಮಾಂಚಕ ಮತ್ತು ಇಂದಿನ ರುಚಿಯ ಆದ್ಯತೆಗಳಿಗೆ ಸೂಕ್ತವಾಗಿಸುತ್ತದೆ.”