ಬ್ಯಾಡ್ ಬಾಯ್ ಆರೋಪಿ ದರ್ಶನ್ ಅರೆಸ್ಟ್: ಎಲ್ಲಿ, ಹೇಗೆ.? ಇಲ್ಲಿದೆ ಮಾಹಿತಿ
ಬೆಂಗಳೂರು; ಜಾತ್ರೆಯ ಪ್ರಯುಕ್ತ ತಮಿಳುನಾಡಿಗೆ ತೆರಳಿದ್ದ ದರ್ಶನ್ ತಮ್ಮ ಫೇವರಿಟ್ ರೆಡ್ ಕಲರ್ ಕಾರಾದ ರ್ಯಾಂಗಲರ್ ಕಾರಿನಲ್ಲಿ ಮತ್ತು ಇನ್ನೋವಾ ಕಾರಿನಲ್ಲಿ ಹೋಗಿದ್ದು ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿತ್ತು. ಆದರೆ ಆ ಬಗ್ಗೆ ಅಧಿಕೃತವಾದ ಮಾಹಿತಿ ಇರಲಿಲ್ಲ.
ಆದರೆ ಸದ್ಯದ ಮಾಹಿತಿಯಂತೆ ದರ್ಶನ್ ಹೊಸಕೆರೆಹಳ್ಳಿಯಲ್ಲಿ ಅವರ ಪತ್ನಿಯ ಮನೆಯಲ್ಲಿ ಅರೆಸ್ಟ್ ಆಗಿದ್ದಾರೆ ಎಂದು ಮಾಹಿತಿ ಬಂದಿದೆ. ಮಾಧ್ಯಮಗಳ ಕಣ್ತಪ್ಪಿಸಿ ಪತ್ನಿ ಮನೆ ಸೇರಿದ್ದ ದರ್ಶನ್ ಹಿಂದಿನ ಗೇಟ್ನಿಂದ ಇನೋವಾ ಕಾರ್ನಲ್ಲಿ ವಿಜಯಲಕ್ಷ್ಮಿ ಮನೆಗೆ ಎಂಟ್ರಿ ನೀಡಿದ್ದರು. ದರ್ಶನ್ ಅವರ ಚಲನವಲನಗಳ ಮೇಲೆ ನಿಗಾ ವಹಿಸಿದ್ದ ಪೊಲೀಸರು ಬಂದ ತಕ್ಷಣವೇ ಅರೆಸ್ಟ್ ಮಾಡಿರುವುದಾಗಿ ಮಾಹಿತಿ ಬಂದಿದೆ.
ನೈಸ್ ರಸ್ತೆಯಲ್ಲಿ ಪೊಲೀಸರು ಜೀಪ್ ತಡೆಯುತ್ತಾರೆ ಎಂದು ಜೀಪಿನಿಂದ ಇನೋವಾ ಕಾರಿಗೆ ಹತ್ತಿಕೊಂಡಿದ್ದ ದರ್ಶನ್. ಹೀಗಾಗಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾದ ದರ್ಶನ್ ಅವರನ್ನು ಬಂಧಿಸಿರುವ ಮಾಹಿತಿ ಅಧಿಕೃತವಾಗಿ ಹೊರಬೀಳಬೇಕಿದೆ ಅಷ್ಟೇ.ಅರ್ಜುನ್ ತೆಂಡೂಲ್ಕರ್ & ಸಾನಿಯಾ ಚಂಡೋಕ್ ನಿಶ್ಚಿತಾರ್ಥ: ಅರ್ಜುನ್ ವಯಸ್ಸು ಎಷ್ಟು.?
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಈ ಹಿಂದೆ ಕರ್ನಾಟಕ ಹೈಕೋರ್ಟ್ 14 ಆರೋಪಿಗಳಿಗೂ ಜಾಮೀನನ್ನು ಮಂಜೂರು ಮಾಡಿದ್ದು, ಆದರೆ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿ ಆರೋಪಿಗಳನ್ನು ಮತ್ತೆ ಬಂಧಿಸುವಂತೆ ಹಾಗೂ ವಿಚಾರಣೆ ಮುಂದುವರಿಸುವಂತೆ ಆದೇಶ ಮಾಡಿದೆ.