ಕಾಂಗ್ರೆಸ್ ಮುಖ್ಯಸ್ಥ ಹಾಗೂ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆಯವರು ದೇಶದ ಜನರಿಗೆ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳನ್ನು ಕೋರಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸರ್ವರಿಗೂ ಸುಖ-ಶಾಂತಿ ಲಭಿಸಲಿ, ಶಾಂತಿ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳುವಲ್ಲಿ ಸಂತೋಷ ಹಾಗೂ ಸಮೃದ್ದಿಯು ಫಲಿಸಲಿ ಎಂದು ಹಬ್ಬದ ಈ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ.
ದೇಶದ ವಿವಿಧೆಡೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮಾಚರಣೆ ಜರುಗುತ್ತಿದ್ದು, ಮಥುರಾ ಮತ್ತು ಬೃಂದಾವನಗಳಲ್ಲಿ ವಿಶೇಷವಾಗಿ ಕೃಷ್ಣನ ಪವಿತ್ರ ಕ್ಷೇತ್ರಗಳಲ್ಲಿ ಮಹತ್ವದ ಆಚರಣೆಯ ಸಂದರ್ಭದಲ್ಲಿ ದೇಶದ ಪ್ರಧಾನಿ, ರಾಷ್ಟ್ರಪತಿ ಹಾಗೂ ಪ್ರಮುಖರು ಸೇರಿದಂತೆ, ಜನ್ಮಾಷ್ಟಮಿಯ ದಿನದಂದು ಶುಭಾಶಯಗಳನ್ನು ಕೋರಿದ್ದಾರೆ. ಸರಳ ಜಿಎಸ್ಟಿ ರಚನೆಗೆ ಸರ್ಕಾರದ ಒತ್ತಡ: ಯಾವ ವಸ್ತುಗಳ ಬೆಲೆ ಕಡಿಮೆಯಾಗಬಹುದು?
ಕೃಷ್ಣನು ಜನಜೀವನದ ಸಾರವನ್ನು ಅರಿತವನು. ಸ್ವಯಂ ತನ್ನ ಜೀವನ ಮತ್ತು ಅದರ ಕುರಿತ ಬೋಧನೆಗಳ ಸಂದೇಶ ಸಾರಿದವನು, ಧರ್ಮದ ಸಾಕಾರವನ್ನು ಮೂರ್ತಗೊಳಿಸುವ ಅನಂತ ಸತ್ಯವನ್ನು ತಿಳಿಸಿ, ಬದುಕಿನ ಸನ್ಮಾರ್ಗದ ಕಣ್ದೆರಿಸಿದಂಥ ಪಾರ್ಥನ ಗೆಳೆಯನಿವನು. ಈ ದಿನ ಸಂಪನ್ನವಾಗಲು ಎಲ್ಲರಿಂದ ಹೃತ್ಪೂರ್ವಕ ಶುಭಕಾಮನೆಗಳು ಕೇಳಿಬಂದಿವೆ.