ನಟಿ ರಮ್ಯಾ ನಟ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ದರ್ಶನ್ ಹಳೆಯ ದಿನಗಳಲ್ಲಿ ತುಂಬಾ ಒಳ್ಳೆಯವರು. ಲೈಟ್ ಮ್ಯಾನ್ ಆಗಿ ಸಿನಿಮಾ ಕ್ಷೇತ್ರಕ್ಕೆ ಬಂದು ತಮ್ಮ ಪರಿಶ್ರಮದಿಂದ ಯಶಸ್ಸು ಪಡೆದವರು. ರಮ್ಯಾ ಅವರ ಜೊತೆ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇತ್ತೀಚಿನ ಘಟನೆಗಳು ಮತ್ತು ದರ್ಶನ್ ಅರೆಸ್ಟ್ ವಿಚಾರ ಕೇಳಿದಾಗ ಅವರಿಗೆ ತುಂಬಾ ಬೇಸರ ಆಯ್ತು. ರಮ್ಯಾ ಅಭಿಪ್ರಾಯದಲ್ಲಿ ದರ್ಶನ್ ತಮ್ಮ ಜೀವನವನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ.
ಪವಿತ್ರ ಗೌಡ ಕುರಿತು ಮಾತನಾಡಿದ ರಮ್ಯಾ ಅವರಿಗೆ ಈ ಪ್ರಕರಣದ ಮೊದಲು ಅವರ ಬಗ್ಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಪ್ರಕರಣ ಹೊರಬಂದ ಬಳಿಕವೇ ಪವಿತ್ರ ಗೌಡ ಬಗ್ಗೆ ತಿಳಿದುಕೊಂಡರು. ಅವರು ಒಬ್ಬ ತಾಯಿ ಮತ್ತು ಅವರಿಗೆ ಮಗಳು ಇದ್ದಾರೆ. ಆದರೆ ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರೆತಂತಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೆ ಮತ್ತು ನ್ಯಾಯಾಂಗದ ಮೇಲೆ ಜನರ ನಂಬಿಕೆ ಹೆಚ್ಚುವಂತಾಗಿದೆ ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.
'ಪರಂ ಸುಂದರಿ'ಗೆ ಬಿಡುಗಡೆಗಿಂತ ಮುನ್ನವೇ ವಿವಾದ..ಸಿದ್ದಾರ್ಥ್-ಜಾನ್ವಿ ಕಪೂರ್ ಸಿನಿಮಾಗೆ ಏನಿದು ಸಂಕಷ್ಟ?
ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರ ವರ್ತನೆ ನೋಡಿದಾಗ ತಮಗೆ ಖಿನ್ನತೆ ಆಯ್ತು ಎಂದು ರಮ್ಯಾ ಹೇಳಿದ್ದಾರೆ. ಅವರ ಸುತ್ತಮುತ್ತ ಒಳ್ಳೆಯವರು ಇಲ್ಲದಂತಿದೆ ಅನ್ನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸೆಲೆಬ್ರಿಟಿಗಳು ಜನರ ಮುಂದೆ ಸ್ವಲ್ಪ ಜವಾಬ್ದಾರಿಯಿಂದ ಬದುಕಬೇಕು ಎಂಬುದನ್ನು ಅವರು ನೆನಪಿಸಿದ್ದಾರೆ. ಜನರಿಗೆ ಮಾದರಿಯಾಗುವಂತೆ ವರ್ತಿಸಬೇಕು ಎಂದು ರಮ್ಯಾ ತಮ್ಮ ಮಾತಿನಲ್ಲಿ ತಿಳಿಸಿದ್ದಾರೆ.