ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಹೆಸರು ಕೇಳಿಬಂದಿರುವ ಕಾರಣ, ಈ ಘಟನೆ ಅವರ ತಂದೆ, ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರಿಗೆ ಸಹ ಸಂಕಷ್ಟ ತಂದಿದೆ. ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ಅಧಿಕಾರಿಗಳು ರಾಮಚಂದ್ರ ರಾವ್ ಅವರನ್ನು ಮ್ಯಾರಥಾನ್ ವಿಚಾರಣೆಗೆ ಕರೆಯಲಾಗಿದೆ.
ಡಿಆರ್ಐ ಅಧಿಕಾರಿಗಳು ರನ್ಯಾ ರಾವ್ ಈ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಯಾವ ರೀತಿಯ ಭಾಗವಹಿಸಿದ್ದರೋ ಆ ಬಗ್ಗೆ ಪ್ರಶ್ನಿಸಿದ್ದಾರೆ. ಜೊತೆಗೆ, ರಾಮಚಂದ್ರ ರಾವ್ ಅವರು ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪಗಳ ಕುರಿತು ಸಹ ವಿಚಾರಣೆ ನಡೆಸಲಾಗಿದೆ.
ಹೊಸ ಮನೆ ಮಾಡಿದ್ರಂತೆ ರಿಯಾಲಿಟಿ ಶೋ ಖ್ಯಾತಿಯ ದೀಪಿಕಾ! ಮನೆ ಹೆಸರು ಕೇಳಿದ್ರೆ ಶಾಕ್!
ಕಳೆದ ಎರಡು ತಿಂಗಳಲ್ಲಿ ರಾಮಚಂದ್ರ ರಾವ್ ದುಬೈಗೆ ಹಲವು ಬಾರಿ ಪ್ರಯಾಣಿಸಿದ್ದ ವಿಷಯವನ್ನು ಡಿಆರ್ಐ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಈ ಸಂಬಂಧವೂ ಅವರಿಗೆ ಪ್ರಶ್ನಿಸಲಾಗಿದೆ. ಆದರೆ, ಎಲ್ಲ ಪ್ರಶ್ನೆಗಳಿಗೆ ರಾಮಚಂದ್ರ ರಾವ್ ನಕಾರಾತ್ಮಕ ಉತ್ತರ ನೀಡಿರುವುದು ತಿಳಿದುಬಂದಿದೆ.
ಸಂಪೂರ್ಣ ಸಹಕಾರ ಸಿಗದ ಕಾರಣ, ಡಿಆರ್ಐ ಅಧಿಕಾರಿಗಳು ರಾಮಚಂದ್ರ ರಾವ್ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಕರೆಯಲು ನಿರ್ಧರಿಸಿದ್ದಾರೆ.