ಧರ್ಮಸ್ಥಳ; ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಇಂದು (ಆಗಸ್ಟ್ 23, 2025) ಸೌಜನ್ಯ ಕೊಲೆ ಪ್ರಕರಣ ಮತ್ತು ಧರ್ಮಸ್ಥಳದಲ್ಲಿ ಸಾಮೂಹಿಕ ಶವಗಳ ಸಮಾಧಿ ಆರೋಪಗಳ ಕುರಿತು ಮಾತನಾಡಿದ್ದಾರೆ. ವೀರೇಂದ್ರ ಹೆಗ್ಗಡೆ ಅವರು, "ಒಂದೊಂದೇ ಸತ್ಯಗಳು ಈಗ ಹೊರಗೆ ಬರುತ್ತಿವೆ. ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವು ಇದೀಗ ಬಯಲಾಗಿದೆ. ಕಪೋಲ ಕಲ್ಪಿತ ದೂರು ನೀಡಿದ ಆರೋಪಿಯ ಬಂಧನವು ಸತ್ಯಕ್ಕೆ ಬೆಳಕು ಚೆಲ್ಲಿದೆ. ಈ ಆರೋಪಗಳು ಸುಳ್ಳು ಮತ್ತು ಧರ್ಮದ ಉಳಿವಿಗಾಗಿ ಧರ್ಮಯುದ್ಧದ ಅಗತ್ಯವಿದೆ" ಎಂದು ಹೇಳಿದ್ದಾರೆ.BULLMER Striped Textured Printed Polo Neck Fullsleeve T-Shirt with Rib for Men
-ಮುಖ್ಯ ಅಂಶಗಳು-
- ಹೆಚ್ಚು ಮಾತನಾಡಲ್ಲ.
- ಟಿವಿಯಲ್ಲಿ ಬರ್ತಾ ಇದೆ ಬಹಳ ಸಂತೋಷ ಆಗಿದೆ
- ಸತ್ಯ ಎಲ್ಲರಿಗೂ ತಿಳಿದು ಬರುತ್ತಿದೆ
- ನಿಮ್ಮ ಅಭಿಮಾನ ಹೀಗೆ ಇರಲಿ
- ಸ್ವಾಮಿಗಳ ಆಶೀರ್ವಾದ ಹೀಗೆ ನಮ್ಮ ಮೇಲೆ ಇರಲಿ, ಎಲ್ಲರಿಗೂ ಧನ್ಯವಾದ.ALSO READ:ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಬಳಿ ಇದೆ 5 ದೇಶದ ಕರೆನ್ಸಿ ನೋಟುಗಳು: ED ಅರೆಸ್ಟ್: ಎಲ್ಲಿಂದ ಬಂತು ಸ್ವಾಮಿ ಇಷ್ಟೊಂದು ಹಣ?
ಅವರು ಕ್ಷೇತ್ರದ ಮೇಲಿನ ಅಭಿಮಾನವನ್ನು ಉಳಿಸಿಕೊಳ್ಳುವಂತೆ ಭಕ್ತರಿಗೆ ಕರೆ ನೀಡಿದ್ದಾರೆ ಮತ್ತು ಎಸ್ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ.