ಸೆಪ್ಟೆಂಬರ್ 3, 2025 ರಂದು ವಕೀಲ ಸುನೀಲ್ ಅವರು ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ವರ್ಗಾಯಿಸುವ ಪೊಲೀಸರ ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಉಳಿದ ಕೈದಿಗಳು ಇದೇ ಜೈಲಿನಲ್ಲಿದ್ದರೂ ದರ್ಶನ್ರನ್ನು ಸ್ಥಳಾಂತರಿಸಲು ಏಕೆ ಇಷ್ಟು ಆತುರ ಎಂದು ಅವರು ಪ್ರಶ್ನಿಸಿದರು.
ವಕೀಲರ ಪ್ರಕಾರ, ವಿಚಾರಣಾಧೀನ ಕೈದಿಗಳನ್ನು ವರ್ಗಾಯಿಸಲು ಜೈಲು ಅಧಿಕಾರಿಗಳಿಗೆ ಯಾವುದೇ ಅನುಮತಿ ಇಲ್ಲ. ದರ್ಶನ್ ಸೇರಿದಂತೆ ಯಾವುದೇ ಅರ್ಜಿದಾರರ ನಡವಳಿಕೆ ಸರಿಯಿಲ್ಲ ಎಂದು ಹೇಳಲು ಯಾವುದೇ ಆಧಾರಗಳಿಲ್ಲ ಎಂದು ಅವರು ಪ್ರತಿಪಾದಿಸಿದರು.
2024 ರಲ್ಲಿ, ದರ್ಶನ್ರನ್ನು ಬಳ್ಳಾರಿಗೆ ವರ್ಗಾಯಿಸಿದಾಗ 'ರಾಜತಿಥ್ಯ' ಆರೋಪ ಕೇಳಿಬಂದಿತ್ತು. ಆಗ ರೌಡಿಶೀಟರ್ಗಳೊಂದಿಗೆ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕೆ ವರ್ಗಾಯಿಸಲಾಗಿತ್ತು. ಆ ಸಮಯದಲ್ಲಿ, ಆರೋಪಿಗಳ ಮೇಲೆ ಮಾತ್ರವಲ್ಲದೆ, ಕೆಲ ಜೈಲು ಅಧಿಕಾರಿಗಳ ಮೇಲೂ ಪ್ರಕರಣ ದಾಖಲಾಗಿತ್ತು. ಇದನ್ನು ಮುಚ್ಚಿಟ್ಟಿದ್ದಕ್ಕೆ ಸುನೀಲ್ ಅಸಮಾಧಾನ ವ್ಯಕ್ತಪಡಿಸಿದರು.
NETFLX ವೆಬ್ ಸೀರಿಸ್ ಅಭಿಮಾನಿಗಳಿಗೆ ಗುಡ್ನ್ಯೂಸ್...ಹಲ್ಚಲ್ ಎಬ್ಬಿಸಲು ಬಂದಿದೆ "wednesday"!
2024ರ ಆಗಸ್ಟ್ 23ರಂದು ಸಿಸಿಬಿ ದಾಳಿ ನಡೆಸಿದಾಗ, ಜೈಲು ಅಧಿಕಾರಿಗಳೇ ಕೆಲವು ವಸ್ತುಗಳನ್ನು ಜೈಲಿನೊಳಗೆ ಪೂರೈಸುತ್ತಿರುವುದು ಬಯಲಾಗಿತ್ತು. ಈ ಆರೋಪದಲ್ಲಿ ಕೆಲ ಅಧಿಕಾರಿಗಳು ಅಮಾನತಾಗಿದ್ದರು. ದರ್ಶನ್ ಜೊತೆ ಕಾಣಿಸಿಕೊಂಡವರ ಪ್ರಕರಣಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಸುನೀಲ್ ಉಲ್ಲೇಖಿಸಿದರು.
ಸಾವಿರಾರು ಕೈದಿಗಳು ಕೇಂದ್ರ ಜೈಲಿನಲ್ಲಿದ್ದರೂ, ಅವರನ್ನು ವರ್ಗಾಯಿಸಲು ಯಾರೂ ಕೋರಿಲ್ಲ. ಜೈಲು ಪ್ರಾಧಿಕಾರವು ಸರಿಯಾಗಿದ್ದರೆ, ಈ ರೀತಿಯ ಸಮಸ್ಯೆಗಳು ಏಕೆ ಉದ್ಭವಿಸುತ್ತವೆ? ಎಂದು ಸುನೀಲ್ ಪ್ರಶ್ನಿಸಿದರು. ಇತರ ಕೈದಿಗಳ ಬಗ್ಗೆ ಕಾಳಜಿ ವಹಿಸದೆ ದರ್ಶನ್ರನ್ನು ಮಾತ್ರ ಏಕೆ ವರ್ಗಾಯಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.