ಮದ್ದೂರಿನಲ್ಲಿ ಉಂಟಾದ ಗಣೇಶ ವಿಸರ್ಜನೆ ಸಂದರ್ಭದ ವೇಳೆ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನಾಸ್ಥಳದ ಉದ್ವಿಗ್ನತೆ ಮನಗಂಡು ಇಂದು ಬಂದ್ಗೆ ಕರೆ ನೀಡಲಾಗಿದೆ. ಇದೇ ವೇಳೆ ಈ ಅವಘಡಕ್ಕೆ ರಾಜಕೀಯ ಜಟಾಪಟಿಗಳು ಜೋರಾಗಿವೆ. ಈ ಕೋಮುಘರ್ಷಣೆಗೆ ಮೂಲ ಕಾರಣವಾದರೂ ಯಾರು ಎಂಬ ಬಗ್ಗೆ ಪ್ರತಿಪಕ್ಷಗಳು ಅನ್ಯಧರ್ಮೀಯ ಧೋರಣೆಗಳಿಗೆ ಎಡೆಮಾಡಿಕೊಟ್ಟಿದೆ ಎನ್ನಲಾಗಿದೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚೆಲುವನಾರಾಯಣಸ್ವಾಮಿ ಹಾಗೂ ಗೃಹ ಸಚಿವರಾದ ಜಿ. ಪರಮೇಶ್ವರ್ ಸೇರಿದಂತೆ ಆಡಳಿತ ಕಾಂಗ್ರೆಸ್ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ಈ ಘಟನೆಗೆ ನೈಜ ಕಾರಣಕರ್ತರು ಯಾರೆಂಬ ಪ್ರಶ್ನೆಗೆ ಕೋಮುಗಲಭೆಯ ವಿರುದ್ದ ವಾದ-ವಿವಾದಗಳು ಸೃಷ್ಟಿಯಾಗಿರುವ ನಡುವಲ್ಲಿ ವಿರೋಧ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಂದ ಆರೋಪಗಳು ಕೇಳಿಬಂದಿವೆ ಎನ್ನಲಾಗಿದೆ.
ಒಂದೆಡೆ, ಬಿಜೆಪಿ ಇದರಲ್ಲಿ ಪ್ರೀ ಪ್ಲ್ಯಾನ್ ನಡೆಸಿದೆ, ವಿರೋಧ ಪಕ್ಷಗಳು ಪ್ರಚೋದನೆ ಮಾಡಿದೆ ಎಂದು ಕಾಂಗ್ರೆಸ್ಸಿಗರು ಅರುಹುತ್ತಿದ್ದರೆ; ಗಲಭೆ ಆರಂಭಿಸಿದ್ದು ಮುಸಲ್ಮಾನರು ಆದರೂ ಹಿಂದೂಗಳನ್ನು ಇದಕ್ಕೆ ದೂಷಿಸಲಾಗುತ್ತಿದೆ ಎಂದು ಆಡಳಿತ ಪಕ್ಷವನ್ನು ಬಿಜೆಪಿ ಪಡೆ ತರಾಟೆಗೆ ತೆಗೆದುಕೊಂಡಿದೆ. ಜಾತ್ಯಾತೀತ ಹೆಸರಿನಲ್ಲಿ ದೊಂಬಲು ನಡೆಸುತ್ತಿರುವ ಸರ್ಕಾರವನ್ನು ಅಲ್ಲಗೆಳೆದು ಪ್ರಮುಖ ಬಿಜೆಪಿ ನಾಯಕರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿ ಸೇರಿ ಕರ್ನಾಟಕದ 13 ಜಿಲ್ಲೆಗಳಲ್ಲಿ ವರುಣನ ಆರ್ಭಟ..!