ಕ್ರಿಕೆಟ್: ಭಾರತ-ಪಾಕಿಸ್ತಾನ ಏಷ್ಯಾ ಕಪ್ ಟಿ20 ಪಂದ್ಯ ನಡೆಯಲಿ: ಸುಪ್ರೀಂ ಕೋರ್ಟ್ ಹೇಳಿಕೆ
ಭಾರತೀಯ ಸುಪ್ರೀಂ ಕೋರ್ಟ್ ಏಷ್ಯಾ ಕಪ್ T20 ಟೂರ್ನಿಯ ಭಾಗವಾಗಿ ಸೆಪ್ಟೆಂಬರ್ 14ರಂದು ದುಬೈಯಲ್ಲಿ ನಡೆಯುವ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ರದ್ದುಪಡಿಸುವಂತೆ ಕೋರಿರುವ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಅನ್ನು ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ವಿಜಯ್ ಬಿಶನೊಯಿ ಅವರ ಬೆಂಚ್, "ಪಂದ್ಯ ನಡೆಯಲಿ" ಎಂದು ಹೇಳಿದೆ.YUISI Sun Hat for Men Women, Breathable Summer Hat for Travel, Hiking, Gardening, Sun Hats for Men & Round Sun Cap for Hiking, Hats for Women Indoor Outdoor Activities
ಏಷ್ಯಾಕಪ್ ಅಂಗವಾಗಿ ಸೆಪ್ಟೆಂಬರ್ 14ರಂದು ದುಬೈನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಟಿ20 ಕ್ರಿಕೆಟ್ ಪಂದ್ಯ ರದ್ದುಗೊಳಿಸಲು ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ (ಪಿಐಎಲ್) ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪಹಲ್ಗಾಮ್ ದಾಳಿ ಮತ್ತು ‘ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ಆಯೋಜಿಸುವುದು ರಾಷ್ಟ್ರದ ಗೌರವ ಮತ್ತು ಸಾರ್ವಜನಿಕ ಭಾವನೆಗೆ ಸಂಬಂಧಿಸಿದಂತೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.ಸಶಸ್ತ್ರ ಸೀಮಾ ಬಲ (SSB) ಇದುವರೆಗೆ ನೇಪಾಳದ ಜೈಲುಗಳಿಂದ ಪರಾರಿಯಾದ 35 ಕೈದಿಗಳನ್ನು ವಶಕ್ಕೆ ಪಡೆದಿದೆ: ಆದರೆ ಇನ್ನೂ ಹೆಚ್ಚುತ್ತಲೇ ಇದೆ ಈ ಸಂಖ್ಯೆ
ರಾಷ್ಟ್ರೀಯ ಹಿತಾಸಕ್ತಿ, ನಾಗರಿಕರ ಜೀವನ ಅಥವಾ ಯೋಧರ ತ್ಯಾಗಕ್ಕಿಂತ ಕ್ರಿಕೆಟ್ ಮಿಗಿಲಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯಿದೆ 2025ರ ಅನುಷ್ಠಾನಕ್ಕೆ ನಿರ್ದೇಶನ ನೀಡುವಂತೆಯೂ ಮನವಿ ಮಾಡಲಾಗಿತ್ತು. ವಕೀಲರಾದ ಸ್ನೇಹಾ ರಾಣಿ, ಅಭಿಷೇಕ್ ವರ್ಮಾ ಮತ್ತು ಎಂಡಿ ಅನಸ್ ಚೌಧರಿ ಅವರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.
ಹೀಗಾಗಿ ಏಷ್ಯಾ ಕಪ್ನಲ್ಲಿ ಭಾರತ ತನ್ನ ಎರಡನೇ ಪಂದ್ಯದಲ್ಲಿ ಸೆ.14 ರಂದು ಪಾಕ್ನ ವಿರುದ್ದ ಸೆಣಸಾಡಲಿದೆ.