ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಾದ 'ನಾ ನಿನ್ನ ಬಿಡಲಾರೆ' ಮತ್ತು 'ಅಮೃತಧಾರೆ'ಯಲ್ಲಿ ಏಕಕಾಲದಲ್ಲಿ ಮಹತ್ವದ ತಿರುವುಗಳು ಸಂಭವಿಸಿವೆ. 'ನಾ ನಿನ್ನ ಬಿಡಲಾರೆ'ಯಲ್ಲಿ ದುರ್ಗಾಳ ಪ್ರಾಣಕ್ಕೆ ಕುತ್ತು ಬಂದಿದ್ದರೆ, 'ಅಮೃತಧಾರೆ'ಯಲ್ಲಿ ಗೌತಮ್ ದೀವಾನ್ ಜೀವನ ಸಂಪೂರ್ಣ ಬದಲಾಗಿದೆ.
'ಅಮೃತಧಾರೆ' ಧಾರಾವಾಹಿಯಲ್ಲಿ, ಗೌತಮ್ ದೀವಾನ್ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದವರು ಈಗ ಕಾರ್ ಡ್ರೈವರ್ ಆಗಿ ಬದಲಾಗಿದ್ದಾರೆ. ಭೂಮಿಕಾ ಮನೆ ಬಿಟ್ಟು ಹೋಗಿರುವುದೇ ಈ ಸ್ಥಿತ್ಯಂತರಕ್ಕೆ ಕಾರಣ. ಗೌತಮ್, ಭೂಮಿಕಾಳನ್ನು ಹುಡುಕುವ ಏಕೈಕ ಉದ್ದೇಶದಿಂದ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದಾರೆ.
Symbol Premium Men's Cotton Stretch Jeans (Regular Fit)
ಅವರು ಬಾಡಿಗೆ ಕಾರನ್ನು ಓಡಿಸುತ್ತಾ ಭೂಮಿಕಾಳನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ. ಸದ್ಯ ಅವರು ಕುಶಾಲನಗರಕ್ಕೆ ತೆರಳುವ ಪರಿಸ್ಥಿತಿ ಬಂದಿದ್ದು, ಅಲ್ಲಿ ಭೂಮಿಕಾ ಎದುರಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಧಾರಾವಾಹಿ ತಂಡ ತಿಳಿಸಿದೆ.
ಜರ್ಮನ್ ಸ್ಪರ್ಮ್ ಬ್ಯಾಂಕ್ ಸಹಾಯದಿಂದ ಗಂಡು ಮಗುವಿನ ಜನ್ಮಕೊಟ್ಟ ಖ್ಯಾತ ಸಿಂಗರ್: ಇಲ್ಲಿದೆ ಮಾಹಿತಿ
ಇನ್ನು 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ದುರ್ಗಾ ಮತ್ತು ಶರತ್ ವಿವಾಹವಾಗಿದ್ದು, ಮಾಯಾ ಕೋಮಾದಿಂದ ಎಚ್ಚರಗೊಂಡಿದ್ದಾರೆ. ಶರತ್ನನ್ನು ಮದುವೆಯಾಗಬೇಕಿದ್ದ ಮಾಯಾ, ಎಚ್ಚರವಾದ ತಕ್ಷಣ ಗನ್ ಹಿಡಿದು ದುರ್ಗಾಳ ಹಣೆಗಿಟ್ಟು, "ನಾನು ಏನೇ ಆದರೂ ಒಂದಿಚೂ ಕದಲಲ್ಲ" ಎಂದು ಬೆದರಿಕೆಯೊಡ್ಡಿದ್ದಾರೆ.
ಈ ಸಂದರ್ಭದಲ್ಲಿ ಮಾಯಾ ಗುಂಡು ಹಾರಿಸುತ್ತಾಳಾ ಅಥವಾ ಅಂಬಿಕಾ ತನ್ನ ಶಕ್ತಿಯಿಂದ ಅದನ್ನು ತಡೆಯುತ್ತಾಳಾ ಎಂಬುದು ಕುತೂಹಲ ಮೂಡಿಸಿದೆ. ಒಂದು ವೇಳೆ ಅಂಬಿಕಾ ಮಧ್ಯಪ್ರವೇಶಿಸಿದರೆ, ಆಕೆಯ ಅಸ್ತಿತ್ವ ಎಲ್ಲರಿಗೂ ತಿಳಿಯಲಿದೆ.