ಸಚಿವ ಶ್ರೀ ಸಂತೋಷ್ ಲಾಡ್ರಿಂದ ಕೂಡಗು ಪ್ರವಾಸ: ಕೊಡಗಿನ ಕಾಫಿ ಬೆಳೆಗಾರರು & ಹೋಂ ಸ್ಟೇ ನಿರ್ವಹಣಗಾರರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ.
ಕೊಡಗು: ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ವರ್ಷಗಟ್ಟಲೆ ತೊಂದರೆ ಆಗುವುದು ಮಾಮೂಲಿ, ಹೀಗಾಗಿ ಅಲ್ಲಿನ ಕಾಫಿ ತೊಟದ ಬೆಳೆಗಾರರು ಮತ್ತು ಹೋಮ್ ಸ್ಟೇ ಮಾಲೀಕರು ತಾವು ಅನಭವಿಸುತ್ತಿರುವ ತೊಂದರೆಗಳನ್ನು ಸಚಿವರಾದ ಮಾನ್ಯ ಸಂತೋಷ್ ಲಾಡ್ ಅವರಿಗೆ ತಿಳಿಸಿದ್ದಾರೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+
ಕೊಡಗು ಜಿಲ್ಲೆಯ ಪ್ರವಾಸದಲ್ಲಿರುವ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ರವರ ಅಧ್ಯಕ್ಷತೆಯಲ್ಲಿ ಇಂದು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೊಡಗು ಜಿಲ್ಲೆಯ ಹೋಂ ಸ್ಟೇ ನಿರ್ವಹಣೆಗಾರರ, ಕಾಫಿ ಬೆಳೆಗಾರ ಪ್ರತಿನಿಧಿಗಳು ಮತ್ತು ಕಾಫಿ ತೋಟದ ಮಾಲೀಕರು ಸೇರಿದಂತೆ ವಿವಿಧ ಸಂಸ್ಥೆಗಳ ಸದಸ್ಯರ ಸಭೆ ಜರುಗಿತು.ಸಭೆಯಲ್ಲಿ ವಿವಿಧ ಸಂಸ್ಥೆಗಳ ಮುಖಂಡರುಗಳು ತಮ್ಮ ಸಮಸ್ಯೆಗಳ ಕುರಿತು ಮಾನ್ಯ ಸಚಿವರಿಗೆ ಅಹವಾಲು ಸಲ್ಲಿಸಿದರು.ಇದನ್ನು ಓದಿ:ಬಾಂಗ್ಲಾದೇಶ vs ಅಫ್ಘಾನಿಸ್ತಾನ, ಏಷ್ಯಾ ಕಪ್ 2025, ಪಂದ್ಯ 9 – ಸಾರಾಂಶ ಹೀಗಿದೆ
ಸಭೆಯಲ್ಲಿ ಶಾಸಕರಾದ ಶ್ರೀ ಮಂತರ್ ಗೌಡ, ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಕೆ ರಾಮರಾಜನ್, ಕಾರ್ಮಿಕ ಆಯುಕ್ತರಾದ ಡಾ.ಎಚ್.ಕೆ. ಗೋಪಾಲಕೃಷ್ಣ, ಜಂಟಿ ಕಾರ್ಮಿಕ ಆಯುಕ್ತಾರಾದ ಡಾ.ಎಸ್.ಬಿ. ರವಿ ಕುಮಾರ್, ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಐಶ್ವರ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಆನಂದ್, ಉಪ ವಿಭಾಗಾಧಿಕಾರಿಗಳಾದ ಶ್ರೀ ನಿತಿನ್ ಚುಕ್ಕಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.