2012ರ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳ ಗ್ರಾಮದ ಜನರು ಸೌಜನ್ಯಾಳ ಮಾವ ವಿಠ್ಹಲ್ ಗೌಡ ವಿರುದ್ಧ SITಗೆ ದೂರು ಸಲ್ಲಿಸಿದ್ದಾರೆ. ಧರ್ಮಸ್ಥಳ ನಿವಾಸಿ ಸಂದೀಪ್ ರೈ ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ಭೇಟಿ ನೀಡಿ, ವಿಠಲ್ ಗೌಡ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ತಿಳಿಸಿರುವಂತೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಪವಿತ್ರ ವಾತಾವರಣ ಹಾಳಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ಕುರಿತು ಭಕ್ತಿಗಿಂತ ಅಪರಾಧಗಳು, ಅಸ್ಥಿಪಂಜರಗಳು ಮತ್ತು ಪಿತೂರಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಧರ್ಮಸ್ಥಳದ ಶಾಂತಿ ಮತ್ತು ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ.
ಎರಡು ಬಾರಿ ಬಂಗ್ಲೆ ಗುಡ್ಡೆಗೆ ಮಹಜರುಗಾಗಿ ಕರೆದೊಯ್ಯಲ್ಪಟ್ಟಿದ್ದ ವಿಠಲ್ ಗೌಡ, ತನಿಖೆ ನಡೆಯುತ್ತಿದ್ದಾಗಲೂ ಅಸ್ಥಿಪಂಜರಗಳು ಮತ್ತು ಮಾಟಮಂತ್ರದ ಬಗ್ಗೆ ಸೂಕ್ಷ್ಮ ಹೇಳಿಕೆಗಳನ್ನು ನೀಡಿದ್ದಾರೆ. ವಿಠಲ್ ಗೌಡ ಅವರು ಎಸ್ಐಟಿ ವಿಚಾರಣೆ ಮುಗಿದ ನಂತರ ಯೂಟ್ಯೂಬ್ ಚಾನೆಲ್ಗಳಿಗೆ ಸಂದರ್ಶನ ನೀಡಿ ವಿಡಿಯೋಗಳನ್ನು ಪ್ರಸಾರ ಮಾಡಿದ್ದಾರೆ. ಈ ವಿಡಿಯೋಗಳಲ್ಲಿ ಅವರು ತನಿಖೆಯ ವಿವರಗಳನ್ನು ಬಹಿರಂಗಪಡಿಸಿ, ಸಾಕ್ಷ್ಯಗಳನ್ನು ನಾಶ ಮಾಡಲು ಪ್ರಯತ್ನಿಸಿದ್ದಾರೆ.ಇದನ್ನು ಓದಿ: ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ: ಸುಪ್ರೀಂ ಕೋರ್ಟ್ನಲ್ಲಿ ಇಂದು ವಿಚಾರಣೆ!
ಎಸ್ಐಟಿ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡದಿರುವಾಗಲೂ ವಿಠಲ್ ಗೌಡ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿ ತನಿಖೆಯ ಹಾದಿಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಠಲ್ ಗೌಡ ಕೆಲವರೊಂದಿಗೆ ಸೇರಿ ತನಿಖೆಯ ಹಾದಿ ತಪ್ಪಿಸಲು ಷಡ್ಯಂತ್ರ ರೂಪಿಸಿದ್ದಾರೆ. ಬಂಗ್ಲೆಗುಡ್ಡೆನಲ್ಲಿ ಹಲವು ಅಸ್ಥಿಪಂಜರಗಳು ಮತ್ತು ತಲೆಬುರುಡೆಗಳನ್ನು ನೋಡಿದ್ದೇನೆ ಎಂದು ಹೇಳಿದರೂ, ಅದನ್ನು ಪೊಲೀಸರಿಗೆ ವರದಿ ಮಾಡಿಲ್ಲ.BULLMER Trendy Clothing Set with Shirt & Pants Co-ords for Men
ಅವರು ವಿಡಿಯೋ ರೆಕಾರ್ಡ್ ಮಾಡಿರುವುದಾಗಿ ಹೇಳುತ್ತಾರೆ, ಆದರೆ ಪೊಲೀಸರಿಗೆ ನೀಡಲು ನಿರಾಕರಿಸಿದ್ದಾರೆ. ಬಂಗ್ಲೆಗುಡ್ಡೆಯಿಂದ ತಲೆಬುರುಡೆಗಳನ್ನು ವೈಯಕ್ತಿಕವಾಗಿ ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರಿಗೆ ಈ ಸ್ಥಳಕ್ಕೆ ಹೋಗಲು ಯಾರು ಮಾರ್ಗದರ್ಶನ ನೀಡಿದರು, ಅವರ ನಿಜವಾದ ಉದ್ದೇಶವೇನು ಎಂಬುದಕ್ಕೆ ಅವರು ಉತ್ತರ ನೀಡಿಲ್ಲ. ಹೀಗಾಗಿ, ವಿಠಲ್ ಗೌಡ ವಿರುದ್ಧ ತನಿಖೆ ನಡೆಸಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.