ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ ನಡೆದ ತಪಾಸಣೆಯಲ್ಲಿ 41,000 ಮಕ್ಕಳಲ್ಲಿ ಜನ್ಮಜಾತ ಹೃದಯ ಖಾಯಿಲೆಗಳು ಪತ್ತೆಯಾಗಿವೆ. ಆದರೆ, ಆಘಾತಕರವಾಗಿ, ಅರ್ಧಕ್ಕಿಂತ ಕಡಿಮೆ ಮಕ್ಕಳಿಗೆ ಮಾತ್ರ ಸೂಕ್ತ ಚಿಕಿತ್ಸೆ ದೊರೆತಿದೆ. ರಾಜ್ಯದಲ್ಲಿ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸುಮಾರು 20,000 ಮಕ್ಕಳು ಚಿಕಿತ್ಸೆಯಿಂದ ವಂಚಿತರಾಗಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) ಅಡಿಯಲ್ಲಿ ಜನ್ಮಜಾತ ಹೃದಯ ರೋಗಗಳನ್ನು ಪತ್ತೆ ಮಾಡಲಾಗುತ್ತಿದೆ.
ಜನ್ಮಜಾತ ಹೃದಯ ಖಾಯಿಲೆ ಎಂದರೆ ಮಗು ಜನಿಸುವಾಗಲೇ ಹೃದಯದಲ್ಲಿ ತೊಂದರೆ ಇರುವ ಸ್ಥಿತಿ. ಗರ್ಭಾವಸ್ಥೆಯಲ್ಲಿಯೇ ಶಿಶುವಿನ ಹೃದಯದಲ್ಲಿ ಬೆಳವಣಿಗೆ ಸಂಬಂಧಿತ ದೋಷಗಳು ಕಾಣಿಸಿಕೊಂಡು ಜನನದ ನಂತರವೂ ಮುಂದುವರಿಯುತ್ತವೆ. ಈ ರೋಗಗಳನ್ನು RBSK ಕಾರ್ಯಕ್ರಮದಡಿ ಪತ್ತೆಹಚ್ಚಲಾಗುತ್ತದೆ ಮತ್ತು ಪೀಡಿತ ಮಕ್ಕಳನ್ನು ಉಚಿತ ಚಿಕಿತ್ಸೆ ನೀಡುವ ವಿಶೇಷ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮತ್ತು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯ ಮೂಲಕ ಮಕ್ಕಳಿಗೆ ಚಿಕಿತ್ಸೆ ದೊರಕುತ್ತಿದೆ.ಇದನ್ನು ಓದಿ: ಪೋಕ್ಸೊ ಪ್ರಕರಣ ವಿಚಾರ: ಆದೇಶವನ್ನು ಪ್ರಶ್ನಿಸಿ BS. ಯಡಿಯೂರಪ್ಪ ಅವರ ಅರ್ಜಿ ಇಂದು ಕರ್ನಾಟಕ ಹೈಕೋರ್ಟ್ನಲ್ಲಿ ವಿಚಾರಣೆ
ಆದಾಗ್ಯೂ, ಪ್ರತಿ ಮಗುವಿನ ನಿರಂತರ ಪತ್ತೆ ಮತ್ತು ಮೇಲ್ವಿಚಾರಣೆ ದೊಡ್ಡ ಸವಾಲಾಗಿದ್ದು, ಅನೇಕ ಕುಟುಂಬಗಳು ಚಿಕಿತ್ಸೆಯ ನಂತರ ಸಮಾಲೋಚನೆಗೆ ಬರುವುದಿಲ್ಲ ಅಥವಾ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವುದಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು, ಗರ್ಭದಲ್ಲಿಯೇ ನಿಯಮಿತ ಸ್ಕ್ಯಾನಿಂಗ್ ಮೂಲಕ ಜನ್ಮಜಾತ ಹೃದಯ ಸಮಸ್ಯೆಗಳನ್ನು ಪತ್ತೆಹಚ್ಚಬಹುದಾದರೂ, ಜನನದ ನಂತರ ದಾಖಲೆ ನಿರ್ವಹಣೆ ತೊಂದರೆ ಉಂಟುಮಾಡುತ್ತಿದೆಯೆಂದು ಹೇಳಿದ್ದಾರೆ. ಸ್ಕಾನಿಂಗ್ನಲ್ಲಿ ಕಂಡ ಯಾವುದೇ ಅಸಹಜತೆಗಳನ್ನು ಸರ್ಕಾರಿ ದತ್ತಾಂಶದೊಂದಿಗೆ ಸೇರಿಸುವಂತೆ ಸೂಚಿಸಲಾಗಿದೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women
ವೈದ್ಯಕೀಯ ತಜ್ಞರು, ಜನ್ಮಜಾತ ಹೃದಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚಿ ತಕ್ಷಣ ಚಿಕಿತ್ಸೆ ನೀಡಿದರೆ ಮಕ್ಕಳು ಸಾಮಾನ್ಯ ಜೀವನ ನಡೆಸಬಹುದೆಂದು ಹೇಳಿದ್ದಾರೆ. ತಾಯಂದಿರ ಆರೈಕೆ, ಮಕ್ಕಳನ್ನು ನಿರಂತರವಾಗಿ ಗಮನಿಸುವುದು ಮತ್ತು ಆರೋಗ್ಯ ಕಾರ್ಯಕ್ರಮಗಳ ಉತ್ತಮ ಸಮನ್ವಯದಿಂದ ಸಾವಿರಾರು ಮಕ್ಕಳ ಜೀವನ ಮಟ್ಟವನ್ನು ಸುಧಾರಿಸಬಹುದು.