Skip to main content
ವಿಡಿಯೋ
1/2
crime

ಚಂಡೀಗಢ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಪತ್ನಿಯ ಗಂಭೀರ ಆರೋಪ...ಡಿಜಿಪಿ ಹಾಗೂ ಎಸ್‌ಪಿ ವಿರುದ್ಧ FIR!

By Gireesh Vasishta
ಚಂಡೀಗಢ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಪತ್ನಿಯ ಗಂಭೀರ ಆರೋಪ...ಡಿಜಿಪಿ ಹಾಗೂ ಎಸ್‌ಪಿ ವಿರುದ್ಧ FIR!

ಐಪಿಎಸ್ ಅಧಿಕಾರಿ ವೈ. ಪುರಾನ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ ಅಮ್ನಿತ್ ಪಿ. ಕುಮಾರ್ ಡಿಜಿಪಿ ಹಾಗೂ ಎಸ್‌ಪಿ ವಿರುದ್ಧ ಪ್ರಚೋದನೆ ಮತ್ತು ಜಾತಿ ಆಧಾರಿತ ಕಿರುಕುಳದ ಆರೋಪ ಮಾಡಿದ್ದಾರೆ.

ಐಪಿಎಸ್ ಅಧಿಕಾರಿ ವೈ. ಪುರಾನ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣವು ಇದೀಗ ಹೊಸ ತಿರುವು ಪಡೆದಿದೆ. ಅವರ ಪತ್ನಿ ಹಾಗೂ ಐಎಎಸ್ ಅಧಿಕಾರಿ ಅಮ್ನಿತ್ ಪಿ. ಕುಮಾರ್ ಅವರು ಹರಿಯಾಣದ ಡಿಜಿಪಿ ಶತ್ರುಜೀತ್ ಸಿಂಗ್ ಕಪೂರ್ ಮತ್ತು ರೋಹ್ಟಕ್ ಎಸ್‌ಪಿ ನರೇಂದ್ರ ಬಿಜರ್ನಿಯಾ ವಿರುದ್ಧ ಪ್ರಚೋದನೆ ಮತ್ತು ಕಿರುಕುಳದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಪತಿಯ ಸಾವಿಗೆ ಈ ಇಬ್ಬರು ಅಧಿಕಾರಿಗಳ ನೇರ ಪಾತ್ರವಿದೆ ಎಂದು ಅಮ್ನಿತ್ ದೂರಿನಲ್ಲಿ ತಿಳಿಸಿದ್ದಾರೆ. ಅವರು ತಮ್ಮ ಪತಿಗೆ ಜಾತಿ ಆಧಾರಿತ ನಿಂದನೆ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಆರೋಪಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.TRASE Block Heels Sandals For Women, Dusky Stylish & Comfortable Footwear

 

ಅಮ್ನಿತ್ ಕುಮಾರ್ ಪ್ರಸ್ತುತ ಹರಿಯಾಣ ಸರ್ಕಾರದ ವಿದೇಶಾಂಗ ಸಹಕಾರ ಇಲಾಖೆಯ ಆಯುಕ್ತರಾಗಿದ್ದು, ಘಟನೆ ನಡೆದ ಸಮಯದಲ್ಲಿ ಮುಖ್ಯಮಂತ್ರಿ ನಯಾಬ್ ಸೈನಿ ನೇತೃತ್ವದ ನಿಯೋಗದೊಂದಿಗೆ ಜಪಾನ್ ಪ್ರವಾಸದಲ್ಲಿದ್ದರು. ಚಂಡೀಗಢದ ಸೆಕ್ಟರ್ 11ರ ಮನೆಯಲ್ಲಿ ಪುರಾನ್ ಕುಮಾರ್ ಅವರು ಸ್ವಂತ ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದರು. ಅವರ ಮಗಳು ತಂದೆಯ ಮೃತದೇಹವನ್ನು ನೆಲಮಾಳಿಗೆಯಲ್ಲಿ ಕಂಡು ಘಟನೆ ಬಹಿರಂಗಗೊಂಡಿತು. ಘಟನಾ ಸ್ಥಳದಲ್ಲಿ ದೊರೆತ ಎಂಟು ಪುಟಗಳ ಪತ್ರದಲ್ಲಿ ಅವರು ಕೆಲವು ಹಿರಿಯ ಅಧಿಕಾರಿಗಳಿಂದ ತಮಗೆ ನೀಡಲಾಗುತ್ತಿದ್ದ ಕಿರುಕುಳದ ವಿವರ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಇದನ್ನು ಓದಿ: ಆನ್‌ಲೈನ್ ಪೋಕರ್ ಗೇಮಿಂಗ್ ಸೈಟ್ ಹ್ಯಾಕಿಂಗ್: ಹ್ಯಾಕರ್ ಶ್ರೀಕಿಯ ವಿರುದ್ಧ ಕರ್ನಾಟಕ ಪೊಲೀಸರಿಂದ ಚಾರ್ಜ್‌ಶೀಟ್

 

2001ರ ಬ್ಯಾಚ್‌ನ ಅಧಿಕಾರಿ ಪುರಾನ್ ಕುಮಾರ್ ತಮ್ಮ ಪತ್ರದಲ್ಲಿ ಸೇವೆಯಲ್ಲಿರುವ ಮತ್ತು ನಿವೃತ್ತರಾದ 10 ಅಧಿಕಾರಿಗಳ ವಿರುದ್ಧ ಮಾನಸಿಕ ಹಿಂಸೆ ಮತ್ತು ಹುದ್ದೆಯ ದುರುಪಯೋಗದ ಆರೋಪ ಮಾಡಿದ್ದಾರೆ. ಪತಿಯ ಸಾವಿಗೆ ಕಾರಣರಾದ ಡಿಜಿಪಿ ಶತ್ರುಜೀತ್ ಸಿಂಗ್ ಕಪೂರ್ ಹಾಗೂ ಎಸ್‌ಪಿ ನರೇಂದ್ರ ಬಿಜರ್ನಿಯಾ ಅವರನ್ನು ತಕ್ಷಣ ಬಂಧಿಸಲು ಅಮ್ನಿತ್ ಆಗ್ರಹಿಸಿದ್ದಾರೆ. ಪ್ರಭಾವಿ ಅಧಿಕಾರಿಗಳಾದ ಇವರಿಂದ ಸಾಕ್ಷಿ ತಿರುಚುವ ಅಥವಾ ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಇದು ಸಾಮಾನ್ಯ ಆತ್ಮಹತ್ಯೆ ಪ್ರಕರಣವಲ್ಲ, ಎಸ್‌ಸಿ ಸಮುದಾಯದ ಅಧಿಕಾರಿಯ ಮೇಲಿನ ವ್ಯವಸ್ಥಿತ ಕಿರುಕುಳದ ಪರಿಣಾಮ, ಎಂದು ಹೇಳಿಕೆ ನೀಡಿದ್ದಾರೆ.