Skip to main content
ವಿಡಿಯೋ
1/3
general

ಕನ್ನೇರಿ ಶ್ರೀಗಳಿಗೆ ಡಬಲ್ ಶಾಕ್: ವಿಜಯಪುರ ಬಳಿಕ ಬಾಗಲಕೋಟೆಗೂ ಪ್ರವೇಶ ನಿಷೇಧ...!!

By Pavitra Ganapathi Baradavalli
ಕನ್ನೇರಿ ಶ್ರೀಗಳಿಗೆ ಡಬಲ್ ಶಾಕ್: ವಿಜಯಪುರ ಬಳಿಕ ಬಾಗಲಕೋಟೆಗೂ ಪ್ರವೇಶ ನಿಷೇಧ...!!

ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳಿಗೆ ಡಬಲ್ ಆಘಾತ ಕಾದಿದೆ. ವಿಜಯಪುರ ಜಿಲ್ಲೆಗೆ ಎರಡು ತಿಂಗಳ ನಿರ್ಬಂಧದ ನಂತರ, ಬಾಗಲಕೋಟೆ ಜಿಲ್ಲಾ ಪ್ರವೇಶಕ್ಕೂ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಇದರಿಂದ ಭಕ್ತರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಧಾರ್ಮಿಕ ಚಟುವಟಿಕೆಗಳು ಅಡಚಣೆಗೊಳಗಾಗಿವೆ.

ಬಾಗಲಕೋಟೆ: ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳಿಗೆ ಡಬಲ್ ಆಘಾತ ಕಾದಿದೆ. ವಿಜಯಪುರ ಜಿಲ್ಲೆಗೆ ಎರಡು ತಿಂಗಳ ನಿರ್ಬಂಧದ ನಂತರ, ಬಾಗಲಕೋಟೆ ಜಿಲ್ಲಾ ಪ್ರವೇಶಕ್ಕೂ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಇದರಿಂದ ಭಕ್ತರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಧಾರ್ಮಿಕ ಚಟುವಟಿಕೆಗಳು ಅಡಚಣೆಗೊಳಗಾಗಿವೆ.ವಿಜಯಪುರದಲ್ಲಿ ಸ್ವಾಮೀಜಿಯವರ ವಿವಾದಾಸ್ಪದ ಹೇಳಿಕೆಯಿಂದ ಉಂಟಾದ ಆಂದೋಲನಗಳ ಹಿನ್ನೆಲೆಯಲ್ಲಿ ಅಕ್ಟೋಬರ್‌ 16 ರಿಂದ ಡಿಸೆಂಬರ್ 14 ರವರೆಗೆ ನಿರ್ಬಂಧ ಹೇರಲಾಗಿತ್ತು.ಇದನ್ನೂ ಓದಿ: ಬೆಲ್ಜಿಯಂ ನ್ಯಾಯಾಲಯದ ಆದೇಶ: ದೇಶಭ್ರಷ್ಟರಲ್ಲಿ ಒಬ್ಬರಾದ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ


ಇದೇ ರೀತಿ, ಬಾಗಲಕೋಟೆಯಲ್ಲಿ ನಿರ್ಬಂಧ  ಹೇರಿ ಆದೇಶ ಹೊರಡಿಸಲಾಗಿದೆ, ಇದರ ಉದ್ಧೇಶ ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಉದ್ದೇಶ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸ್ವಾಮೀಜಿಯವರ ಹೇಳಿಕೆಯು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿ, ವಿಜಯಪುರ, ಬಸವಕಲ್ಯಾಣ, ಬೆಳಗಾವಿ ಸೇರಿದಂತೆ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ.ಇದನ್ನೂ ಓದಿ: ಕಾಂಗ್ರೆಸ್‌ ಟ್ವೀಟ್‌ ವಿವಾದ: ಪೇಮೆಂಟ್‌ ಸರ್ಟಿಫಿಕೇಟ್‌ ಡಿಲೀಟ್‌, ಸಿದ್ದರಾಮಯ್ಯ ಹೇಳಿಕೆಗೆ ಟೀಕೆ..!!


ನಿರ್ಬಂಧದಿಂದ ಬಸವನಬಾಗೇವಾಡಿ ಸಮರ್ಥ ಸದ್ಗುರು ಸಿದ್ದರಾಮೇಶ್ವರ ಮಹಾರಾಜರ ಪುಣ್ಯತಿಥಿ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಯವರ ಭಾಗವಹಿಸುವಿಕೆ ತಡೆಯಾಗಿದೆ. ಭಕ್ತರು ಆದೇಶವನ್ನು ಖಂಡಿಸಿ, ಕಾನೂನು ಹೋರಾಟ ನಡೆಸುವ ಸಾಧ್ಯತೆಯಿದೆ. ಘಟನೆಯು ಧಾರ್ಮಿಕ ನಾಯಕರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಕಟ್ಟುನಿಟ್ಟಾದ ನೀತಿಯನ್ನು ತೋರಿಸುತ್ತದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ.SWORNOF Women's Kanjivaram Soft Silk Banarasi Sarees With Unstiched Blouse Piece