ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ RSS ನಡೆಸಲು ಉದ್ದೇಶಿಸಿರುವ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ವಿವಾದ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು ಇಂದು ಮಹತ್ವದ ಮಧ್ಯಂತರ ಆದೇಶ ನೀಡಿದೆ.ಇದನ್ನೂ ಓದಿ: ಭಾರತ-ಟಿಬೆಟ್ ಗಡಿಯಲ್ಲಿ ಚೀನಾದ ಹೊಸ ಚಟುವಟಿಕೆ! ಪಾಂಗಾಂಗ್ ಸರೋವರದ ಬಳಿ ರಹಸ್ಯ ಕ್ಷಿಪಣಿ ಉಡಾವಣಾ ಕೇಂದ್ರ ನಿರ್ಮಾಣ!
ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಪೀಠವು, ಜಿಲ್ಲಾಡಳಿತವು ಅಕ್ಟೋಬರ್ 28 ಕ್ಕೆ ಎಲ್ಲಾ ಸಂಬಂಧಪಟ್ಟ ಸಂಘಟನೆಗಳ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಬೇಕು. ಆ ಸಭೆಯ ವರದಿಯನ್ನು ನಮಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಶಾಂತಿ ಸಭೆಯ ನಂತರ, ಜಿಲ್ಲಾಡಳಿತವು ಕೈಗೊಂಡ ಅಂತಿಮ ಕ್ರಮಗಳ ಕುರಿತು ಅಕ್ಟೋಬರ್ 30 ರಂದು ನಾವು ಪುನಃ ವಿಚಾರಣೆ ನಡೆಸುತ್ತೇವೆ.ಇದನ್ನೂ ಓದಿ: ಬಿಹಾರ ಚುನಾವಣೆ 2025: ಬಿಹಾರವನ್ನು ಬದಲಾಯಿಸಲು ನಮಗೆ ಒಂದು ಅವಕಾಶ ಕೊಡಿ..!
ಎಲ್ಲವೂ ಸೌಹಾರ್ದಯುತವಾಗಿ ಇತ್ಯರ್ಥವಾದರೆ, ನವೆಂಬರ್ 2 ರಂದು ಪಥಸಂಚಲನ ನಡೆಸಲು ಅವಕಾಶ ನೀಡಬಹುದು ಎಂದು ಪೀಠವು ಸೂಚಿಸಿದೆ. ಇದರಿಂದ ನವೆಂಬರ್ 2 ರಂದು ಪಥಸಂಚಲನ ನಡೆಸುವ ಕುರಿತು ಆರ್ ಎಸ್ ಎಸ್ ಗೆ ತಾತ್ಕಾಲಿಕ ಭರವಸೆ ದೊರೆತಂತಾಗಿದೆ.SGF11 Women's Kanjivaram Pure Soft Silk Saree For Women Pure Golden Zari With Blouse Piece