ಬೆಂಗಳೂರು : ಮಳೆಗಾಲ ಮುಗಿದರೂ ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳ (Potholes) ಸಮಸ್ಯೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಗುಂಡಿ ಸಮೇತದ ವಿಡಿಯೋ/ಫೋಟೋಗಳಿಂದ ಸರ್ಕಾರದ ವಿರುದ್ಧ ಜನರ ಆಕ್ರೋಶ ಹೆಚ್ಚಾಗಿದೆ.ಇದನ್ನೂ ಓದಿ: ಇಸ್ರೋದಿಂದ ಮತ್ತೊಂದು ಯಶಸ್ವಿ ಹೆಜ್ಜೆ: ಇಂದು ಸಂಜೆ ಬಾಹುಬಲಿ LVM3 ರಾಕೆಟ್ CMS-03 ಉಡಾವಣೆ..!!
ಗುಂಡಿಗಳನ್ನು ಮುಚ್ಚಲು ಮುಖ್ಯಮಂತ್ರಿಗಳು ಗಡುವು ನೀಡಿದ್ದರೂ, ಮುನ್ನೆಕೊಳಲು, ಬಾಲಗೆರೆ ಮುಖ್ಯ ರಸ್ತೆ, ಜಕ್ಕೂರು ಕೆರೆ ಬಳಿಯ ರಸ್ತೆ, ಹೆಬ್ಬಾಳ ಸರ್ವೀಸ್ ರಸ್ತೆ, ಹಾಗೂ ವೈಟ್ಫೀಲ್ಡ್, ಹೆಚ್ಎಸ್ಆರ್ ಲೇಔಟ್ನಂತಹ ಪ್ರಮುಖ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಗುಂಡಿಗಳು ಹಾಗೆಯೇ ಬಿದ್ದಿವೆ.ಇದನ್ನೂ ಓದಿ: ಭಾರತದಲ್ಲಿ ವಾಹನ ಮಾರಾಟದ ಹೊಸ ದಾಖಲೆ: ಅಕ್ಟೋಬರ್ 2025 ರಲ್ಲಿ ಗರಿಷ್ಠ ಮಟ್ಟ!
ಈ ವಿಡಿಯೋಗಳು ಗುಂಡಿಗಳ ಪ್ರಮಾಣ ಮತ್ತು ಸ್ಥಳದ ವಿವರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಕಿಡಿಕಾರಿದ್ದಾರೆ. ಬೆಂಗಳೂರಿನ ಜನತೆ ರಸ್ತೆ ಸಮಸ್ಯೆಯನ್ನು ಎತ್ತಿ ಹಿಡಿಯುವ ಮೂಲಕ ಆಡಳಿತದ ಮೇಲೆ ಒತ್ತಡ ಹೇರುತ್ತಿದ್ದಾರೆ.SWORNOF Women's Kanjivaram Soft Silk Banarasi Sarees With Unstiched Blouse Piece