ನವದೆಹಲಿ; ನವದೆಹಲಿ ವಿಶ್ವದ ಅತ್ಯಂತ ಮಾಲಿನ್ಯಗೊಂಡ ನಗರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಚಳಿಗಾಲದ ಆರಂಭದಲ್ಲಿ ಇಲ್ಲಿನ ವಾಯು ಗುಣಮಟ್ಟ ಸೂಚ್ಯಂಕ ಅತ್ಯಂತ ಕಳಪೆ ಅಥವಾ ತೀವ್ರ ಮಟ್ಟವನ್ನು ತಲುಪುತ್ತದೆ. ಈ ವಿಷಕಾರಿ ಗಾಳಿಯು ಒಂದು ದಿನಕ್ಕೆ 20 ಸಿಗರೇಟ್ ಸೇದಿದಷ್ಟೇ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.
ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಳವಾಗಿದೆ. ಮಕ್ಕಳು ಮತ್ತು ವೃದ್ಧರಿಗೆ ಉಸಿರಾಟದ ಸಮಸ್ಯೆಗಳು, ಗಂಟಲು ಕೆರೆತ, ಕಣ್ಣೀರು ತರಿಸುತ್ತಿದೆ. ಚಿಕಾಗೋ ವಿಶ್ವವಿದ್ಯಾಲಯದ ವರದಿಯ ಪ್ರಕಾರ, ಈ ಮಾಲಿನ್ಯದ ಮಟ್ಟದಿಂದ ದೆಹಲಿ ನಿವಾಸಿಗಳ ಆಯುಷ್ಯವು 11 ವರ್ಷಗಳವರೆಗೆ ಕಡಿಮೆಯಾಗುವ ಸಾಧ್ಯತೆಯಿದೆ.
2023 ರಲ್ಲಿ ದೆಹಲಿಯಲ್ಲಿ ಸಂಭವಿಸಿದ ಶೇ. 14ರಷ್ಟು ಸಾವುಗಳಿಗೆ ವಾಯು ಮಾಲಿನ್ಯವೇ ಕಾರಣ ಎಂದು ವರದಿಯಾಗಿದೆ.ದಟ್ಟವಾದ ಹೊಗೆಯ ಕಾರಣದಿಂದ ಗೋಚರತೆ ಕಡಿಮೆಯಾಗಿ ವಿಮಾನ ಮತ್ತು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಪರಿಸ್ಥಿತಿ ತೀವ್ರವಾದಾಗ ಶಾಲೆಗಳಿಗೆ ರಜೆ ಘೋಷಿಸಲಾಗುತ್ತದೆ.ಇದನ್ನು ಓದಿ; ಇಸ್ಲಾಮಾಬಾದ್ ಸ್ಫೋಟ: ಪಾಕಿಸ್ತಾನದ ಆರೋಪಕ್ಕೆ ಭಾರತದಿಂದ ತೀಕ್ಷ್ಣ ತಿರುಗೇಟು!
ದೆಹಲಿಯ ಭೂಗೋಳ ಮತ್ತು ಹವಾಮಾನ ಈ ಮಾಲಿನ್ಯವನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಗಾಳಿಯ ವೇಗ ಕಡಿಮೆಯಾದಾಗ ಮಾಲಿನ್ಯಕಾರಕಗಳು ನೆಲಮಟ್ಟದಲ್ಲಿಯೇ ಉಳಿಯುತ್ತವೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ದೆಹಲಿಯ ನೆರೆಯ ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಮುಂದಿನ ಬೆಳೆಗೆ ಭೂಮಿಯನ್ನು ಸಿದ್ಧಪಡಿಸಲು ಕೃಷಿ ತ್ಯಾಜ್ಯವನ್ನು ಭತ್ತದ ಹುಲ್ಲು ,ಕೂಳೆ ಸುಡುತ್ತಾರೆ. ಈ ಹೊಗೆ ದೆಹಲಿಯತ್ತ ಬಂದು ದಟ್ಟ ಹೊಗೆಯ ಪದರವನ್ನು ಸೃಷ್ಟಿಸುತ್ತದೆ.TRASE Block Heels Sandals For Women, Dusky Stylish & Comfortable Footwear
ದೆಹಲಿ NCR ನಲ್ಲಿ ವಾಹನಗಳ ಸಂಖ್ಯೆ ಅಗಾಧವಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳಿಂದ ಹೊರಸೂಸುವ ಅನಿಲಗಳು ಮತ್ತು PM 2.5 ಹಾಗೂ PM 10 ನಂತಹ ಸೂಕ್ಷ್ಮ ಕಣಗಳು ವಾಯು ಮಾಲಿನ್ಯದ ಪ್ರಮುಖ ಮೂಲಗಳಾಗಿವೆ. ಕಲ್ಲಿದ್ದಲು ಮತ್ತು ಮರದ ಬಳಕೆ ಮಾಡುವ ಸಣ್ಣ ಕೈಗಾರಿಕೆಗಳು ಹಾಗೂ ನಡೆಯುತ್ತಿರುವ ಬೃಹತ್ ಕಟ್ಟಡ ನಿರ್ಮಾಣ ಕಾರ್ಯಗಳಿಂದ ಬರುವ ಧೂಳು ಮತ್ತು ಹೊಗೆ ಸಹ ಮಾಲಿನ್ಯಕ್ಕೆ ಕೆಟ್ಟ ಕೊಡುಗೆ ನೀಡುತ್ತವೆ.
ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ PM 2.5 ಮತ್ತು ಇತರ ಮಾಲಿನ್ಯಕಾರಕಗಳ ಮಟ್ಟವು ರಾತ್ರೋರಾತ್ರಿ ಅಪಾಯಕಾರಿ ಪ್ರಮಾಣಕ್ಕೆ ಏರುತ್ತದೆ.ಮಾಲಿನ್ಯವನ್ನು ನಿಯಂತ್ರಿಸಲು ಸರ್ಕಾರಗಳು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ನಂತಹ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ, ಶಾಶ್ವತ ಪರಿಹಾರ ಇನ್ನೂ ಮರೀಚಿಕೆಯಾಗಿದೆ.
ಸಮ-ಬೆಸ ಯೋಜನೆಯಂತೆ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಅವಕಾಶ ಒದಗಿಸುತ್ತದೆ.
ಸ್ಮಾಗ್ ಗನ್ಗಳು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ದೂಳನ್ನು ನಿಯಂತ್ರಿಸಲು ನೀರನ್ನು ಸಿಂಪಡಿಸುವುದು. ಹಸಿರು ಇಂಧನ ಬಳಕೆ ಕೈಗಾರಿಕೆಗಳಲ್ಲಿ ಕಲ್ಲಿದ್ದಲಿನ ಬದಲು ಶುದ್ಧ ಇಂಧನ ಬಳಕೆಯನ್ನು ಉತ್ತೇಜಿಸುವುದು. ಎಲೆಕ್ಟ್ರಿಕ್ ವಾಹನ ನೀತಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುತ್ತದೆ.
ಕೃಷಿ ತ್ಯಾಜ್ಯ ನಿರ್ವಹಣೆಗೆ ರೈತರಿಗೆ ಸೂಕ್ತ ಮತ್ತು ಸುಲಭ ಪರ್ಯಾಯಗಳು ದೊರೆಯದಿರುವುದು.
ಮಾಲಿನ್ಯ ನಿಯಂತ್ರಣ ನಿಯಮಗಳ ಕಟ್ಟುನಿಟ್ಟಿನ ಜಾರಿ ಕೊರತೆ ಕಾಣುತ್ತಿದೆ. ದೆಹಲಿ ಮತ್ತು ನೆರೆಯ ರಾಜ್ಯಗಳ ನಡುವೆ ಸಮನ್ವಯದ ಕೊರತೆ ಇದೆ. ದೆಹಲಿ ತನ್ನ ಉಸಿರಾಟದ ಬಿಕ್ಕಟ್ಟನ್ನು ನಿವಾರಿಸಲು ಸ್ಥಳೀಯ ಮಟ್ಟದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ನೆರೆ ರಾಜ್ಯಗಳೊಂದಿಗೆ ಶಾಶ್ವತ ಸಹಕಾರವನ್ನು ಸಾಧಿಸುವುದು ಅತ್ಯಗತ್ಯವಾಗಿದೆ.