ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 50 ಕಿ.ಮೀ ದೂರದ ನರಸಿಂಗಡಿ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ 5.5 ತೀವ್ರತೆಯ ಭೂಕಂಪ ಸಂಭವಿಸಿದೆ., ಈ ಕಾರಣ, ಕೋಲ್ಕತ್ತಾ, ಪಶ್ಚಿಮ ಬಂಗಾಳದ ಹಲವು ಭಾಗಗಳು ಮತ್ತು ಈಶಾನ್ಯ ಭಾರತದ ವಿವಿಧ ಪ್ರದೇಶಗಳಲ್ಲಿ ಭೂಮಿ ಕಂಪಿಸುವ ಭಾರಿ ಎಚ್ಚರಿಕೆ ನೀಡಿದೆ.
ಯುಎಸ್ ಜಿಯಾಲಜಿಕಲ್ ಸರ್ವೇ (USGS) ಪ್ರಕಾರ, ಭೂಕಂಪದ ಆಳ 10 ಕಿ.ಮೀ ಆಗಿದ್ದು, ಈ ಕುರಿತು ಮುಂಜಾಗ್ರತಾ ಕ್ರಮಕ್ಕೆ ಸೂಚಿಸಲಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಾಗಿ, ಕೋಲ್ಕತ್ತಾ, ಬಿಹಾರ್, ಅಗರ್ತಲಾ, ಗುವಾಹಟಿ ಮತ್ತು ಉತ್ತರ-ಆಗ್ನೇಯ ರಾಜ್ಯಗಳು ಭೂಕಂಪನದ ಪ್ರಭಾವಿತ ಪ್ರದೇಶಗಳು ಎಂದು ತಿಳಿದುಬಂದಿದೆ. Noise Buds Trance in-Ear Truly Wireless Earbuds with 45H of Playtime, Low Latency(up to 40 ms), Instacharge(10 min=200 min), BT v5.3(Snow White)
ಪ್ರಸ್ತುತವಾಗಿ ಯಾವುದೇ ಸಾವು- ನೋವುಗಳು ಅಥವಾ ದೊಡ್ಡ ಮಟ್ಟದ ನಷ್ಟ ಸಂಭವಿಸಿಲ್ಲ ಎನ್ನಲಾಗಿದೆ. ಅಲ್ಲಿನ ನಿವಾಸಿಗಳು ಭೀತರಾಗಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಸಿಎಂ ಪತ್ನಿ ಆಸ್ಪತ್ರೆಗೆ ದಾಖಲು - ದೆಹಲಿಯಿಂದ ಆಗಮಿಸಿ ಆಸ್ಪತ್ರೆಗೆ ತೆರಳಿ ಪತ್ನಿಯ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!