ಭಾರತೀಯ ಸಂಸ್ಕೃತಿಯಲ್ಲಿ “ವೈದ್ಯೋ ನಾರಾಯಣೋ ಹರಿ” ಎಂಬ ಉಲ್ಲೇಖ ಬಹಳ ಮಹತ್ವದ್ದು. ಆರೋಗ್ಯವನ್ನು ಕಾಪಾಡುವ ವೈದ್ಯರನ್ನು ದೇವರ ಸಮಾನವಾಗಿ ಗೌರವಿಸುವ ಪರಂಪರೆ ನಮ್ಮದು. ಏಕೆಂದರೆ ಆರೋಗ್ಯವಿಲ್ಲದೆ ಧನ, ವಿದ್ಯೆ, ಸೌಖ್ಯ ಯಾವುದಕ್ಕೂ ಅರ್ಥವಿಲ್ಲ. ಈ ದೃಷ್ಟಿಕೋನವೇ ಆಯುರ್ವೇದದ ಮೂಲ ಆತ್ಮ.
ಆಯುರ್ವೇದ ಕೇವಲ ಔಷಧ ಪದ್ಧತಿ ಅಲ್ಲ; ಅದು ಸಂಪೂರ್ಣ ಜೀವನಶೈಲಿ ವಿಜ್ಞಾನ. “ಆಯು” ಅಂದರೆ ಜೀವನ ಮತ್ತು “ವೇದ” ಅಂದರೆ ಜ್ಞಾನ. ಅಂದರೆ ಆಯುರ್ವೇದ ನಮಗೆ ಜೀವನವನ್ನು ಹೇಗೆ ಆರೋಗ್ಯಕರವಾಗಿ, ಸಮತೋಲನದಿಂದ ಬದುಕಬೇಕು ಎಂಬುದನ್ನು ಕಲಿಸುತ್ತದೆ. ರೋಗ ಬಂದ ನಂತರ ಚಿಕಿತ್ಸೆ ಮಾಡುವುದಕ್ಕಿಂತ, ರೋಗ ಬಾರದಂತೆ ಜೀವನ ನಡೆಸುವುದೇ ಆಯುರ್ವೇದದ ಉದ್ದೇಶ.
ಆಯುರ್ವೇದದಲ್ಲಿ ಆರೋಗ್ಯ ಅಂದ್ರೆ ಕೇವಲ ರೋಗ ಇಲ್ಲದಿರುವುದು ಅಲ್ಲ. ಅದನ್ನು “ಸ್ವಾಸ್ಥ್ಯ” ಎಂದು ಕರೆಯಲಾಗುತ್ತದೆ. ಸ್ವಾಸ್ಥ್ಯ ಅಂದರೆ ದೇಹ, ಮನಸ್ಸು ಮತ್ತು ಇಂದ್ರಿಯಗಳು ಸಮತೋಲನದಲ್ಲಿದ್ದು, ವ್ಯಕ್ತಿ ಸಂತೋಷದಿಂದ ಜೀವನ ನಡೆಸುವ ಸ್ಥಿತಿ. ಇಂದಿನ ವೇಗದ ಜೀವನದಲ್ಲಿ ದೈಹಿಕ ಆರೋಗ್ಯ ಇದ್ದರೂ ಮಾನಸಿಕ ಅಶಾಂತಿ ಹೆಚ್ಚಾಗುತ್ತಿರುವುದಕ್ಕೆ ಕಾರಣ ಜೀವನಶೈಲಿ ತಪ್ಪಾಗಿರುವುದು.Bazar Women's Plaid Check Print Tunic (OFTNT-012)
ಆಯುರ್ವೇದವು ಐದು ಮುಖ್ಯ ಜೀವನ ನಿಯಮಗಳನ್ನು ಸೂಚಿಸುತ್ತದೆ. ಅವು ದಿನಚರ್ಯೆ, ಋತುಚರ್ಯೆ, ರಾತ್ರಿ ಚರ್ಯೆ, ಸ್ವಸ್ಥವೃತ್ತ ಮತ್ತು ಸದ್ವರ್ತ. ದಿನಚರ್ಯೆ ಎಂದರೆ ಬೆಳಿಗ್ಗೆ ಎದ್ದ ಸಮಯದಿಂದ ರಾತ್ರಿ ಮಲಗುವ ತನಕ ಪ್ರತಿಯೊಂದು ಕಾರ್ಯಕ್ಕೂ ಸರಿಯಾದ ಸಮಯವನ್ನು ಪಾಲಿಸುವುದು. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು, ಪ್ರಕೃತಿಯೊಂದಿಗೆ ದಿನವನ್ನು ಪ್ರಾರಂಭಿಸುವುದು ದೇಹಕ್ಕೆ ಶಕ್ತಿ ನೀಡುತ್ತದೆ.
ರಾತ್ರಿ ಚರ್ಯೆಯಲ್ಲಿ ನಿದ್ರೆಗೆ ಹೆಚ್ಚಿನ ಮಹತ್ವ ಇದೆ. ಆಯುರ್ವೇದ ಪ್ರಕಾರ ರಾತ್ರಿ 10 ಗಂಟೆಯೊಳಗೆ ಮಲಗುವುದು ಉತ್ತಮ. ನಿದ್ರೆಯ ಗುಣಮಟ್ಟವೇ ಮುಖ್ಯ, ಗಂಟೆಗಳ ಸಂಖ್ಯೆ ಅಲ್ಲ. ನಿದ್ರೆ ಮುಗಿಸಿ ಬೆಳಿಗ್ಗೆ ಫ್ರೆಶ್ ಆಗಿ ಎದ್ದರೆ, ದಿನವಿಡೀ ಚುರುಕು ಇದ್ದರೆ ಅದೇ ಸರಿಯಾದ ನಿದ್ರೆ. ಮಧ್ಯಾಹ್ನ ನಿದ್ರೆ ಬರದಿರುವುದು ಒಳ್ಳೆಯ ಆರೋಗ್ಯದ ಲಕ್ಷಣ.ಇದನ್ನು ಓದಿ: Life Skills vs. Academic degrees: ಪದವಿ ಮಾತ್ರ ಸಾಕೇ - ಜೀವನ ಕೌಶಲಗಳು ಬೇಡವೇ!?
ಪ್ರತಿ ವ್ಯಕ್ತಿಯ ದೇಹ ಪ್ರಕೃತಿ ವಿಭಿನ್ನವಾಗಿರುತ್ತದೆ. ಆಯುರ್ವೇದದಲ್ಲಿ ಇದನ್ನು ವಾತ, ಪಿತ್ತ ಮತ್ತು ಕಫ ಎಂದು ವಿವರಿಸಲಾಗಿದೆ. ಇವು ರೋಗಗಳಲ್ಲ, ದೇಹದ ಒಳಗಿನ ಶಕ್ತಿಗಳು. ಎಲ್ಲರಲ್ಲೂ ಈ ಮೂರು ಇರುತ್ತವೆ, ಆದರೆ ಯಾವುದೊಂದು ಹೆಚ್ಚು ಪ್ರಬಲವಾಗಿರುತ್ತದೆ. ವಾತ ಪ್ರಕೃತಿಯವರಿಗೆ ಸಾಮಾನ್ಯವಾಗಿ ಕಡಿಮೆ ನಿದ್ರೆ ಸಾಕಾಗುತ್ತದೆ, ಪಿತ್ತ ಪ್ರಕೃತಿಯವರಿಗೆ ಮಧ್ಯಮ ನಿದ್ರೆ, ಕಫ ಪ್ರಕೃತಿಯವರಿಗೆ ಹೆಚ್ಚು ನಿದ್ರೆ ಬೇಕಾಗುತ್ತದೆ. ಅದಕ್ಕಾಗಿಯೇ ಎಲ್ಲರಿಗೂ ಒಂದೇ ನಿದ್ರೆ ಸಮಯ ಅನ್ವಯಿಸುವುದಿಲ್ಲ.
ಆಹಾರವೂ ದೇಹ ಪ್ರಕೃತಿ ಮತ್ತು ಋತುಗಳ ಅನುಸಾರ ಇರಬೇಕು. ಆಯುರ್ವೇದ ಪ್ರಕಾರ ಬೆಳಿಗ್ಗೆ ಜೀರ್ಣಶಕ್ತಿ ಹೆಚ್ಚು ಇರುವುದರಿಂದ ಹೆಚ್ಚು ಆಹಾರ ಸೇವಿಸಬಹುದು. ರಾತ್ರಿ ಜೀರ್ಣಶಕ್ತಿ ಕಡಿಮೆ ಇರುವುದರಿಂದ ಹಗುರವಾದ ಆಹಾರ ಮಾತ್ರ ಸೇವಿಸಬೇಕು. ಎರಡು ಬಾರಿ ಆಹಾರ ಸೇವಿಸುವುದು ದೇಹಕ್ಕೆ ಉತ್ತಮ. ಪದೇ ಪದೇ ತಿನ್ನುವುದು ಜೀರ್ಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.ಇದನ್ನು ಓದಿ: ಏರ್ ಪ್ಯೂರಿಫೈಯರ್ ಮೇಲಿನ ಜಿಎಸ್ಟಿ ಇಳಿಕೆಗೆ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ
ಋತುಚರ್ಯೆ ಅಂದರೆ ಋತು ಬದಲಾದಂತೆ ಆಹಾರ ಮತ್ತು ಜೀವನಶೈಲಿಯೂ ಬದಲಾಗಬೇಕು. ಚಳಿಗಾಲದಲ್ಲಿ ಸ್ವಲ್ಪ ಎಣ್ಣೆಯುಕ್ತ ಆಹಾರ ದೇಹಕ್ಕೆ ಸಹಾಯಕವಾಗುತ್ತದೆ. ಆದರೆ ಅದೇ ಆಹಾರವನ್ನು ಬೇಸಿಗೆಯಲ್ಲಿ ತೆಗೆದುಕೊಂಡರೆ ದೇಹಕ್ಕೆ ಹಾನಿಕಾರಕವಾಗುತ್ತದೆ. ಇಂದಿನ ದಿನಗಳಲ್ಲಿ ಋತು ಪರಿಗಣನೆ ಇಲ್ಲದೇ ಒಂದೇ ರೀತಿಯ ಆಹಾರ ಸೇವಿಸುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಎಣ್ಣೆಯಲ್ಲಿ ಕರಿದ ತಿಂಡಿಗಳ ಬಗ್ಗೆ ಆಯುರ್ವೇದ ಸ್ಪಷ್ಟ ಎಚ್ಚರಿಕೆ ನೀಡುತ್ತದೆ. ಒಮ್ಮೆ ಬಿಸಿ ಮಾಡಿದ ಎಣ್ಣೆಯನ್ನು ಮರುಬಳಕೆ ಮಾಡಿದರೆ ಅದು ವಿಷದಂತೆ ದೇಹಕ್ಕೆ ಹಾನಿ ಮಾಡುತ್ತದೆ. ಹೋಟೆಲ್ಗಳಲ್ಲಿ ದಿನಗಟ್ಟಲೆ ಒಂದೇ ಎಣ್ಣೆಯನ್ನು ಬಳಸುವುದರಿಂದ ಹೃದಯ ರೋಗ, ಜೀರ್ಣ ಸಮಸ್ಯೆ ಹಾಗೂ ಇತರೆ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಮನೆಯಲ್ಲಾದರೂ ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸದೇ ಇರುವುದು ಆರೋಗ್ಯದ ದೃಷ್ಟಿಯಿಂದ ಅತ್ಯವಶ್ಯ.ಇದನ್ನು ಓದಿ: ಕುರ್ಚಿ ಕಾಳಗ: ರಾಹುಲ್ ಗಾಂಧಿ ಮೌನದ ಹಿಂದೆ ಅಡಗಿದೆಯೇ ಸಿದ್ದು ಸಿಂಹಾಸನ, ಡಿಕೆ ಪಟ್ಟದ ಭವಿಷ್ಯ..!
ಪ್ರಕೃತಿಯೊಂದಿಗೆ ಬೆಳೆದ ದೇಹಕ್ಕೆ ಸ್ವಾಭಾವಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚು ಇರುತ್ತದೆ. ಮಣ್ಣಿನಲ್ಲಿ ಆಟವಾಡುವುದು, ಬಿಸಿಲಿನಲ್ಲಿ ಬೆವರುವುದು, ತಾಜಾ ಗಾಳಿ ಪಡೆಯುವುದು ದೇಹವನ್ನು ಬಲಪಡಿಸುತ್ತದೆ. ಆದರೆ ಅತಿಯಾದ ಸ್ವಚ್ಛತೆ, ಎಸಿ ಜೀವನ ಮತ್ತು ಸ್ಟೆರೈಲ್ ವಾತಾವರಣ ದೇಹವನ್ನು ದುರ್ಬಲಗೊಳಿಸುತ್ತದೆ ಎಂಬುದನ್ನು ಆಯುರ್ವೇದ ಎಚ್ಚರಿಸುತ್ತದೆ.
ಬಹುತೇಕ ಜನರಿಗೆ ಆಯುರ್ವೇದ ನಿಧಾನವಾಗಿ ಕೆಲಸ ಮಾಡುತ್ತದೆ ಎಂಬ ಭ್ರಮೆ ಇದೆ. ವಾಸ್ತವದಲ್ಲಿ ಆಯುರ್ವೇದ ಸರಿಯಾದ ರೀತಿಯಲ್ಲಿ ಬಳಸಿದರೆ ತಕ್ಷಣದ ಫಲಿತಾಂಶವೂ ಕೊಡುತ್ತದೆ. ಆದರೆ ಅದರ ಪ್ರಮುಖ ವಿಶೇಷತೆ ಬೇರುಮಟ್ಟದಿಂದ ಸಮಸ್ಯೆಯನ್ನು ಪರಿಹರಿಸುವುದು. ಅಲೋಪತಿ ತಾತ್ಕಾಲಿಕ ಪರಿಹಾರ ನೀಡಬಹುದು, ಆಯುರ್ವೇದ ದೀರ್ಘಕಾಲಿಕ ಸಮತೋಲನ ತರುತ್ತದೆ. ಎರಡಕ್ಕೂ ತಮ್ಮದೇ ಆದ ಸ್ಥಾನವಿದೆ.ಇದನ್ನು ಓದಿ: ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ..!
ಒಟ್ಟಾರೆ ಆಯುರ್ವೇದ ನಮಗೆ ನೀಡುವ ಸಂದೇಶ ಸರಳ. ಔಷಧಕ್ಕಿಂತ ಜೀವನಶೈಲಿ ಮುಖ್ಯ. ಪ್ರಕೃತಿಯ ನಿಯಮಗಳನ್ನು ಪಾಲಿಸಿ ಬದುಕಿದರೆ ಆರೋಗ್ಯ ನಮ್ಮ ಕೈಯಲ್ಲೇ ಇರುತ್ತದೆ. ಅದಕ್ಕಾಗಿಯೇ ನಮ್ಮ ಸಂಸ್ಕೃತಿ ಹೇಳುತ್ತದೆ – “ವೈದ್ಯೋ ನಾರಾಯಣೋ ಹರಿ”.