ಕರ್ನಾಟಕ ವಿಧಾನಪರಿಷತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಸಭಾಪತಿಗಳ ಸಂಧಾನ ಸಭೆಯೂ ವಿಫಲವಾಗಿದೆ. ನಜೀರ್ ಅಹ್ಮದ್ ಅವರ ಹೇಳಿಕೆ ಮತ್ತು ಅದಕ್ಕೆ ಪ್ರತಿಯಾಗಿ ಸಿ.ಟಿ. ರವಿ ಅವರು ನೀಡಿದ 'ಪಾಕಿಸ್ತಾನದ ನಾಲಿಗೆ' ಎಂಬ ತಿರುಗೇಟು ಈಗ ರಾಜಕೀಯ ಬಿಕ್ಕಟ್ಟಾಗಿ ಮಾರ್ಪಟ್ಟು ಮುಖ್ಯಮಂತ್ರಿಗಳ ಅಂಗಳ ತಲುಪಿದೆ.
ಸದನದಲ್ಲಿ ಭುಗಿಲೆದ್ದ ಕಿಡಿ:
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನಜೀರ್ ಅಹ್ಮದ್ ನೀಡಿದ್ದ ಹೇಳಿಕೆಯನ್ನು ಖಂಡಿಸಿದ ಬಿಜೆಪಿ ನಾಯಕ ಸಿ.ಟಿ. ರವಿ, ನಜೀರ್ ಅವರದ್ದು 'ಪಾಕಿಸ್ತಾನದ ನಾಲಿಗೆ' ಎಂದು ವಾಗ್ದಾಳಿ ನಡೆಸಿದರು. ಭಾರತದ ನಾಲಿಗೆ ಪ್ರಧಾನಿಯ ಬಗ್ಗೆ ಕೀಳು ಪದ ಬಳಸಲು ಸಾಧ್ಯವಿಲ್ಲ. ನನ್ನ ಮಾತಿಗೆ ನಾನು ಈಗಲೂ ಬದ್ಧ ಎಂದು ರವಿ ಗುಡುಗಿದ್ದು, ಸದನದಲ್ಲಿ ಗದ್ದಲಕ್ಕೆ
ಕಾಂಗ್ರೆಸ್ ನಾಯಕರ ಆಕ್ರೋಶ:
ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಸಿ.ಟಿ. ರವಿ ಅವರ ವಿರುದ್ಧ ಹರಿಹಾಯ್ದು, ನಾವು ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು, ಇಲ್ಲೇ ಸಾಯುತ್ತೇವೆ. ನಜೀರ್ ಅಹ್ಮದ್ ಅವರನ್ನು ಪಾಕಿಸ್ತಾನಕ್ಕೆ ಹೋಲಿಸುವುದು ಸರಿಯಲ್ಲ.
ಇಂತಹ ಅವಹೇಳನಕಾರಿ ಮಾತುಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಟ್ಟು ಹಿಡಿದರು. ಸಚಿವ ಬೈರತಿ ಸುರೇಶ್ ಅವರು, ಸಿ.ಟಿ. ರವಿ ಮೊದಲು ವಿಷಾದ ವ್ಯಕ್ತಪಡಿಸಲಿ, ಆನಂತರ ನಾವು ಮಾತನಾಡುತ್ತೇವೆ ಎಂದು ಸವಾಲು ಹಾಕಿದರು.ಇದನ್ನು ಓದಿ: ಸಾರ್ವಜನಿಕ ಆಸ್ತಿ ದೇಶದ ಸ್ವತ್ತು, ಒಂದು ವಂಶದ ಬ್ರಾಂಡ್ ಅಲ್ಲ: ಕಾಂಗ್ರೆಸ್ ವಿರುದ್ಧ ಬಿಜೆಪಿ ಗಂಭೀರ ವಾಗ್ದಾಳಿ..!
ಸಭಾಪತಿಗಳ ಸಂಧಾನ ಸಭೆ ಮತ್ತು ಬಿಕ್ಕಟ್ಟು:
ಸಭಾಪತಿ ಬಸವರಾಜ ಹೊರಟ್ಟಿ ಅವರು ಎರಡೂ ಪಕ್ಷಗಳ ನಾಯಕರನ್ನು ಕರೆಸಿ ಸಂಧಾನ ನಡೆಸಲು ಪ್ರಯತ್ನಿಸಿದರು. ಸಚಿವ ಎಚ್.ಕೆ. ಪಾಟೀಲ್ ಅವರು ಮುಖ್ಯಮಂತ್ರಿಗಳ ಸಂದೇಶದೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು.
ಆದರೆ, ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕು. ಇಬ್ಬರಿಗೂ ಸಮಾನ ನಿಯಮವಿರಲಿ ಎಂದು ನಜೀರ್ ಅಹ್ಮದ್ ಪ್ರಶ್ನಿಸಿದ್ದರಿಂದ ಸಂಧಾನ ಸಭೆಯು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.ಇದನ್ನು ಓದಿ: ಪಂಚಾಯತ್ ಚುನಾವಣೆಗೆ ಕೌಂಟ್ಡೌನ್: ಮುಂದಿನ 3 ತಿಂಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಸಮರಕ್ಕೆ ಮುಹೂರ್ತ..?
ವಿವಾದವು ಈಗ ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರದ ಮೇಲೆ ನಿಂತಿದೆ. ನಜೀರ್ ಅಹ್ಮದ್ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರವಷ್ಟೇ ತಮ್ಮ ಮುಂದಿನ ನಿಲುವು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಸದಸ್ಯರು ಮಾತ್ರ ಒಂದು ದೂರಿನ ವಿರುದ್ಧ ಮತ್ತೊಂದು ದೂರು ನೀಡುವುದು ಸರಿಯಲ್ಲ, ಮೊದಲು ಮೂಲ ದೂರಿನ ಮೇಲೆ ಕ್ರಮವಾಗಲಿ ಎಂಬ ಪಟ್ಟನ್ನಮುಂದುವರಿಸಿದ್ದಾರೆ.ಇದನ್ನು ಓದಿ: ಕರ್ನಾಟಕ ಸ್ಥಳೀಯ ಚುನಾವಣೆ 2026 - ಬಾಗಲಕೋಟೆ ಜಿಲ್ಲೆಯ ಚುನಾವಣಾ ಮಾಹಿತಿ