ಶಿವಮೊಗ್ಗ: ದಶಕಗಳ ಕಾಲದ ತಮ್ಮ ನ್ಯಾಯಯುತ ಬೇಡಿಕೆಯಾದ ಭೂಮಿಯ ಹಕ್ಕಿಗಾಗಿ ಶರಾವತಿ ಮುಳುಗಡೆ ಸಂತ್ರಸ್ತರು ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮಲೆನಾಡು ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಭಾಗವಹಿಸಿ, ನೂತನವಾಗಿ ನಿರ್ಮಿಸಲಾದ ಸಿಗಂದೂರು ಸೇತುವೆಯನ್ನು ಬಂದ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಸೇತುವೆಗಿಂತ ಭೂಮಿಯೇ ಮುಖ್ಯ: ರೈತರ ಆಕ್ರೋಶಸಮಿತಿಯ ಅಧ್ಯಕ್ಷರಾದ ತೀ.ನಾ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಅಂಬಾರಗೊಡ್ಲು ಮತ್ತು ಕಳಸವಳ್ಳಿ ನಡುವಿನ ನೂತನ ಸೇತುವೆಯ ಮೇಲೆ ಜಮಾಯಿಸಿದ ಪ್ರತಿಭಟನಾಕಾರರು, ಸಂಚಾರವನ್ನು ಸಂಪೂರ್ಣ