ಪಳನಿಸ್ವಾಮಿ ಅವರ ಪ್ರಮುಖ ಆರೋಪಗಳು
ಕಾನೂನು ಸುವ್ಯವಸ್ಥೆ ಕುಸಿತ: 2021ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ತಮಿಳುನಾಡು ಇಂದು ಗಾಂಜಾ, ಮದ್ಯ ಮಾರಾಟ ಮತ್ತು ಡ್ರಗ್ ಮಾಫಿಯಾದ ಕೇಂದ್ರವಾಗಿ ಮಾರ್ಪಟ್ಟಿದೆ.
ಯುವಜನತೆಯ ಮೇಲೆ ಪರಿಣಾಮ: ರಾಜ್ಯದ ಮೂಲೆ ಮೂಲೆಯಲ್ಲೂ ಇಂದು ಗಾಂಜಾ ಸಿಗುವಂತಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಮಾರಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಯುವಜನರಲ್ಲಿ ಈ ಬಗ್ಗೆ ಇದ್ದ ಭಯ ಅಥವಾ ಸಾಮಾಜಿಕ ಕಳಂಕ ದೂರವಾಗಿ, ಡ್ರಗ್ಸ್ ಸೇವನೆ ಎಂಬುದು ಒಂದು ಸಾಮಾನ್ಯ ವಿಷಯವಾಗಿರುವುದು ಅತ್ಯಂತ ಭಯಾನಕವಾಗಿದೆ.
ಸರ್ಕಾರದ ನಿಲುವು: ಸರ್ಕಾರವು ಸಾಮಾನ್ಯ ನಾಗರಿಕರನ್ನು ರಕ್ಷಿಸಲು ಬಯಸುತ್ತಿದೆಯೇ ಅಥವಾ ಮಾದಕ ದ್ರವ್ಯ ಮಾರಾಟಗಾರರನ್ನು ರಕ್ಷಿಸುತ್ತಿದೆಯೇ ಎಂಬ ಸಾರ್ವಜನಿಕ ಆತಂಕ ಮೂಡಿದೆ ಎಂದು ಅವರು ಎಕ್ಸ್ (X) ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಅಪರಾಧ ಮತ್ತು ಲಾಕಪ್ ಸಾವುಗಳು: ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಗಣನೀಯವಾಗಿ ಹೆಚ್ಚಿವೆ. ಡಿಎಂಕೆ ಆಡಳಿತದ ಕಳೆದ ಐದು ವರ್ಷಗಳಲ್ಲಿ ಸುಮಾರು 30 ಲಾಕಪ್ ಸಾವುಗಳು ಸಂಭವಿಸಿವೆ ಮತ್ತು 4 ಪರಿಶಿಷ್ಟ ಜಾತಿಯ (SC) ಯುವಕರು ಪೊಲೀಸ್ ವಶದಲ್ಲಿದ್ದಾಗಲೇ ಸಾವನ್ನಪ್ಪಿದ್ದಾರೆ ಎಂದು ಅವರು ದೂರಿದ್ದಾರೆ.
ನಾಗರಿಕರು ಅಭದ್ರತೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿರುವ ಪಳನಿಸ್ವಾಮಿ,
ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತದ ತಪರಾಕಿ
ತಮಿಳುನಾಡಿನ ಉತ್ತಮ ಭವಿಷ್ಯಕ್ಕಾಗಿ ಈ 'ಜನವಿರೋಧಿ ಸರ್ಕಾರ'ವನ್ನು ಕಿತ್ತೊಗೆಯುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.