Skip to main content
ವಿಡಿಯೋ
politics

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪತ್ರಿಕಾಗೋಷ್ಠಿ: ಮೋದಿ ಸರ್ಕಾರದ ವಿದೇಶಾಂಗ ನೀತಿಯ ವಿರುದ್ಧ ವಾಗ್ದಾಳಿ

By prasanna jodidar
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪತ್ರಿಕಾಗೋಷ್ಠಿ: ಮೋದಿ ಸರ್ಕಾರದ ವಿದೇಶಾಂಗ ನೀತಿಯ ವಿರುದ್ಧ ವಾಗ್ದಾಳಿ

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಮಾರ್ಚ್ 25, 2026 ರಂದು ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪಶ್ಚಿಮ ಏಷ್ಯಾದ ಬಿಕ್ಕಟ್ಟು, ಕಾಂಗ್ರೆಸ್ ಪಕ್ಷದ ವಿರುದ್ಧದ ಇತ್ತೀಚಿನ ಕ್ರಮಗಳು, ಎಫ್‌ಸಿಆರ್‌ಎ (FCRA) ತಿದ್ದುಪಡಿ ಮಸೂದೆ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಮತ್ತು ತೈಲ ಬಿಕ್ಕಟ್ಟಿನ ಕುರಿತು ಅವರು ಸುದೀರ್ಘವಾಗಿ ಮಾತನಾಡಿದರು.

ತಮ್ಮ ಚುರುಕಿನ ಮಾತುಗಳಿಗೆ ಹೆಸರಾದ ಪವನ್ ಖೇರಾ, "ಮೋದಿಯವರ ರಾಜತಾಂತ್ರಿಕತೆಯು ಭಾರತದ ಆರ್ಥಿಕತೆಯ ಮೇಲೆ ತಿರುಗುಬಾಣವಾಗಿದೆ," ಎಂದು ಟೀಕಿಸಿದರು. ಇಸ್ರೇಲ್ ಪ್ರಧಾನಿ ನೆತನ್ಯಾಹು, ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅವರಂತಹ ಜಾಗತಿಕ ನಾಯಕರೊಂದಿಗೆ ವೈಯಕ್ತಿಕ ಸ್ನೇಹ ಹೊಂದಿದ್ದರೂ ಸಹ ಭಾರತ ಸರ್ಕಾರ ಈಗ ಏಕೆ ಮೌನವಾಗಿದೆ ಎಂದು ಪ್ರಶ್ನಿಸಿದರು. "ಪ್ರಧಾನಿಯವರು ಪರಿಸ್ಥಿತಿಯನ್ನು ನಿಭಾಯಿಸಬಲ್ಲವರಾಗಿದ್ದರೆ ಇಸ್ರೇಲ್-ಇರಾನ್-ಅಮೆರಿಕ ನಡುವೆ ಮಾತುಕತೆ ನಡೆಸಿ ಯುದ್ಧವನ್ನು ಕೊನೆಗೊಳಿಸಲಿ. ಹಾರ್ಮುಜ್ ಜಲಸಂಧಿಯ ಬಗ್ಗೆ ಒಂದು ಸ್ಪಷ್ಟ ಹೇಳಿಕೆ ನೀಡಲು ಕೂಡ ಪ್ರಧಾನಿಯವರಿಂದ ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನದಂತಹ ದೇಶವೇ ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವಾಗ, ಭಾರತ ಸರ್ಕಾರ ಏಕೆ ಯಾವುದೇ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ?" ಎಂದು ಅವರು ಕಿಡಿಕಾರಿದರು. ರಷ್ಯಾದಿಂದ ತೈಲ ಖರೀದಿಸಲು ಭಾರತವು ಅಮೆರಿಕದ ಅನುಮತಿ ಪಡೆಯಬೇಕಾದ ಸ್ಥಿತಿ ಬಂದಿರುವುದು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಅವರು ಆಕ್ಷೇಪಿಸಿದರು.

Shining Diva Fashion Latest Stylish Fancy Pearl Choker Traditional Jewellery Set for Women | Temple Necklace Set | Festive Wedding Party Necklace | 22k Gold Plated | Just Like Original Gold Jewellery

ಕಚೇರಿ ತೆರವು ನೋಟಿಸ್ ಕುರಿತು: 24, ಅಕ್ಬರ್ ರಸ್ತೆ ಮತ್ತು 5, ರೈಸಿನಾ ರಸ್ತೆಯ ಕಟ್ಟಡಗಳನ್ನು ಖಾಲಿ ಮಾಡುವಂತೆ ಎಸ್ಟೇಟ್ ನಿರ್ದೇಶನಾಲಯ (DOE) ನೀಡಿರುವ ನೋಟಿಸ್‌ಗಳನ್ನು ಅವರು "ರಾಜಕೀಯ ಪ್ರೇರಿತ" ಮತ್ತು ಜನರ ಗಮನವನ್ನು ಬೇರೆಡೆಗೆ ಸೆಳೆಯುವ "ವೈಫಲ್ಯ ಮರೆಮಾಚುವ ತಂತ್ರ" ಎಂದು ಕರೆದರು. ಆದರೆ, ಮಾರ್ಚ್ 28 ರೊಳಗೆ ಕಾಂಗ್ರೆಸ್ ಕಚೇರಿಯನ್ನು ಖಾಲಿ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಅವರು ನೇರ ಉತ್ತರ ನೀಡಲಿಲ್ಲ.

ಎಫ್‌ಸಿಆರ್‌ಎ (FCRA) ತಿದ್ದುಪಡಿ ಮಸೂದೆ: ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ-2026 ಅನ್ನು ಖಂಡಿಸಿದ ಖೇರಾ, ಇದು ನಾಗರಿಕ ಸಮಾಜವನ್ನು ದುರ್ಬಲಗೊಳಿಸುವ ಮತ್ತು ವಿರೋಧ ಪಕ್ಷದ ಪರವಾಗಿರುವ ಎನ್‌ಜಿಒಗಳನ್ನು ಹತ್ತಿಕ್ಕುವ "ದಮನಕಾರಿ" (Draconian) ಮಸೂದೆಯಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಅಮಿತ್ ಶಾ ಅವರ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಕಾಯ್ದೆ, 2026: 16,000 ಎನ್‌ಜಿಒಗಳಿಗೆ ಸಂಕಷ್ಟ

ಇಂಧನ ಬಿಕ್ಕಟ್ಟು: ದೇಶದಲ್ಲಿ ಎಲ್‌ಪಿಜಿ ಮತ್ತು ತೈಲ ಬಿಕ್ಕಟ್ಟಿನ ಕುರಿತು ಮಾತನಾಡುತ್ತಾ, ಸರ್ಕಾರವು ತೈಲ ದಾಸ್ತಾನಿನ ಬಗ್ಗೆ ಪಾರದರ್ಶಕವಾಗಿರಬೇಕು ಮತ್ತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. "ಬಿಜೆಪಿಯು 'ಇಂಧನ ಭದ್ರತಾ ಕಾರ್ಯಪಡೆ'ಯ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿದೆ, ಆದರೆ ಒಬ್ಬ ಸಾಮಾನ್ಯ ಮನುಷ್ಯ ಎಲ್‌ಪಿಜಿ ಸಿಲಿಂಡರ್ ಪಡೆಯಲು ಹರಸಾಹಸ ಪಡುತ್ತಿದ್ದಾನೆ," ಎಂದು ಲೇವಡಿ ಮಾಡಿದರು.