Skip to main content
ವಿಡಿಯೋ
1/2
lifestyle

ಹಣ ಮಾಡಲು ಸಕ್ಸಸ್‌ ಸೀಕ್ರೆಟ್‌ ಔಟ್.!

By Nandini J
ಹಣ ಮಾಡಲು ಸಕ್ಸಸ್‌ ಸೀಕ್ರೆಟ್‌ ಔಟ್.!

ಯಶಸ್ಸು ಬೇಕಾದರೇ ಮೊದಲು ಗುರಿ ಸೆಟ್‌ ಮಾಡಿಕೊಳ್ಳಿ. ಆ ದಾರಿಯಲ್ಲಿ ಯಾರು ಯಶಸ್ವಿಯಾಗಿದ್ದಾರೆ ಎನ್ನುವುದನ್ನ ಕೇಳಿ ಸಾಧ್ಯವಾದರೆ ಅವರಿಂದ ಕಷ್ಟದ ಬಗ್ಗೆಯೇ ಹೆಚ್ಚು ತಿಳಿದುಕೊಳ್ಳಿ

ಸಕ್ಸಸ್‌ ರುಚಿ ಕಂಡವರಿಗೆ ಸದಾ ಸಕ್ಸಸ್‌ ಬೆನ್ನು ಹತ್ತಿರುತ್ತದೆ. ಅದೇ ನೀವು ನೋಡಿ ಪ್ಲಾನಿಂಗ್‌ ಮಾಡುವವರು, ಫೇಲ್ಯೂರ್‌ ಆಗುವವರನ್ನ, ಅವರು ಬರೀ ಅದರಲ್ಲಿ ಕಾಲ ದೂಡಿರುತ್ತಾರೆ. ಇದಕ್ಕೆ ಸೂಕ್ತ ನಿದರ್ಶನವೂ ಉಂಟು. ೭ ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗೆ ಸಮಾಜ ಪಾಠ ಮಾಡುವ ಶಿಕ್ಷಕರೇ ಕ್ಲಾಸ್‌ ೪೦ ವಿದ್ಯಾರ್ಥಿಗಳಿಗೂ ಒಂದೇ ರೀತಿ ಪಾಠ ಮಾಡಿ, ನೋಟ್ಸ್‌ ಕೊಟ್ಟಿರುತ್ತಾರೆ. ಆದರೆ, ಪರೀಕ್ಷಾ ಫಲಿತಾಂಶ ಬಂದಾಗ ಕನಿಷ್ಠ ೧೦ ಜನ ೧೦೦ ಕ್ಕೆ ೯೫ ರ ಮೇಲೆ ಅಂಕ ಪಡೆದಿರುತ್ತಾರೆ. ಅದೇ ಹೇಗೆ ಅಂತಾ ಚಿಂತೆ ಬ್ಯಾಡ . ಕಾರಣ ಇಷ್ಟೇ ಶಿಕ್ಷಕರ ಪಾಠದ ಜೊತೆಗೆ ವಿದ್ಯಾರ್ಥಿ ಆಸಕ್ತಿ, ಶ್ರಮ, ಮನೆ ಪಾಠ ಎಲ್ಲವೂ ಫಲಿತಾಂಶವನ್ನ ಅವಲಂಬಿಸಿರುತ್ತದೆ.ಮತಗಳ್ಳತನ ಆರೋಪಕ್ಕೆ ಸಾಕ್ಷಿ ಕೊಡಬೇಕು..ತಪ್ಪಿದ್ದರೆ ಕಾನೂನು ಕ್ರಮ! ರಾಹುಲ್ ಗಾಂಧಿಗೆ ಚುನಾವಣಾಧಿಕಾರಿಗಳ ಎಚ್ಚರಿಕೆ!

ಹಾಗೇನೆ, ನೀವು ಏನಾದರೂ ಸಾಧನೆ ಮಾಡಬೇಕಾದರೆ ಪ್ರಕೃತಿ ಬೇದ - ಬಾವ ಮಾಡದೇ ಎಲ್ಲರಿಗೂ ಗಾಳಿ, ನೀರು, ಬೆಳಕು ಎಲ್ಲ ಸಾಮಾನ್ಯವಾಗಿ ಸಮಾನವಾಗಿ ನೀಡಿರುತ್ತದೆ. ಅದನ್ನ ಹೇಗೆ ಯಾರ ಬಳಸಿಕೊಂಡು ಗುರಿ ಮುಟ್ಟಿರುತ್ತಾರೆ ಅನ್ನುವುದನ್ನ ಫಲಿತಾಂಶವೇ ಹೇಳುತ್ತದ. ಹಾಗಾದ್ರೇ ಸಕ್ಸಸ್‌ ಫೇಲ್‌ ಆಗಲು ಕಾರಣವಾದರೂ ಏನು ಅಂತಾ ನೋಡಿ.


* ಎಲ್ಲರಿಗೂ ಆಗುವುದೇ ನಮಗೂ ಆಗುತ್ತೆ. ಈ ಮಾತು ಕೇಳಿಯೇ ಇರುತ್ತೀರಾ? ಬಸ್‌ನಲ್ಲಿ ಹೋಗುವಾಗ ಆಕ್ಸಿಡೆಂಟ್‌ ಆಗಿಬಿಟ್ಟರೆ ಹತ್ತು ಜನಕ್ಕೆ ಆಗೊದ್‌ ನಮಗೂ ಆಗುತ್ತೆ ಬಿಡು ಅಂತಾ ಹೋಗುವವರುಂಟು. ಮತ್ತೊಂದೆಡೆ ರಿಸ್ಕ್‌ ತಗೊಂಡು ಹೊಸದನ್ನ ಹುಡುಕಲು ಯಾರಿಗೂ ಇಷ್ಟ ಇಲ್ಲ. ಕಾರಣ ಇಷ್ಟೇ , ಈಗಾಗಲೇ ಯಶಸ್ಸು ಕಂಡವರಿಗೆ ದಾರಿ ಗೊತ್ತಿರುತ್ತದೆ. ಅದನ್ನೇ ಫಾಲೋ ಮಾಡಿದರೆ ಆಯ್ತು ಅಂತಾ ಬ್ಲ್ಯಾಕ್‌ ಆಗಿ ಫಾಲೋ ಮಾಡಿಬಿಡುತ್ತಾರೆ. ಆಗ ಒತ್ತಡ , ಪೈಪೋಟಿ ಹೆಚ್ಚಾಗಿ ಯಶಸ್ಸು ಪೂರ್ಣವಾಗಿ ಸಿಗದೇ ಎಲ್ಲರಿಗೂ ಹಂಚಿ ಹೋಗುತ್ತದೆ. ಹೋಟೆಲ್‌ ಕಾಸು ಮಾಡುತ್ತಿದ್ದರೇ ಅದೇ ರೋಡ್‌ನಲ್ಲಿ ಮತ್ತಷ್ಟು ಹೋಟೆಲ್‌ ಮಾಡುವುದು . ಗ್ರಾಹಕರು ಒಂದು ಕಡೆ ಬಾರದೇ ಎಲ್ಲ ಕಡೆ ಹರಿದು ಹಂಚಿಹೋಗಿ ಲಾಭ ಇಳಿಮುಖವಾಗೊದ್‌ ಪಕ್ಕಾ ಆಗಿದೆ. ಕರ್ನಾಟಕ ಸಿಎಂ ಕಚೇರಿಯ ಕಾಫಿ, ತಿಂಡಿ ಖರ್ಚಿನ ವಿವಾದ: ಸಿ.ಟಿ. ರವಿಯ ಆರೋಪಗಳು..!

*ಶ್ರೀಮಂತರನ್ನೇ ಫಾಲೋ ಮಾಡುವುದು . ಅವರ ನೆಟ್‌ ವರ್ಕ್‌ , ಕಂಟೆಕ್ಟ್‌ , ನೆಟ್‌ ವರ್ತ್‌ ಯಾವುದು ಸರಿಯಾಗಿ ತಿಳಿದುಕೊಳ್ಳಲ್ಲ. ಬದಲಾಗಿ ,ಏಕಾ್ಕಿ ಶ್ರೀಮಂತರನ್ನ ಅವರ ಸಾಧನೆಯ ಹಾದಿಯನ್ನ ಹಿಂಬಾಲಿಸುವುದು . ನೆನಪಿರಲಿ ಶ್ರೀಮಂತರರಾಗಲು ಒಂದು ಅವಶ್ಯಕ ಅಂಶ , ಪರಿಸ್ಥಿತಿ ಸಹಕರಿಸದಿದ್ದರೆ ಇದ್ದ ಸ್ಥಿತಿಗಿಂತ ಕೆಳಗೆ ಇಳಿಯೊದಾದ್ರಲಿ ಅನುಮಾನವೇ ಬ್ಯಾಡ.

ಯಶಸ್ಸು ಬೇಕಾದರೇ ಮೊದಲು ಗುರಿ ಸೆಟ್‌ ಮಾಡಿಕೊಳ್ಳಿ. ಆ ದಾರಿಯಲ್ಲಿ ಯಾರು ಯಶಸ್ವಿಯಾಗಿದ್ದಾರೆ ಎನ್ನುವುದನ್ನ ಕೇಳಿ ಸಾಧ್ಯವಾದರೆ ಅವರಿಂದ ಕಷ್ಟದ ಬಗ್ಗೆಯೇ ಹೆಚ್ಚು ತಿಳಿದುಕೊಳ್ಳಿ, ಪರಿಹಾರವನ್ನು ಕೇಳಿ ಅರ್ಥ ಮಾಡಿಕೊಳ್ಳಿರಿ. ಸಂಬಂಧಿತ ಪುಸ್ತಕಗಳನ್ನ ಅಧ್ಯಯನ ಮಾಡಿ , ಗುರು-ಹಿರಿಯರನ್ನ ಕೇಳಿ ತಿಳಿದುಕೊಳ್ಳಿ.ತುಮಕೂರು: ನಿಗೂಢವಾಗಿ 20 ನವಿಲುಗಳ ಸಾವು, ತನಿಖೆಗೆ ಆದೇಶ


ನಿನ್ನ ಸೋಲುಗಳಿಗೆ ಹೆದರಬೇಡ - ಪದೇ ಪದೇ ಪ್ರಯತ್ನಿಸಿ ಯಶಸ್ವಿಯಾಗಿ. ತಪ್ಪುಗಳ ಬಗ್ಗೆ ಚರ್ಚಿಸಿ ಪಾಠ ಕಲಿಯಿರಿ. ಆದರೆ ಸಮಯ ವ್ಯರ್ಥ ಮಾಡುವ ಮೈಗಳರಾಗಬೇಡಿ. ದುಡ್ಡು ಸಂಪಾದಿಸಬೇಕಾದರೆ ನಿರಂತರ ಶ್ರಮ ಬೇಕಿದೆ. ಪ್ರಕೃತಿಯಂತೂ ಬೇದ- ಬಾವ ಮಾಡದೇ ಎಲ್ಲ ನೀಡುತ್ತಿದೆ .ಉಪಯೋಗಿಸಿ ಸಿರಿವಂತರಾಗಿ.