Skip to main content
ವಿಡಿಯೋ
general

ಯಾರೋ 10% ಅಧಿಕಾರಿಗಳಿಂದ ಇನ್ನುಳಿದವರಿಗೆ ಕೆಟ್ಟ ಹೆಸರು.! - ಕಂದಾಯ ಸಚಿವ ಕೃಷ್ಣ ಬೈರೇಗೌಡ

By Shravanthi R
ಯಾರೋ 10% ಅಧಿಕಾರಿಗಳಿಂದ ಇನ್ನುಳಿದವರಿಗೆ ಕೆಟ್ಟ ಹೆಸರು.! - ಕಂದಾಯ ಸಚಿವ ಕೃಷ್ಣ ಬೈರೇಗೌಡ

ಇಲಾಖೆಯ ಅಧಿಕಾರಿಗಳ ಪ್ರಯತ್ನದ ಫಲವಾಗಿ ಶೇ. 70ರಷ್ಟು ಕೆಲಸ ಪೂರ್ಣಗೊಂಡಿದ್ದರೂ, ಇನ್ನೂ ಶೇ. 30ರಷ್ಟು ಕಾರ್ಯ ಬಾಕಿ ಉಳಿದಿದೆ. ಆದರೆ, ಸುಮಾರು ಶೇ. 10ರಷ್ಟು ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೂ ಕೆಟ್ಟ ಹೆಸರು ಬರುತ್ತಿದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪ್ರಗತಿ ಕಂಡಿದ್ದೇವೆ. ಡೆಫಿನೇಟ್‌ ಬೆಂಚ್‌ಮಾರ್ಕ್‌ ರೀತಿ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲಿಗೇ ಹೋದರೂ ಇಲಾಖೆಯಲ್ಲಿ ಆಗುತ್ತಿರುವ ಜನಸ್ನೇಹಿ ಕೆಲಸಗಳ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ. ಈ ಪ್ರಗತಿಯ ನಡುವೆ ಕೆಲ ಅಧಿಕಾರಿಗಳಿಂದ ತೊಂದರೆಯುಂಟಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ಕೇಸ್‌ಗಳ ಅಂಕಿ ಅಂಶಗಳನ್ನು ತಿಳಿಸಿದ ಸಚಿವರು ಅವುಗಳನ್ನು ಶೀಘ್ರವೇ ವಿಲೇವಾರಿ ಮಾಡಲಾಗುವುದು ಎಂದು ವಿವರಿಸಿದರು. ತಿಂಗಳುಗಳ ಲೆಕ್ಕದಲ್ಲಿ, ತಹಸೀಲ್ದಾರ್‌ ಕೋಟಾದಲ್ಲಿ ಪ್ರಕರಣಗಳ ಸಂಖ್ಯೆ ನಿಯಂತ್ರಿಸಲಾಗಿದ್ದರೂ ಮತ್ತೊಮ್ಮೆ ಹೆಚ್ಚಾಗುತ್ತಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.


Logitech MX Brio Ultra HD 4K Collaboration and Streaming Webcam with Free Adobe Subscription, 1080p at 60 FPS, Dual Noise Reducing Mics, Show Mode, USB-C, Webcam Cover

ಇಲಾಖೆಯ ಅಧಿಕಾರಿಗಳ ಪ್ರಯತ್ನದ ಫಲವಾಗಿ ಶೇ. 70ರಷ್ಟು ಕೆಲಸ ಪೂರ್ಣಗೊಂಡಿದ್ದರೂ, ಇನ್ನೂ ಶೇ. 30ರಷ್ಟು ಕಾರ್ಯ ಬಾಕಿ ಉಳಿದಿದೆ. ಆದರೆ, ಸುಮಾರು ಶೇ. 10ರಷ್ಟು ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೂ ಕೆಟ್ಟ ಹೆಸರು ಬರುತ್ತಿದೆ. ಅಂತಹ ಅಧಿಕಾರಿಗಳನ್ನು ಸರಿ ದಾರಿಗೆ ತರುವ ಮಾರ್ಗ ನಮಗೆ ತಿಳಿದಿದೆ ಎಂದು ಸಭೆಯಲ್ಲೇ ಕೆಲ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಕಡಕ್‌ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ. RSS ವಿರುದ್ಧ ವಾಗ್ದಾಳಿ ಮಾಡಿ ಸಿಎಂ ಸಿದ್ದರಾಮಯ್ಯ ಕುರ್ಚಿ ಕಸರತ್ತು? ಆರ್.ಅಶೋಕ್ ಪೋಸ್ಟ್ ಹೇಳಿದ್ದೇನು?