Skip to main content
ವಿಡಿಯೋ
politics

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಹೊಸ ತಿರುವು: ಕಾಡಿನಿಂದ ಬುರುಡೆ ತಂದಿರುವ ಅಸಲಿ ವಿಡಿಯೋ ಪತ್ತೆ!

By Gireesh Vasishta
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಹೊಸ ತಿರುವು: ಕಾಡಿನಿಂದ ಬುರುಡೆ ತಂದಿರುವ ಅಸಲಿ ವಿಡಿಯೋ ಪತ್ತೆ!

- ಆ ವಿಡಿಯೋದಲ್ಲಿ ಜಯಂತ್ ಎಂಬಾತನು ಬಂಗ್ಲೆ ಗುಡ್ಡೆಯ ಮೇಲ್ಬಾಗದಲ್ಲಿ ಬಿದ್ದಿದ್ದ ಬುರುಡೆಯನ್ನು ಎತ್ತಿ ತರುತ್ತಿರುವುದು ಕಾಣಸಿಗುತ್ತಿದೆ.

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಹೊಸ ತಿರುವು: ಕಾಡಿನಿಂದ ಬುರುಡೆ ತಂದಿರುವ ಅಸಲಿ ವಿಡಿಯೋ ಪತ್ತೆ!

ಧರ್ಮಸ್ಥಳ ಬುರುಡೆ ಕೇಸ್‌ಗೆ ಹೊಸ ತಿರುವು ಸಿಕ್ಕಿದ್ದು. ಕಾಡಿನಿಂದ ಬುರುಡೆ ತಂದಿರುವ ಅಸಲಿ ವಿಡಿಯೋ ಇದೀಗ ಲಭ್ಯವಾಗಿದೆ ಎನ್ನಲಾಗುತ್ತಿದೆ. ಕೇರಳ ಮೂಲದ ಯೂಟ್ಯೂಬರ್ ಮನಾಫ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಜುಲೈ 11ನೇ ತಾರೀಖಿನಂದು   ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ. ವಿಡಿಯೋದಲ್ಲಿ ಜಯಂತ್.ಟಿ ಎಂಬಾತನು ಧರ್ಮಸ್ಥಳ ಬಂಗ್ಲೊ ಗುಡ್ಡೆಯ ಮೇಲ್ಭಾಗದಲ್ಲಿದ್ದ ಬುರುಡೆಯನ್ನು ಕತ್ತಿಯ ಸಹಾಯದಿಂದ ಎತ್ತಿ ತರುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿವೆ. ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಬುರುಡೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿಡಿಯೋ ಸದ್ಯಾ ಪ್ರಕರಣಕ್ಕೆ ಹೊಸ ತಿರುವು ನೀಡುತ್ತಿದೆ.

ವಿಡಿಯೋದಲ್ಲಿ ಕಾಣಿಸಿದ ಪ್ರಮುಖ ಅಂಶಗಳು ಯಾವುವು?

- ಆ ವಿಡಿಯೋದಲ್ಲಿ ಜಯಂತ್ ಎಂಬಾತನು ಬಂಗ್ಲೆ ಗುಡ್ಡೆಯ ಮೇಲ್ಬಾಗದಲ್ಲಿ ಬಿದ್ದಿದ್ದ ಬುರುಡೆಯನ್ನು ಎತ್ತಿ ತರುತ್ತಿರುವುದು ಕಾಣಸಿಗುತ್ತಿದೆ.

- ವಿಡಿಯೋವನ್ನು ಕಾಡು ಪ್ರದೇಶದಲ್ಲಿ, ಮರಗಳ ಮದ್ಯೆ ಶೂಟ್ ಮಾಡಲಾಗಿದ್ದು, ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಬುರುಡೆ ಪತ್ತೆಯಾದ ದೃಶ್ಯ ಲಭ್ಯವಾಗಿದೆ.Levi's Men's Slim Fit Mid Rise 511 Mid-Rise Jeans

- ಜಯಂತ್ ತನ್ನ ಕೈಯಲ್ಲಿದ್ದ ಕತ್ತಿಯ ಸಹಾಯದಿಂದ ಬುರುಡೆಯನ್ನು ಎತ್ತಿ ತರುತ್ತಿದ್ದು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣುತ್ತದೆ.

- ಧರ್ಮಸ್ಥಳ ಭಾಗದಲ್ಲೇ ಈ ಬುರುಡೆ ಸಿಕ್ಕಿರುವ ಸಾಧ್ಯತೆ ಇದೆ ಎಂಬ ಅನುಮಾನಗಳು ಮತ್ತಷ್ಟು ಕೂತುಹಲ ಮೂಡಿಸಿದೆ.ಕಾನೂನು ಹಾಗೂ ಅಧಿಕಾರವನ್ನು ದುರ್ಬಳಕೆ ಮಾಡುವುದರಲ್ಲಿ ಕಾಂಗ್ರೆಸ್ ಎತ್ತಿದ 'ಕೈ': ಕಲ್ಲು ತೂರಿದವರ ಕೇಸ್‌ಗಳು ವಾಪಸ್‌: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ

ಈ ವಿಡಿಯೋ ಹೊರಬಂದ ನಂತರ, ಬುರುಡೆ ನಿಜವಾಗಿಯೂ ಕಾಡಿನಿಂದಲೇ ತಂದು ಇರಿಸಲಾಗಿದೆ ಎಂಬ ಅಂಶ ತನಿಖೆಗೆ ಹೊಸ ತಿರುವು ನೀಡಿಲಿದೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಶಂಕೆಗಳು ವ್ಯಕ್ತವಾಗಿದ್ದು, ಈ ದೃಶ್ಯಾವಳಿಗಳು ತನಿಖಾ ಅಧಿಕಾರಿಗಳಿಗೆ ಮತ್ತಷ್ಟು ಆಧಾರ ಒದಗಿಸಿದಂತೆ ಕಾಣುತ್ತಿದೆ.U