ರಾಜ್ ಬಿ. ಶೆಟ್ಟಿ ಅವರ "ಗರುಡ ಗಮನ ವೃಷಭ ವಾಹನ" ಚಿತ್ರದ ದೊಡ್ಡ ಯಶಸ್ಸಿನ ನಂತರ, ಅವರು ತಮ್ಮ ಹೊಸ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಆದರೆ, ಕನ್ನಡಿಗರ ಬಹುದಿನದ ಬೇಡಿಕೆಯೊಂದನ್ನು ಈಡೇರಿಸದಿರುವುದು ಅವರ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳ ಸುರಿಮಳೆ ಕೇಳಿಬರುತ್ತಿದೆ.
"ಗರುಡ ಗಮನ ವೃಷಭ ವಾಹನ" ಸಿನಿಮಾ ಕನ್ನಡದಲ್ಲಿ ಜನಪ್ರಿಯತೆ ಗಳಿಸಿದ ನಂತರ, ಮಲಯಾಳಂ ಭಾಷೆಗೆ ಡಬ್ ಆಗಿ ಅಲ್ಲಿಯೂ ಬಿಡುಗಡೆಯಾಯಿತು. ಮಲಯಾಳಂ ಪ್ರೇಕ್ಷಕರು ಇದನ್ನು ತಮ್ಮದೇ ಭಾಷೆಯಲ್ಲಿ ವೀಕ್ಷಿಸಿದರು.
ಆದರೆ, ದುಲ್ಖರ್ ಸಲ್ಮಾನ್ ನಿರ್ಮಿಸಿರುವ ಮಲಯಾಳಂನ "ಲೋಕಃ" ಚಿತ್ರವನ್ನು ರಾಜ್ ಅವರ 'ಲೈಟರ್ ಬುದ್ಧ' ಸಂಸ್ಥೆ ಕರ್ನಾಟಕದಲ್ಲಿ ವಿತರಿಸುತ್ತಿದೆ. ಈ ಚಿತ್ರ ಬಿಡುಗಡೆಯಾಗಿ ಎರಡು ವಾರಗಳು ಕಳೆದಿದ್ದರೂ, ಕನ್ನಡದಲ್ಲಿ ಇನ್ನೂ ತೆರೆಕಂಡಿಲ್ಲ. ಇದು ಅನೇಕ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಸಿನಿಮಾ ಸಂಪೂರ್ಣವಾಗಿ ಅರ್ಥವಾಗಬೇಕಾದರೆ ಭಾಷೆ ಬಹಳ ಮುಖ್ಯ. ಮಲಯಾಳಂನಲ್ಲೇ ಚಿತ್ರವನ್ನು ವೀಕ್ಷಿಸಿದರೆ ಅದರ ಸಂಪೂರ್ಣ ಅನುಭವ ಸಿಗುವುದಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಹೀಗಾಗಿ, "ಲೋಕಃ" ಚಿತ್ರದ ಕನ್ನಡ ಆವೃತ್ತಿ ಯಾವಾಗ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
'ಕಲಾ ಸಾಮ್ರಾಟ್' ಆರಂಭವಾಗಿದ್ದು ನನ್ನ ಚಿನ್ನದ ದುಡ್ಡಿಂದ...ಎಸ್.ನಾರಾಯಣ್ ಸೊಸೆ ಕೊಟ್ಟ ದೂರಿನಲ್ಲಿ ನಂಬಲಾಗದ ಮಾಹಿತಿ!
ವಿಚಿತ್ರವೆಂದರೆ, ಈ ಚಿತ್ರದ ತಮಿಳು ಮತ್ತು ಹಿಂದಿ ಆವೃತ್ತಿಗಳು ಬೆಂಗಳೂರಿನಲ್ಲಿ ಲಭ್ಯವಿವೆ. ಆದರೆ, ಕನ್ನಡಿಗರಿಗೆ ಮಾತ್ರ ತಮ್ಮ ಭಾಷೆಯಲ್ಲಿ ಸಿನಿಮಾ ನೋಡುವ ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಲೋಕಃ: ಚಾಪ್ಟರ್ 1-ಚಂದ್ರ" ಸಿನಿಮಾ ಈಗಾಗಲೇ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದು ಸೂಪರ್ ಹಿಟ್ ಆಗಿದೆ. ಬೆಂಗಳೂರಿನಲ್ಲಿಯೂ ಸಾಕಷ್ಟು ಪ್ರದರ್ಶನಗಳು ಸಿಕ್ಕಿವೆ. ಈ ಚಿತ್ರದಲ್ಲಿ ಬಳಸಲಾದ ಭಾಷೆಯ ವಿಚಾರದಲ್ಲಿ ಹಿಂದೆ ವಿವಾದ ಸೃಷ್ಟಿಯಾಗಿತ್ತು, ಆನಂತರ ದುಲ್ಖರ್ ಅವರು ಕ್ಷಮೆ ಯಾಚಿಸಿದ್ದರು.