Skip to main content
ವಿಡಿಯೋ
1/2
general

ಮಗನ ಭವಿಷ್ಯದ ಚಿಂತೆಯಲ್ಲಿ ತಾಯಿಯ ಸಾವಿನ ದಾರಿ: ಗ್ರೇಟರ್ ನೋಯ್ಡಾದ ಘಟನೆ..!

By Vinutha U
ಮಗನ ಭವಿಷ್ಯದ ಚಿಂತೆಯಲ್ಲಿ ತಾಯಿಯ ಸಾವಿನ ದಾರಿ: ಗ್ರೇಟರ್ ನೋಯ್ಡಾದ ಘಟನೆ..!

ಸಾಕ್ಷಿ ತಮ್ಮ ಪತಿ ದರ್ಪಣ್ ಮತ್ತು ಮಗ ದಕ್ಷ್ ಜೊತೆ ಗ್ರೇಟರ್ ನೋಯ್ಡಾದ ಏಸ್ ಸಿಟಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ದಕ್ಷ್ ಹಲವು ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ. ಇದನ್ನು ನೋಡುತ್ತಿದ್ದ ಸಾಕ್ಷಿಗೆ ಮಗನ ಭವಿಷ್ಯದ ಚಿಂತೆ ಕಾಡುತ್ತಿತ್ತು.

ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಜನರು ಮಕ್ಕಳು ಬೇಡವೆಂದು ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದಾರೆ, ಇನ್ನು ಎಷ್ಟೋ ಜನರು ಹೆಣ್ಣು ಮಗು ಬೇಡ, ಗಂಡು ಮಗು ಬೇಡ ಎಂದು ಭೇದ-ಭಾವ ಮಾಡುತ್ತಾ ಮಕ್ಕಳಾಗುವ ಭಾಗ್ಯವನ್ನೇ ಕಳೆದುಕೊಳ್ಳುತ್ತಾರೆ. ಮತ್ತು ನಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರು ಕೂಡ ತಮ್ಮ ಮಕ್ಕಳನ್ನು ಬೇರೆಯವರ ಮನೆಗೆ ಕಳಿಸದೇ ತಾವೇ ಸಾಕಿ ಸಲುಗುತ್ತಾರೆ, ಅದೇ ರೀತಿಯ ಒಬ್ಬ ಮಹಾತಾಯಿ ತನ್ನ ಮಗ ಮಾನಸಿಕ ಅಸ್ವಸ್ಥನೆಂದು ತನ್ನ ಮಗನೊಂದಿಗೆ ತಾನು ಕೂಡ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ.

 

ಮಕ್ಕಳಿಲ್ಲದವರಿಗೆ ಮಕ್ಕಳಿಲ್ಲ ಎಂಬ ಕೊರಗು, ಮಕ್ಕಳಿದ್ದವರಿಗೆ ಬೇರೆ ಬೇರೆ ಕಷ್ಟಗಳು. ಗ್ರೇಟರ್ ನೋಯ್ಡಾದಲ್ಲಿ ಒಂದು ದುಃಖದ ಘಟನೆ ನಡೆದಿದೆ. 37 ವರ್ಷದ ಸಾಕ್ಷಿ ಛಾವ್ಲಾ ಎಂಬ ಮಹಿಳೆ ತಮ್ಮ 11 ವರ್ಷದ ಮಾನಸಿಕ ಅಸ್ವಸ್ಥ ಮಗನೊಂದಿಗೆ 13ನೇ ಮಹಡಿಯಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದಾರೆ. ಸಾಕ್ಷಿ ತಮ್ಮ ಪತಿ ದರ್ಪಣ್ ಮತ್ತು ಮಗ ದಕ್ಷ್ ಜೊತೆ ಗ್ರೇಟರ್ ನೋಯ್ಡಾದ ಏಸ್ ಸಿಟಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ದಕ್ಷ್ ಹಲವು ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ. ಇದನ್ನು ನೋಡುತ್ತಿದ್ದ ಸಾಕ್ಷಿಗೆ ಮಗನ ಭವಿಷ್ಯದ ಚಿಂತೆ ಕಾಡುತ್ತಿತ್ತು.

Arayna Women's Cotton Printed Anarkali Kurti with Palazzo Pants Set, Floral

ಚಿಕಿತ್ಸೆ ನೀಡಿದರೂ ದಕ್ಷ್‌ನ ಸ್ಥಿತಿ ಸುಧಾರಿಸಿರಲಿಲ್ಲ. ಇದು ಸಾಕ್ಷಿಯನ್ನು ಇನ್ನಷ್ಟು ಒತ್ತಡಕ್ಕೆ ಒಳಪಡಿಸಿತ್ತು. ಘಟನೆಯ ಸಮಯದಲ್ಲಿ ಸಾಕ್ಷಿಯ ಪತಿ ದರ್ಪಣ್, ಚಾರ್ಟೆಡ್ ಅಕೌಂಟೆಂಟ್, ಮನೆಯ ಬೇರೆ ಕೋಣೆಯಲ್ಲಿದ್ದರು. ಕಿರುಚಾಟ ಕೇಳಿ ಬಾಲ್ಕನಿಗೆ ಬಂದಾಗ, ಪತ್ನಿ ಮತ್ತು ಮಗ ನೆಲಕ್ಕೆ ಬಿದ್ದಿದ್ದರು. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಮನೆಯಲ್ಲಿ ಒಂದು ಡೆತ್‌ನೋಟ್ ಸಿಕ್ಕಿತು. ಅದರಲ್ಲಿ ಸಾಕ್ಷಿ, "ನಾವು ಈ ಜಗತ್ತನ್ನು ತೊರೆಯುತ್ತಿದ್ದೇವೆ, ಕ್ಷಮಿಸಿ, ಯಾರಿಗೂ ತೊಂದರೆ ಕೊಡಲು ಇಷ್ಟವಿಲ್ಲ, ನಮ್ಮ ಸಾವಿಗೆ ಯಾರೂ ಕಾರಣರಲ್ಲ" ಎಂದು ಬರೆದಿದ್ದರು.

ಚೆನ್ನೈ: ಗಂಡನ ಪ್ರೀತಿ ಕಡಿಮೆಯಾದ ಕಾರಣಕ್ಕೆ ತಾಯಿಯೇ ಮಗುವನ್ನು ಕೊಂದ ಕ್ರೂರ ಘಟನೆ;

ಈ ಘಟನೆ ಸ್ಥಳೀಯರನ್ನು ಆತಂಕಕ್ಕೆ ಒಡ್ಡಿದೆ. ಮಗನ ಮಾನಸಿಕ ಸಮಸ್ಯೆಯೇ ಸಾಕ್ಷಿಯನ್ನು ಈ ಕೃತ್ಯಕ್ಕೆ ಒತ್ತಾಯಿಸಿತು ಎಂದು ನೆರೆಹೊರೆಯವರು ಭಾವಿಸಿದ್ದಾರೆ. ಉಪ ಪೊಲೀಸ್ ಕಮೀಷನರ್ ಶಕ್ತಿ ಅವಸ್ಥಿ, ಡೆತ್‌ನೋಟ್ ಸಿಕ್ಕಿದ್ದು, ಮಗನ ಅನಾರೋಗ್ಯ ತಿಳಿದುಬಂದಿದೆ, ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಮಕ್ಕಳಿಲ್ಲದವರಿಗೆ ಒಂದು ಕೊರಗು, ಮಕ್ಕಳಿದ್ದರೆ ಬೇರೆ ಕೊರಗು. ಸಮಾಜದಲ್ಲಿ ಎಲ್ಲವೂ ಸರಿಯಿದ್ದರೂ ಬದುಕು ಕಷ್ಟ. ಮಾನಸಿಕ ಸಮಸ್ಯೆಯಿರುವ ಮಗನ ಭವಿಷ್ಯದ ಚಿಂತೆ ಸಾಕ್ಷಿಯನ್ನು ಸಾವಿನ ದಾರಿಗೆ ಕೊಂಡೊಯಿತು.

ಒಡಿಶಾದಲ್ಲಿ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಜಾಜಪುರದಲ್ಲಿ ಆರೋಪಿಯ ಬಂಧನ..!

ಆತ್ಮಹತ್ಯೆ ಯೋಚನೆ ಬಂದರೆ ಒಮ್ಮೆ ಯೋಚಿಸಿ. ಅದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕಷ್ಟವಿದ್ದರೆ ಆತ್ಮೀಯರ ಜೊತೆ ಮಾತನಾಡಿ. ಸಮಯ ಕಳೆದರೆ ಕಷ್ಟವೂ ಕಳೆಯುತ್ತದೆ. ಆತ್ಮಹತ್ಯೆ ಯೋಚನೆ ಇದ್ದರೆ, ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ ಅಥವಾ ಸಹಾಯವಾಣಿಗೆ ಕರೆ ಮಾಡಿ. ನೀವು ಒಬ್ಬರೇ ಅಲ್ಲ, ಸಮಸ್ಯೆಗೆ ಪರಿಹಾರ ಖಂಡಿತ ಸಿಗುತ್ತದೆ.