ಜಾತಿ ಗಣತಿ ವಿಚಾರವಾಗಿ ಜಾತಿ ಯಾವುದು ಎಂದು ಬರೆಸಲೂ ಸಹ ಸಮುದಾಯಗಳು ಸೂಚನೆ ನೀಡಿವೆ. ಜಾತಿ ಛಲವಾದಿ ಧರ್ಮ ಬೌದ್ಧ ಎಂದು ಬರೆಸಲು ಸೂಚನೆ ನೀಡಿವೆ. ಚಿತ್ರದುರ್ಗದಲ್ಲಿ ಛಲವಾದಿ ಮಠದ ಬಸವನಾಗಿದೇವ ಶ್ರೀ ಹೇಳಿಕೆ ನೀಡಿದ್ದಾರೆ. 8 ನೇ ಕಾಲಂನಲ್ಲಿ ಬೌದ್ಧ ಧರ್ಮ ಎಂತಲೂ ಮತ್ತು 9ನೇ ಕಾಲಂನಲ್ಲಿ ಪರಿಶಿಷ್ಠ ಜಾತಿಯಾಗಿದೆ. 10 ನೇ ಕಾಲಂನಲ್ಲಿ ಛಲವಾದಿ ಎಂತಲೂ ಬರೆಸಲು ಸ್ವಾಮೀಜಿ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಜಾತಿ ಗಣತಿ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ವಿಜಯೇಂದ್ರ ಕಿಡಿ..!!
ಮೊದಲೇ ಜಾತಿ ಗಣತಿ ಒಂದು ಗೊಂದಲದ ವಿಚಾರವಾಗಿದೆ. ಅದಕ್ಕಾಗಿ ಕರ್ನಾಟಕದಲ್ಲಿ ಸ್ವಯಂ ಸಾವಿರಾರು ಜಾತಿಗಳು ಬರುತ್ತವೆ ಹಾಗಾಗಿ ಜಾತಿ ಗಣತಿಯೇ ಬೇಡ ಎಂಬ ತೀರ್ಮಾನಕ್ಕೆ ಬರುವ ಉದ್ಧೇಶದಿಂದ ಹಲವಾರು ಚರ್ಚೆಗಳು ವಿವಾದಗಳು ನಡೆದವು..ಆದರೆ ಈಗ ಜಾತಿ ಗಣತಿ ಆರಂಭವಾದ ಮೇಲೆ ನಮ್ಮ ಜಾತಿ ಕಾಲಂನಲ್ಲಿ ಯಾವ ಜಾನತಿ ಬರೆಸಬೇಕೆಂದು ಸ್ವಾಮೀಜಿಗಳು ನಿರ್ದೇಶನ ನೀಡಿದ್ದಾರೆ. ಈ ಸೂಚನೆ ಬಂದಿರುವದು ಕೇವಲ ಛಲವಾದಿ ಸಮುದಾಯಕ್ಕೆ ಛಲವಾದಿ ಸಮುದಾಯದ ನಾಯಕರು ಮತ್ತು ಸ್ವಾಮೀಜಿಗಳಿಂದ ಸೂಚನೆ ದೊರಕಿದೆ.ಇದನ್ನೂ ಓದಿ: ಜಾತಿ ಗಣತಿಯಿಂದ ಹಿಂದೂ ಸಮಾಜವನ್ನು ಒಡೆಯುವ ಉದ್ದೇಶ - ಸಂಸದ ಯದುವೀರ್ ಒಡೆಯರ್
ಇನ್ನೂ ಜಾತಿ ಕಾಲಂನಲ್ಲಿ ಬೌದ್ಧ ಎಂದು ಬರೆಸಿದರೆ ಹಿಂದೂ ಧರ್ಮದ ವತಿಯಿಂದ ಸಿಗುವ ಎಲ್ಲಾ ಸೌಲಭ್ಯಗಳು ಕಳೆದು ಹೋಗುತ್ತವೆ ಎಂದು ಆದರೆ ಯಾರೂ ಭಯ ಪಡುವ ಅಗತ್ಯವಿಲ್ಲ ಆವಾಗ ಯಾವ ಸೌಲಭ್ಯಗಳು ದೊರೆಯುತ್ತಿದ್ದವೋ ಅವೇ ಸಹ ಈಗಲೂ ದೊರೆಯುತ್ತವೆ ಎಂದು ಸ್ವಾಮೀಜಿ ತಿಳಿಸಿದರು. ಹಾಗೇಯೇ ಗುರುಪೀಠ ಯಾವತ್ತೂ ಸಮುದಾಯದ ಜೊತೆ ಇರುತ್ತೆ ಯಾರಿಗೂ ಯಾವತ್ತೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತದೆ ಎಂದು ಸ್ವಾಮೀಜಿ ಹೇಳಿದರು..Veirdo® 100% Pure Cotton Regular Fit Half Sleeve Solid Core Round Neck Multicolor T-Shirt Combo for Men (Pack of 3)