ಕೊಡಿಗೇಹಳ್ಳಿ ಗ್ರಾಮದಲ್ಲಿ ನೈಸ್ (ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್) ಯೋಜನೆಗಾಗಿ ಮೀಸಲಾಗಿದ್ದ ಸುಮಾರು 350 ಕೋಟಿ ರೂಪಾಯಿ ಮೌಲ್ಯದ 14 ಎಕರೆ ಸರ್ಕಾರಿ ಜಮೀನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸಿದ್ದು ಸಾಮಾಜಿಕ ದೂರು ದಾಖಲಾಗಿದೆ. ವಿಶೇಷ ಜಿಲ್ಲಾಧಿಕಾರಿ ವಾಸಂತಿ ಅಮರ್ ಖಾಸಗಿ ವ್ಯಕ್ತಿಗಳ ಪರವಾಗಿ ಈ ಜಮೀನನ್ನು ಪರಭಾರೆ ಮಾಡಿ ಆದೇಶ ಹೊರಡಿಸಿದ್ದಾರೆ. ನೈಸ್ ಸಂಸ್ಥೆಯ ಫೀಲ್ಡ್ ಸೆಕ್ಯುರಿಟಿ ಆಫೀಸರ್ ಸಿದ್ದಲಿಂಗಯ್ಯ ಅವರ ಪ್ರಕಾರ, ಪುಟ್ಟಮ್ಮ, ಎಚ್.ಬಿ. ಶ್ರೀಧರ್, ಕೆ.ವಿ. ಚಂದ್ರನ್ ಮತ್ತು ಪುಟ್ಟಗೌರಮ್ಮ ನಕಲಿ ಸಾಗುವಳಿ ಚೀಟಿ ಹಾಗೂ ಭೂ ಮಂಜೂರಾತಿ ದಾಖಲೆಗಳನ್ನು ಸಲ್ಲಿಸಿದ್ದಾರಂತೆ.
ಹಿಂದಿನ ವರದಿ ಪ್ರಕಾರ, ಕೊಡಿಗೇಹಳ್ಳಿ ಗ್ರಾಮದ ಹಳೆಯ ಸರ್ವೆ ನಂಬರ್ 86ರ ಗೋಮಾಳ ಜಮೀನು 1998 ರಲ್ಲಿ ನೈಸ್ ಯೋಜನೆಗಾಗಿ ಕೆಐಎಡಿಬಿ ಮೂಲಕ ಜಿಲ್ಲಾಡಳಿತದ ಹಸ್ತಾಂತರಗೊಂಡಿತ್ತು. ಯೋಜನೆ ಇನ್ನೂ ಅಪೂರ್ಣವಾಗಿರುವುದರಿಂದ ಜಾಗ ಖಾಲಿ ಉಳಿದಿದ್ದರೂ, ನಾಲ್ವರು 1954ರಲ್ಲಿ ಸರ್ಕಾರದಿಂದ ಈ ಜಮೀನು ತಮ್ಮ ಹೆಸರಿಗೆ ಮಂಜೂರವಾಗಿದೆ ಎಂದು ಹೈಕೋರ್ಟ್ ಬಳಿ ಅರ್ಜಿ ಸಲ್ಲಿಸಿದ್ದರು. ಪರಿಶೀಲನೆಯಾಗಿರುವ ದಾಖಲೆಗಳಲ್ಲಿ ಹಸ್ತಾಕ್ಷರ ವ್ಯತ್ಯಾಸಗಳು, ನಕಲಿ ಸಾಗುವಳಿ ಚೀಟಿಗಳು ಹಾಗೂ ದಾಖಲಾತಿಗಳ ಅಸ್ಪಷ್ಟತೆಗಳು ಬೆಳಕಿಗೆ ಬಂದಿದ್ದು, ಅವರ ಅರ್ಜಿಗಳನ್ನು ಅನುಮೋದಿಸುವುದು ಕಾನೂನುಬದ್ಧವಲ್ಲ ಎಂದು ತಹಸೀಲ್ದಾರ್ ವರದಿ ಸಲ್ಲಿಸಿದ್ದರು.ಇದನ್ನು ಓದಿ: ಬಲೂನ್ ಮಾರುವ ಕುಟುಂಬದ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: 24 ಗಂಟೆಯಲ್ಲೆ ಆರೋಪಿ ಬಂಧನ
ಹೆಚ್ಚುವರಿ ಪರಿಶೀಲನೆ ನಂತರ, ವಿಶೇಷ ಜಿಲ್ಲಾಧಿಕಾರಿ ವಾಸಂತಿ ಅಮರ್ ನಾಲ್ವರ ಹೆಸರನ್ನು ಖಾತಾ ದಾಖಲೆಗಳಲ್ಲಿ ಸೇರಿಸಿ, 2025 ರ ಮೇ ತಿಂಗಳಲ್ಲಿ 14 ಎಕರೆ ಜಮೀನು ಪರಭಾರೆ ಆದೇಶ ಹೊರಡಿಸಿದ್ದರು. ಈ ಕ್ರಮದಿಂದ ಸರ್ಕಾರದ ಜಮೀನು ಕಬಳಿಸಲು ಅಧಿಕಾರಿಗಳೇ ಭೂಚೋರರೊಂದಿಗೆ ಕೈಜೋಡಿಸಿರುವುದಾಗಿ ನೈಸ್ ಸಂಸ್ಥೆಯ ಅಧಿಕಾರಿಗಳು ಆರೋಪಿಸಿದ್ದಾರೆ. ಜುಲೈನಲ್ಲಿ, ವಾಸಂತಿ ಅಮರ್ ಅವರ ಆಸ್ತಿಗಳ ಮೇಲೆ ಕೆ-ರೈಡ್ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಪರಿಶೀಲನೆ ನಡೆಸಿದ್ದರು.YUISI Sun Hat for Men Women, Breathable Summer Hat for Travel, Hiking, Gardening, Sun Hats for Men & Round Sun Cap for Hiking, Hats for Women Indoor Outdoor Activities
ಇದಕ್ಕೂ ಮುನ್ನ, ಖಾಸಗಿ ಬಿಲ್ಡರ್ ಟ್ರಿಂಕೋ ಕಂಪನಿ ಜಮೀನು ಖರೀದಿ ಒಪ್ಪಂದ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಆರಂಭಿಸಿದ್ದಾರೆ. ಈ ಸಂಬಂಧ, ಕೆ.ವಿ. ಚಂದ್ರನ್ ಮತ್ತು ಟ್ರಿಂಕೋ ಕಂಪನಿಯ ನಾಲ್ವರ ವಿರುದ್ಧ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಲಾಗಿದ್ದರೂ, ಎಫ್ಐಆರ್ನಲ್ಲಿ ಕೇವಲ ಕೆ.ವಿ. ಚಂದ್ರನ್ ಹೆಸರು ಮಾತ್ರ ದಾಖಲಿಸಲಾಗಿದೆ. ನೈಸ್ ಪ್ರತಿನಿಧಿಗಳ ಪ್ರಕಾರ, ಉಳಿದ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ, ಇದರಿಂದ ವಿವಾದ ಇನ್ನೂ ಮುಂದುವರೆದಂತೆ ಕಾಣುತ್ತಿದೆ.