Skip to main content
ವಿಡಿಯೋ
1/2
politics

ಹಿಜಾಬ್‌ ಪ್ರಕರಣ: ಶಾಲೆಯಲ್ಲಿ ಹಿಜಾಬ್‌ ನಿಷೇಧ, ಕೇರಳದ ಪ್ರಕರಣ ಅಂತ್ಯವಾಗಿದ್ದು ಹೇಗೆ?

By Gireesh Vasishta
ಹಿಜಾಬ್‌ ಪ್ರಕರಣ: ಶಾಲೆಯಲ್ಲಿ ಹಿಜಾಬ್‌ ನಿಷೇಧ, ಕೇರಳದ ಪ್ರಕರಣ ಅಂತ್ಯವಾಗಿದ್ದು ಹೇಗೆ?

ಮುಸ್ಲಿಂ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರು ಸೇಂಟ್‌ ರೀಟಾ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸದೆ ಇರಲು ನಿರ್ಧರಿಸಿದರು. ವಿದ್ಯಾರ್ಥಿನಿ ಮತ್ತೊಂದು ಶಾಲೆಗೆ ಸೇರ್ಪಡೆಗೊಳ್ಳಲು ಮುಂದಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಂತ್ಯಗೊಳಿಸಲಾಯಿತು.

ಕೇರಳ: ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳಿಗೆ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವ ಶಿಕ್ಷಣ ಇಲಾಖೆಯ ಅಧಿಕೃತ ನಿರ್ದೇಶನವನ್ನು ಪ್ರಶ್ನಿಸಿ ಸೇಂಟ್ ರಿಟಾ ಪಬ್ಲಿಕ್ ಶಾಲೆಯ ಅರ್ಜಿಯನ್ನು ಕೇರಳ ಹೈಕೋರ್ಟ್ ಶುಕ್ರವಾರ ಮುಕ್ತಾಯಗೊಳಿಸಿದೆ [ಮ್ಯಾನೇಜರ್, ಸೇಂಟ್ ರಿಟಾ ಪಬ್ಲಿಕ್ ಸ್ಕೂಲ್ vs ಕೇರಳ ಮತ್ತು ಇತರರು].PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,

ಎಂಟನೇ ತರಗತಿಯ ವಿದ್ಯಾರ್ಥಿನಿಯು ತನ್ನ ವಕೀಲರ ಮೂಲಕ ನ್ಯಾಯಮೂರ್ತಿ ವಿ ಜಿ ಅರುಣ್ ಅವರಿಗೆ ತಾನು ಶಾಲೆಯಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸಲು ಇಚ್ಛಿಸುವುದಿಲ್ಲ ಮತ್ತು ವಿಷಯವನ್ನು ಹೆಚ್ಚು ಬೆಳೆಸಲು ಬಯಸುವುದಿಲ್ಲ ಎಂದು ತಿಳಿಸಿದ ನಂತರ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿತು. ಅರ್ಜಿ ದಾಖಲಿಸಿದ್ದ ಸಿಬಿಎಸ್-ಸಂಯೋಜಿತ ಶಾಲೆಯು ಎರ್ನಾಕುಲಂನ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಡಿಡಿಇ) ವಿದ್ಯಾರ್ಥಿಯ ಪರವಾಗಿ ನೀಡಿದ್ದ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿತ್ತು.ಇದನ್ನು ಓದಿ; ಚಿತ್ತಾಪುರದಲ್ಲಿ RSS ಪಥಸಂಚಲನ: ಅ.28ಕ್ಕೆ ಶಾಂತಿಸಭೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

"ಅಂತಿಮವಾಗಿ ವಿವೇಕವು ಜಯ ಸಾಧಿಸಿದೆ ಹಾಗೂ ಸಂವಿಧಾನದ ಅಡಿಪಾಯಗಳಲ್ಲಿ ಒಂದಾದ ಭ್ರಾತೃತ್ವವು ದೃಢವಾಗಿದೆ ಎಂದು ತಿಳಿಸಲು ನ್ಯಾಯಾಲಯವು ಹರ್ಷಿಸುತ್ತದೆ. ರೀತ್ಯಾ ಅರ್ಜಿಯನ್ನು ಮುಕ್ತಾಯಗೊಳಿಸಲಾಗಿದೆ" ಎಂದು ನ್ಯಾಯಮೂರ್ತಿಗಳು ತಿಳಿಸಿದರು.  "ವಿದ್ಯಾರ್ಥಿನಿ ತನ್ನ ಸ್ವಂತ ಇಚ್ಛೆಯಿಂದ ಶಾಲೆಯನ್ನು ತೊರೆಯುತ್ತಿರುವುದರಿಂದ ಶಾಲಾ ಆಡಳಿತ ಮಂಡಳಿಯು ಆಕೆಯನ್ನು ಶಾಲೆಯಿಂದ ಹೊರಗೆ ತಳ್ಳಿದೆ ಎಂದು ಭಾವಿಸಲಾಗದು" ನ್ಯಾಯಮೂರ್ತಿಗಳು ಮೌಖಿಕವಾಗಿ ಹೇಳಿದರು.