Skip to main content
ವಿಡಿಯೋ
1/3
general

ಮನ್‌ ಕಿ ಬಾತ್‌: ದೇಶದ ಜನತೆಗೆ ಪ್ರಧಾನಿ ಮೋದಿಯವರಿಂದ ತಿಳಿಸಲಾದ ಪ್ರಮುಖಾಂಶಗಳಿವು

By Shravanthi R
ಮನ್‌ ಕಿ ಬಾತ್‌: ದೇಶದ ಜನತೆಗೆ ಪ್ರಧಾನಿ ಮೋದಿಯವರಿಂದ ತಿಳಿಸಲಾದ ಪ್ರಮುಖಾಂಶಗಳಿವು

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಹಲವು ವಿಷಯಗಳ ಕುರಿತು ಸಂದೇಶ ನೀಡಿದರು. ಛಠ್ ಹಬ್ಬದ ಶುಭಾಶಯ ಕೋರಿದ ಅವರು, ಆಪರೇಷನ್ ಸಿಂಧೂರ, ಮಾವೋವಾದಿ ವಿರೋಧಿ ಕಾರ್ಯಾಚರಣೆ, ಸರೋವರ ಪುನರುಜೀವನ, ಮತ್ತು ಒಡಿಶಾದ ಕೊರಾಪುಟ್ ಕಾಫಿ ಬಗ್ಗೆ ಮಾತನಾಡಿದರು.

ಇವತ್ತಿನ ದಿನ ಪ್ರಧಾನಿ ನರೇಂದ್ರ ಮೋದಿಯವರು, ಆಕಾಶವಾಣಿಯ ಮನ್‌ಕೀ ಬಾತ್‌ ಕಾರ್ಯಕ್ರಮದಲ್ಲಿ ಛಠ್‌ ಹಬ್ಬದ ಶುಭಾಶಯ ಕೋರಿದ್ದಾರೆ. ಇದರ ಜೊತೆಗೆ, ಆಪರೇಷನ್ ಸಿಂಧೂರ, ಮಾವೋವಾದಿಗಳ ವಿರುದ್ದದ ಕಾರ್ಯಾಚರಣೆ, ಸರೋವರಗಳಿಗೆ ಹೊಸ ಜೀವ ನೀಡುವ ಅಭಿಯಾನ, ಒಡಿಶಾದ ಕೊರಾಪುಟ್ ಕಾಫಿ ಸೇರಿದಂತೆ ಮತ್ತಷ್ಟು ವಿಷಯಗಳ ಕುರಿತು ಮಾತನಾಡಿದರು.

ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಛಠ್‌ ಹಬ್ಬದ ಪ್ರಾಮುಖ್ಯತೆ ಕುರಿತಾಗಿ ದೀರ್ಘಕಾಲ ನುಡಿದರು. ವಿವಿಧ ವಿಚಾರಗಳು ಈ ಕೆಳಗಿನಂತಿವೆ:

  • ನಾಗರಿಕರಿಗೆ ಪತ್ರ ಬರೆದಿದ್ದನ್ನು ನೆನಪಿಸಿಕೊಂಡು, ಪ್ರತಿಯಾಗಿ ಅನೇಕರು ತಮಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.

  • ಸ್ವಚ್ಛತಾ ಅಭಿಯಾನದ ಕುರಿತು, ದೇಶದ ನಗರಗಳ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು.

  • ಬೆಂಗಳೂರಿನ ಕಪಿಲ್ ಶರ್ಮಾ ಅಭಿಯಾನ; ದೃಢನಿಶ್ಚಯದಿಂದ ಬದಲಾವಣೆ ಸಾಧ್ಯ ಎಂದು ಮೋದಿ ಉಲ್ಲೇಖ.

  • ಸರೋವರಗಳ ಪುನರುಜೀವನ: ಬೆಂಗಳೂರಿನ ಕಪಿಲ್ ಶರ್ಮಾ ಅಭಿಯಾನ; ದೃಢನಿಶ್ಚಯದಿಂದ ಬದಲಾವಣೆ ಸಾಧ್ಯ ಎಂದು ಮೋದಿ ಉಲ್ಲೇಖ.

  • ಮ್ಯಾಂಗ್ರೋವ್‌ಗಳ ಮಹತ್ವದ ಕುರಿತಾಗಿ ಅವುಗಳ ಸಂರಕ್ಷಣಾ ದೃಷ್ಟಿಯಿಂದ ಗುಜರಾತ್ ಅರಣ್ಯ ಇಲಾಖೆಯ ಅಭಿಯಾನ; ಧೋಲೇರಾ ಬಳಿ 5 ವರ್ಷಗಳಲ್ಲಿ 3,500 ಹೆಕ್ಟೇರ್ ಮ್ಯಾಂಗ್ರೋವ್ ಬೆಳೆದು, ಡಾಲ್ಫಿನ್ ಮತ್ತು ಜಲಚರಗಳ ಸಂಖ್ಯೆ ಹೆಚ್ಚಳ. ಕೋರಿ ಕ್ರೀಕ್‌ನಲ್ಲಿ ಮ್ಯಾಂಗ್ರೋವ್ ಕಲಿಕಾ ಕೇಂದ್ರ ಸ್ಥಾಪನೆ. ಮರಗಳ ನೆಡುವಿಕೆ ಮತ್ತು 'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನಕ್ಕೆ ಒತ್ತು ನೀಡಿರುವ ಬಗ್ಗೆ ಪ್ರಸ್ತಾಪ.

  • ಒಡಿಶಾದ ಕೊರಾಪುಟ್ ಕಾಫಿ ಅದ್ಭುತ ರುಚಿ; ಉದ್ಯೋಗ ತೊರೆದು ಯಶಸ್ವಿ ಬೆಳೆಗಾರರು; ಒಡಿಶಾದ ಹೆಮ್ಮೆ. ಜೊತೆಗೆ, ಭಾರತೀಯ ಕಾಫಿ: ಪ್ರಪಂಚದಲ್ಲಿ ಜನಪ್ರಿಯ; ಈಶಾನ್ಯ ಭಾಗದಲ್ಲಿ ಪ್ರಗತಿ, ಭಾರತೀಯ ಕಾಫಿಯ ಗುರುತು ಬಲಪಡಿಸುವುದು.