ಬೆಂಗಳೂರು: ಶನಿವಾರ ಮುಂಜಾನೆ ನಗರದ ಕೆ.ಆರ್ ಪುರಂನ ಮನೆಯೊಂದರಲ್ಲಿ ಸಿಲಿಂಡರ್ ಸೋರಿಕೆ ಸ್ಪೋಟ ಅವಘಡವು ಸಂಭವಿಸಿದೆ. ಕೆ.ಆರ್ ಪುರಂನ ವಿಧಾನಸಭಾ ಕ್ಷೇತ್ರದ ತ್ರಿವೇಣಿನಗರದಲ್ಲಿ ಸಂಭವಿಸಿದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಬೈರತಿ ಬಸವರಾಜ್ ಅವರು ಘಟನೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ದುರ್ಘಟನೆಯಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿದೆ. ಮನೆಯು ಸಂಪೂರ್ಣ ಹಾನಿಗೊಳಗಾಗಿದ್ದು, ಜನರು ಇಂತಹ ಘಟನೆಗಳಿಂದ ಭಯಭೀತರಾಗುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಇದೇ ವೇಳೆ ಸ್ಪೋಟ ಕುರಿತಾಗಿ ಅನುಮಾನ ವ್ಯಕ್ತಪಡಿಸಿದ್ದರು.
ಈ ಹಿನ್ನಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿರುವ ಪೋಲಿಸರು, ಸ್ಪೋಟದ ಬಗ್ಗೆ ಅನುಮಾನ ಮೂಡಿದ್ದು, ಸಿಲಿಂಡರ್ ಗ್ಯಾಸ್ ಸೋರಿಕೆಯೇ ಅಥವಾ ಬೇರೆ ಸ್ಟೋಟಕ ವಸ್ತುಗಳಿದೆಯಾ..? ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ. KESHAR KAALVI Trending Midi Length 1 Piece | Cotton A-Line Midi Dress | Trending Paisley Printed Fit & Flare Gown | Casual Summer Dress
ಇಡೀ ಮನೆ ನೆಲಸಮವಾಗಿದ್ದು, ಅವಶೇಷಗಳನ್ನ ತೆಗೆದು ಪರಿಶೀಲನೆಗೆ ಸೂಚಿಸಿರುವ ಹಿರಿಯ ಅಧಿಕಾರಿಗಳು, ಸ್ಫೋಟಗೊಂಡ ಸ್ಥಳದ ವಸ್ತುಗಳನ್ನ ಎಫ್ಎಸ್ಎಲ್ ಗೆ ರವಾನಿಸಲಾಗಿದೆ. ಆ ಬಳಿಕ, ರಿಪೋರ್ಟ್ ಬಂದ ಬಳಿಕ ಕಾರಣ ಬೆಳಕಿಗೆ ಬರಲಿದೆ ಎನ್ನಲಾಗಿದೆ. ಇನ್ನು ಗಾಯಾಳು ಯುವತಿ ಚಂದನಾ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್ ತೀರ್ಪು: ಭಾರತದ ಕಾನೂನಿನಡಿಯಲ್ಲಿ ಕ್ರಿಪ್ಟೋ ಕರೆನ್ಸಿ ಇದೀಗ ಅಧಿಕೃತ ಆಸ್ತಿ!