ರಾಯಚೂರು; ರಾಯಚೂರಿನಲ್ಲಿ ಕಿರಾಣಿ ಅಂಗಡಿಗೆ ನುಗ್ಗಿ ಕಳ್ಳ ತನ್ನ ಕೈಚಳಕ ತೋರಿದ್ದಾನೆ. ಆದರೆ ಅವನ ಪ್ರತಿಯೊಂದು ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಯಚೂರು ಜಿಲ್ಲೆ ಲಿಂಗಸೂಗೂರು ತಾ. ಮುದಗಲ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮುದಗಲ್ ಪಟ್ಟಣದ ಹೋಲ್ ಸೆಲ್ ಕಿರಾಣಿ ಅಂಗಡಿಗೆ ನುಗ್ಗಿ ಕಳ್ಳ ಕಳ್ಳತನ ಮಾಡಿದ್ದಾನೆ..ಇದನ್ನು ಓದಿ; ಮೋದಿಜಿ ಅವರ 'ಮನ್ ಕೀ ಬಾತ್' ನಲ್ಲಿ ಬೆಂಗಳೂರಿನ ವ್ಯಕ್ತಿಯ ಸಾಧನೆಯ ಬಗ್ಗೆ ಉಲ್ಲೇಖ; ಯಾರಿವರು?
ಸಿಗರೇಟ್, ಹಣಕ್ಕಾಗಿ ಅಂಗಡಿಯಲ್ಲಿ ಕಳ್ಳ ಹುಡುಕಾಟ ನಡೆಸಿದ್ದಾನೆ, ಚೀಲ ತೆಗೆದುಕೊಂಡು ಮನಬಂದಂತೆ ಕಿರಾಣಿ ಸಾಮಾಗ್ರಿ ಹೊತ್ತು ಹೋದ ಖದೀಮ, ಬೆಳಗ್ಗೆ ಅಂಗಡಿ ಓಪನ್ ಮಾಡಿದಾಗ ಅಂಗಡಿ ಮಾಲೀಕ ಗಾಬರಿಯಾಗಿದ್ದಾನೆ. ನಂತರ ಸಿಸಿ ಟಿವಿಯಲ್ಲಿ ಖದೀಮನ ಕೈಚಳಕ ಬಯಲಾಗಿದ್ದು, ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.Sun Hat for Men Women, Breathable Summer Hat for Travel, Hiking, Gardening