ರಾಯಚೂರು: ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲೊಂದಾದ ರಾಯಚೂರಿನಲ್ಲಿ ಬೇಳೆಕಾಳುಗಳ ಉತ್ಪಾದನೆಗೆ ಉತ್ತೇಜನ ನೀಡಲು ಮತ್ತು ಅವುಗಳ ಮೌಲ್ಯವರ್ಧನೆ ಮಾಡಲು ಹೊಸ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ. ವಾರ್ಷಿಕವಾಗಿ 80,000 ಮೆಟ್ರಿಕ್ ಟನ್ಗೂ ಹೆಚ್ಚು ಕೆಂಪು ತೋಗರಿ ಬೇಳೆ ಮತ್ತು 34,000 ಮೆಟ್ರಿಕ್ ಟನ್ಗಳಷ್ಟು ಕಡಲೇ ಬೇಳೆ ಉತ್ಪಾದನೆಗೆ ಹೆಸರುವಾಸಿಯಾದ ಈ ಜಿಲ್ಲೆಗೆ ಈ ಘಟಕವು ಹೊಸ ಆರ್ಥಿಕ ಶಕ್ತಿಯನ್ನು ನೀಡಲಿದೆ.ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ದಲಿತ ಸಿಎಂ ಕೂಗು: ಹೈಕಮಾಂಡ್ ನಿರ್ಧಾರಕ್ಕೆ ಪರಮೇಶ್ವರ್ ಒತ್ತು..!
ಹೊಸ ಘಟಕವು ಬೇಳೆಕಾಳುಗಳನ್ನು ಅರ್ಹರ್ ಬೇಳೆ (ತೊಗರಿ ಬೇಳೆ), ಕಡಲೆ ಬೇಳೆ ಮತ್ತು 'ಸಿದ್ಧವಾದ ಚಿಲ್ಲಾ ಮಿಶ್ರಣ' (Ready-to-cook Chilla Mix) ಆಗಿ ಪರಿವರ್ತಿಸಲು ಸಹಕಾರಿಯಾಗಿದೆ. ಇದು ಜಿಲ್ಲೆಯ ಒಟ್ಟು ಉತ್ಪಾದನೆಯ ಸುಮಾರು ಶೇ. 1 ರಷ್ಟನ್ನು ಖರೀದಿಸಿ, ಸಂಸ್ಕರಿಸಿ, ಮಾರುಕಟ್ಟೆ ಮಾಡುವ ಸಾಮರ್ಥ್ಯ ಹೊಂದಿದೆ.ಇದನ್ನೂ ಓದಿ: ದಾಖಲೆ ಮಟ್ಟಕ್ಕೆ ಸ್ಮಾರ್ಟ್ಫೋನ್ ರಫ್ತು: ಉದ್ಯೋಗ ಸೃಷ್ಟಿಗೆ ಹೊಸ ಆರಂಭ..!!
ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಒಟ್ಟು ಬೇಳೆಕಾಳುಗಳ ಶೇ. 50 ರಷ್ಟನ್ನು ಸಂಸ್ಕರಿಸಲು ಕನಿಷ್ಠ 50 ಇಂತಹ ಘಟಕಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಈ ಉಪಕ್ರಮವು ಜಿಲ್ಲೆಯ ಇತರೆ ರೈತ ಉತ್ಪನ್ನ ಸಂಸ್ಥೆಗಳು (FPOs) ಮತ್ತು ಗ್ರಾಮೀಣ ಉದ್ಯಮಿಗಳು ಅನುಕರಿಸಲು ಒಂದು ಯಶಸ್ವಿ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಒಂದು ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.SGF11 Women's Kanjivaram Pure Soft Silk Saree For Women Pure Golden Zari With Blouse Piece