ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಬಾಲಾ ವಾಯುಪಡೆ ನೆಲೆಯಿಂದ ರಫೇಲ್ ಯುದ್ಧ ವಿಮಾನದಲ್ಲಿ ಯಶಸ್ವಿ ಹಾರಾಟ ನಡೆಸಿದ್ದಾರೆ. ಈ ಮೂಲಕ ಫ್ರೆಂಚ್ ಏರೋಸ್ಪೇಸ್ ದೈತ್ಯ ಡಸಾಲ್ಟ್ ಏವಿಯೇಷನ್ ತಯಾರಿಸಿದ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ಭಾರತೀಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ: ರಿಲಯನ್ಸ್ ಕಂಪನಿಗೆ 750 ಕೋಟಿ ಸಾಲ ಪ್ರಕರಣ: ಐಡಿಬಿಐ ವಿರುದ್ಧದ ಅರ್ಜಿ ಹಿಂಪಡೆದ ಅನಿಲ್ ಅಂಬಾನಿ!
ಸುಮಾರು ಐದು ತಿಂಗಳ ಹಿಂದೆ, ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ 'ಆಪರೇಷನ್ ಸಿಂಧೂರ್' ಅನ್ನು ಪ್ರಾರಂಭಿಸಿದಾಗ, ಇದೇ ಅಂಬಾಲಾ ವಾಯುಪಡೆ ನೆಲೆಯಿಂದ ರಫೇಲ್ ಯುದ್ಧ ವಿಮಾನಗಳು ಗಡಿಯಾಚೆಗಿನ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುವ ಕಾರ್ಯಾಚರಣೆಗೆ ಹೊರಟಿದ್ದವು. ಇದರ ಮೂಲಕ ನವದೆಹಲಿಯ ಭಯೋತ್ಪಾದನಾ ವಿರೋಧಿ ಸಂದೇಶವನ್ನು ರವಾನಿಸಿದ್ದವು.ಇದನ್ನೂ ಓದಿ: ಡಿ.ಕೆ. ಸುರೇಶ್ ಮಾತು: ಅಣ್ಣ ಸಿಎಂ ಆಗುವ ಆಸೆ; ಅದು ಹಣೆಯಲ್ಲಿ ಬರೆದಿದ್ದರೆ ಮಾತ್ರ..!
ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇದು ಎರಡನೇ ಬಾರಿಯ ಯುದ್ಧ ವಿಮಾನ ಹಾರಾಟವಾಗಿದೆ. 2023ರ ಏಪ್ರಿಲ್ 8ರಂದು ಅವರು ಅಸ್ಸಾಂನ ತೇಜ್ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ಜೆಟ್ನಲ್ಲಿ ಹಾರಾಟ ನಡೆಸಿದ್ದರು.ಇದನ್ನೂ ಓದಿ: ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ಇತಿಹಾಸ ಸೃಷ್ಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಮುರ್ಮು ಅವರಿಗೂ ಮೊದಲು, ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಅವರು ಪುಣೆ ಬಳಿಯ ಲೋಹೆಗಾಂವ್ನಲ್ಲಿ ಸುಖೋಯ್-30 ಎಂಕೆಐ ವಿಮಾನದಲ್ಲಿ ಹಾರಾಟ ನಡೆಸಿದ್ದರು.
ರಫೇಲ್ ಯುದ್ಧ ವಿಮಾನಗಳು 2020ರಲ್ಲಿ ಅಂಬಾಲಾದ ವಾಯುಪಡೆ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ 'ಗೋಲ್ಡನ್ ಆರೋಸ್' ಎಂದೇ ಖ್ಯಾತವಾಗಿರುವ 17ನೇ ಸ್ಕ್ವಾಡ್ರನ್ನ ಭಾಗವಾಗಿ ಸೇರ್ಪಡೆಗೊಂಡಿದ್ದವು.INDO ERA Women's Silk Blend Embroidered A-Line Kurta Pant with Dupatta Set