ಬಸವನಗುಡಿ: ಬೆಂಗಳೂರಿನಲ್ಲಿ ಕುಡಿದು ಬೇಕರಿ ಕಳ್ಳತನಕ್ಕೆ ಯತ್ನ ಮಾಡಿದ ಕಳ್ಳನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ತ್ಯಾಗರಾಜ ನಗರದ ಎರಡನೇ ಬ್ಲಾಕ್ ನ ನಂದೀಶ್ವರ ಬೇಕರಿಯಲ್ಲಿ ಕಳ್ಳತನಕ್ಕೆ ಯತ್ನ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿರುವ ಘಟನೆ.. ಸಿಮೆಂಟ್ ಬ್ಲಾಕ್ ನಿಂದ ಬೇಕರಿ ಬೀಗ ಒಡೆಯುತ್ತಿದ್ದ ಮದನ್ ಕುಮಾರ್ ಎಂಬ ಕಳ್ಳ.ಇದನ್ನು ಓದಿ; ಕೆಲಸದಾಕೆ ಸುಂದರಿ ಬೀಬಿ ಮೇಲೆ ಪೊಲೀಸರಿಂದ ಹಲ್ಲೆ; ಮೂವರು ಕ್ರೈಂ ಸಿಬ್ಬಂದಿ ಅಮಾನತು
ಈ ವೇಳೆ ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಇದನ್ನ ಗಮನಿಸಿದ್ದಾರೆ, ಕಳ್ಳನನ್ನು ಹಿಡಿದು 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೀಟ್ನಲ್ಲಿದ್ದ ಹೊಯ್ಸಳ ಪೊಲೀಸರು ಬಂದು ಆರೋಪಿಯನ್ನ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಈ ವೇಳೆ ಪೊಲೀಸರಿಗೆ ಹೊಟ್ಟೆ ಹಸಿವಿಗಾಗಿ ಕಳ್ಳತನ ಮಾಡಿರುವುದಾಗಿ ಹೇಳಿರುವ ಆರೋಪಿ. ತಾನು ಬಳೆಗೆರೆ ನಿವಾಸಿ ಎಂದು ಹೇಳಿರುವ ಆರೋಪಿ ಮದನ್ ಕುಮಾರ್. ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ..Vogaan Men's Polo Shirt and Shorts Set | Summer Fashion Short Sleeve Solid Zipper 2 Pieces Outfits for Men