Skip to main content
ವಿಡಿಯೋ
1/2
general

​ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ ಸಂಭ್ರಮ!

By Vinutha U
​ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ ಸಂಭ್ರಮ!

ಪರಿಷೆಗೆ ಬರುವವರು ಕಡಲೆಕಾಯಿ ಕೊಂಡೊಯ್ಯಲು ಮನೆಗಳಿಂದಲೇ ಬಟ್ಟೆಯ ಚೀಲಗಳು ಅಥವಾ ಇತರ ಪರಿಸರ ಸ್ನೇಹಿ ಕೈ ಚೀಲಗಳನ್ನು ಕಡ್ಡಾಯವಾಗಿ ತರಬೇಕು.

ಬೆಂಗಳೂರು - ​ಉದ್ಯಾನನಗರಿ ಬೆಂಗಳೂರಿನಲ್ಲಿ ಈ ನವೆಂಬರ್‌ನಲ್ಲಿ ಡಬಲ್ ಧಮಾಕ ಆಗಲಿದೆ . ಸಾಂಪ್ರದಾಯಿಕ ಕಡಲೆಕಾಯಿ ಪರಿಷೆಗಾಗಿ ಸಿದ್ಧತೆಗಳು ನಡೆದಿವೆ. ಈ ವರ್ಷ ಎರಡು ಕಡೆಗಳಲ್ಲಿ ಪರಿಷೆ ನಡೆಯಲಿದೆ.

ಎಲ್ಲಿ? ಯಾವಾಗ?

​ಈ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಎರಡು ಕಡಲೆಕಾಯಿ ಪರಿಷೆಗಳ ಹೆಚ್ಚು ಮೆರಗು ತರಲಿದೆ. ಮಲ್ಲೇಶ್ವರಂ ನ. 8 ರಿಂದ 10 ರವರೆಗೂ 3 ದಿನ ನವೆಂಬರ್‌ನ ಮೊದಲ ಪರಿಷೆ ನಡೆಯಲಿದೆ. ಬಸವನಗುಡಿ ನ. 17 ರಿಂದ 21 5 ದಿನಗಳು ಐತಿಹಾಸಿಕ ಪರಿಷೆ ಈ ಬಾರಿ 5 ದಿನಕ್ಕೆ ವಿಸ್ತರಣೆ ಆಗಿದೆ. 'ನವೆಂಬರ್ ಕ್ರಾಂತಿ' ಊಹಾಪೋಹದ ನಡುವೆ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ: ಹೈಕಮಾಂಡ್ ಭೇಟಿ ನಿರಾಕರಣೆ

ಬಸವನಗುಡಿ ಪರಿಷೆಗೆ ಸಿಎಂ ಚಾಲನೆ!

​ಬಹುನಿರೀಕ್ಷಿತ ಬಸವನಗುಡಿ ಕಡಲೆಕಾಯಿ ಪರಿಷೆಯು ನವೆಂಬರ್ 17 ರಂದು ಆರಂಭವಾಗಲಿದೆ.​ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.​ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಳೆದ ವರ್ಷ ಈ ಪರಿಷೆಯಲ್ಲಿ ಸುಮಾರು 5 ಲಕ್ಷ ಜನರು ಪಾಲ್ಗೊಂಡಿದ್ದರು.

ಪರಿಸರ ಸ್ನೇಹಿ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಷೆ!

ಪರಿಷೆಗೆ ಬರುವವರು ಕಡಲೆಕಾಯಿ ಕೊಂಡೊಯ್ಯಲು ಮನೆಗಳಿಂದಲೇ ಬಟ್ಟೆಯ ಚೀಲಗಳು ಅಥವಾ ಇತರ ಪರಿಸರ ಸ್ನೇಹಿ ಕೈ ಚೀಲಗಳನ್ನು ಕಡ್ಡಾಯವಾಗಿ ತರಬೇಕು. ಕಬ್ಬಿನ ಬೆಲೆ ನಿಗದಿಗಾಗಿ ಹೋರಾಟ ವಿಚಾರ; ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಶಂಕರ ಭ ಮಾಡಲಗಿ ನೇತೃತ್ವದಲ್ಲಿ ಸರ್ಕಾರಕ್ಕೆ ಒತ್ತಾಯ

​ಭದ್ರತೆ ಮತ್ತು ಸಿದ್ಧತೆಗೆ ಹೈ ಅಲರ್ಟ್!

​ಜನಸಂದಣಿ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ​ಭದ್ರತೆಗಾಗಿ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ​ಅಗ್ನಿಶಾಮಕ ವಾಹನ, ತುರ್ತು ಚಿಕಿತ್ಸಾ ವಾಹನ ಮತ್ತು ಮಾರ್ಷಲ್‌ಗಳ ನಿಯೋಜನೆ ಆಗಿದೆ. ನಿರಂತರ ವಿದ್ಯುತ್, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮತ್ತು ಸ್ವಚ್ಛತೆಗೆ ಒತ್ತು ನೀಡಲಾಗಿದೆ.

​ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಆರಂಭವಾಗುವ ಈ ಸಾಂಪ್ರದಾಯಿಕ ಪರಿಷೆಯಲ್ಲಿ ಬಸವನಗುಡಿ ದೊಡ್ಡ ಬಸವನ‌ ನಡೆದಾಡುವವನು ಎನ್ನುವ ನಂಬಿಕೆಯೂ ಇದೆ.