ದೆಹಲಿಯ ಕೆಂಪುಕೋಟೆ ಬಳಿ ನಡೆದ ಭೀಕರ ಸ್ಫೋಟದಿಂದಾಗಿ ಜೀವಗಳು ತತ್ತರಿಸಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟವರು ಯಾರೆಂಬ ಬಗ್ಗೆ ತನಿಖೆಯಲ್ಲಿ ಮಹತ್ವದ ತಿರುವು ಲಭಿಸಿದೆ. ವೈದ್ಯಕೀಯ ವೃತ್ತಿಪರರ ಮುಖವಾಡದ ಹಿಂದೆ ಅಡಗಿದ್ದ ಉಗ್ರಗಾಮಿ ಜಾಲವೊಂದು ಈ ಕೃತ್ಯದಲ್ಲಿ ಭಾಗಿಯಾಗಿರುವ ಸಂಗತಿ ಬಹಿರಂಗಗೊಂಡಿದೆ.
ನೆನ್ನೆ ನಡೆದಿರುವ ಘೋರ ಘಟನೆ ಸಂಬಂಧ, ಇಂದು ಬೆಳಿಗ್ಗೆಯಿಂದ ಸತತ ತನಿಖೆ ಹಾಗೂ ವಿಚಾರಣೆಗಳು ನಡೆಸಲಾಗಿದೆ. ಈ ನಿಟ್ಟಿನಲ್ಲಿ ಜಮ್ಮು ಕಾಶ್ಮೀರ ಮತ್ತು ಹರಿಯಾಣ ಪೊಲೀಸರು ಜಂಟಿಯಾಗಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಇದರ ಹಿಂದಿರುವ ವೈಟ್ ಕಾಲರ್ ನೆಟ್ವರ್ಕ್ ಎಂದರೆ ವೃತ್ತಿಯಲ್ಲಿ ಉನ್ನತ ಸ್ಥಾನದಲ್ಲಿದ್ದುಕೊಂಡೇ ಕುಕೃತ್ಯ ಕೈಗೊಂಡಿರುವ ಈ ಜಾಲದ ಕುರಿತು ಮತ್ತಷ್ಟು ಸ್ಫೋಟಕ ಮಾಹಿತಿಗಳನ್ನು ಕಲೆಹಾಕಿದ್ದಾರೆ.
ಈ ಸಂಬಂಧ, ಎನ್ಐಎ ತನಿಖೆ ನಡೆಸಿದ್ದು, ಯುಎಪಿಎ ಸ್ಪೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಚುರುಕು ತನಿಖೆ ನಡೆಸಿದೆ. ವೈದ್ಯ ರೂಪದ ಈ ರಕ್ಕಸರ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿ ಸಂಚಿನ ಬಗ್ಗೆ ತನಿಖೆ ನಡೆಸಿದಾಗ, ಸ್ಥಳಗಳಿಂದ ಅಧಿಕ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ತನಿಖೆ ಶ್ರೀನಗರದಿಂದ ಲಕ್ನೋವರೆಗೂ ವ್ಯಾಪಿಸಿದ್ದು, ಈ ಉಗ್ರಗಾಮಿ ಜಾಲದ ಕುರಿತು ತನಿಖೆ ಮುಂದುವರೆದಿದೆ. OPPO K13x 5G 6000mAh and 45W SUPERVOOC Charger & AI (Breeze Blue, 128 GB) (6 GB RAM)
ಉಗ್ರ ಸಂಘಟನೆಗಳ ನಂಟು -
ಈ ಪ್ರಕರಣವು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಜೈಷ್ - ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ (Ansar Ghazwat-ul-Hind) ನೊಂದಿಗೆ ಸಂಪರ್ಕ ಹೊಂದಿರುವುದಾಗಿದೆ ಎನ್ನಲಾಗಿದೆ. ದೆಹಲಿ ಸ್ಫೋಟದಂತಹ ಭೀಕರ ಕೃತ್ಯಕ್ಕೆ, ದೇಶದ ಭದ್ರತಾ ವ್ಯವಸ್ಥೆಗೆ ಸವಾಲಾಗಿರುವ ಎಲ್ಲರನ್ನು ಸುಮ್ಮನೆ ಬಿಡುವುದಿಲ್ಲವೆಂದು ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವರು ತಿಳಿಸಿದ್ದಾರೆ. ಇದರ ಬೆನ್ನಲ್ಲೇ, ಭದ್ರತಾ ಸಂಸ್ಥೆಗಳು ಈ ವೈಟ್ ಕಾಲರ್ ನೆಟ್ವರ್ಕ್ನ ಮೂಲವನ್ನು ಭೇದಿಸಲು ತೀವ್ರ ವಿಚಾರಣೆ ಮುಂದುವರಿಸಿವೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ದೆಹಲಿ ಸ್ಫೋಟ - ಚುನಾವಣೆ ಸಂದರ್ಭದಲ್ಲೇ ಬಾಂಬ್ ಯಾಕೆ? - ಕೇಂದ್ರವೇ ತನಿಖೆ ಮಾಡಲಿ: ಸಿಎಂ ಸಿದ್ದರಾಮಯ್ಯ