Skip to main content
ವಿಡಿಯೋ
1/3
science

4 ದಿನಗಳ ಕೃಷಿ ಮೇಳಕ್ಕೆ ಚಾಲನೆ - ಕೃಷಿ ಸಬಲೀಕರಣದ ಗುರಿ - ಪ್ರಗತಿಪರ ರೈತರಿಗೆ ರಾಜ್ಯಮಟ್ಟದ ಗೌರವ

By Shravanthi R
 4 ದಿನಗಳ ಕೃಷಿ ಮೇಳಕ್ಕೆ ಚಾಲನೆ - ಕೃಷಿ ಸಬಲೀಕರಣದ ಗುರಿ - ಪ್ರಗತಿಪರ ರೈತರಿಗೆ ರಾಜ್ಯಮಟ್ಟದ ಗೌರವ

ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ‘ಸಮೃದ್ಧ ಕೃಷಿ - ವಿಕಸಿತ ಭಾರತ ನೆಲ,ಜಲ ಮತ್ತು ಬೆಳೆ’ ಶೀರ್ಷಿಕೆಯಡಿ ಕೃಷಿ ಮೇಳ ‍2025 ಕ್ಕೆ ಚಾಲನೆ ನೀಡಲಾಯಿತು.

ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಹಾಗೂ ಆದಾಯ ನೀಡುವ ಉದ್ದೇಶದಿಂದ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ರೈತ ಉದ್ಯಮಿಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಈ ಬಾರಿ, ನಾಲ್ಕು ದಿನಗಳವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ಸಚಿವ ಎನ್‌. ಚೆಲುವರಾಯಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ನವೆಂಬರ್‌ 13 ರಿಂದ 16 ರವರೆಗೆ ಕೃಷಿ ಮೇಳ ಮೇಳೈಸಲಿದೆ. 

ಈ ಸಂದರ್ಭದಲ್ಲಿ ಕೃಷಿ ಉದ್ದಿಮೆಯನ್ನು ನಂಬಿರುವ ರೈತರಿಗೆ ಹಾಗೂ ರೈತ ಉದ್ಯಮಿಗಳಿಗೆ ಸಮಗ್ರ ಬೇಸಾಯದ ಮಾರ್ಗಸೂಚಿ ಹಾಗೂ ಅವರ ಬಲವರ್ಧನೆಗೆ ನಾಂದಿಯಾಗಿ ಈ ಕಾರ್ಯಕ್ರಮ ನಡೆಸಲಾಗಿದೆ. ವಿಜ್ಞಾನ ಹಾಗೂ ಕೃಷಿಯ ವಿವಿಧ ವಲಯಗಳಲ್ಲಿ ಹೆಚ್ಚಾಗಿ ಕೃಷಿಯನ್ನು ವೃತ್ತಿಯಾಗಿ, ವೈಜ್ಞಾನಿಕ ನೆಲೆಯಾಗಿ ಹೆಚ್ಚು ಗಮನಹರಿಸಬೇಕು. ಸಂಶೋಧನೆಗಳಿಗೂ ಬೆಂಬಲ ತೋರಬೇಕೆಂದು ಹೇಳಲಾಗಿದೆ.  OnePlus Nord CE5 | Massive 7100mAh Battery | MediaTek Dimensity 8350 Apex | Powered by OnePlus AI | 8GB + 128GB | Nexus Blue

ಇದೇ ವೇಳೆ, ರೈತ ಸಾಧಕರಿಗೆ ಸನ್ಮಾನಿಸಲಾಗಿದೆ. ಈ ಕ್ಷೇತ್ರದಲ್ಲಿ ನಿರತರಾಗಿ ಶ್ರಮಿಸಿದ ಮೂವರು ರೈತರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಚಿವೆ ಶೋಭ ಕರಾಂದ್ಲಾಜೆ, ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ಕುಲಪತಿ ಎಸ್.ವಿ. ಸುರೇಶ, ಕುಲಸಚಿವ ನಾರಯಣಸ್ವಾಮಿ, ಕೃಷಿ ಇಲಾಖೆ ಕಾರ್ಯದರ್ಶಿ ಎಸ್. ಸೆಲ್ವಕುಮಾ‌ರ್, ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಇದನ್ನೂ ಓದಿ: ಮೇಕೆದಾಟು ಯೋಜನೆ: ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌; ನಮಗೆ ಸಿಕ್ಕ ನ್ಯಾಯವೆಂದ ಡಿಸಿಎಂ ಡಿಕೆಶಿ!