ನವೆಂಬರ್ 19 ರಂದು ವರದಿಯಾದ ಎಟಿಎಂ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪೋಲಿಸರು ಆರೋಪಿಗಳನ್ನು ಭೇದಿಸುತ್ತಿದ್ದಾರೆ. ಈ ಪೈಕಿ, ಆಂಧ್ರದ ಮಹಿಳೆ ಸೇರಿದಂತೆ ಮೂವರು ಆರೋಪಿಗಳ ಜೊತೆಗೆ ಇದೀಗ ತಮಿಳುನಾಡಿನಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.
ಎಟಿಎಂಗೆ ಹಣ ತುಂಬಿಸಲು ತೆರಳಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ 7.11 ಕೋಟಿ ದರೋಡೆ ಮಾಡಲಾಗಿದೆ. ಇದರಲ್ಲಿ 5.76 ಕೋಟಿಯನ್ನು ವಶಪಡಿಸಿಕೊಂಡಿರುವುದಾಗಿಯೂ; ಪ್ರಕರಣದ ಆರೇಳು ಮಂದಿ ಆರೋಪಿಗಳಲ್ಲಿ, ಈಗಾಗಲೇ 4 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ತಿಳಿಸಲಾಗಿದೆ. OPPO K13 5G with 7000mAh and 80W SUPERVOOC Charger in-The-Box, ICY Purple (8GB, 128GB)
ಶಂಕಿತರ ಹೆಸರನ್ನು ಬಹಿರಂಗ ಪಡಿಸಿಲ್ಲವಾದರೂ ಈ ದರೋಡೆಯನ್ನು ವೆಬ್ ಸರಣಿಯಿಂದ ಪ್ರೇರಣೆ ಪಡೆದು ನಡೆಸಲಾಗಿದೆ ಎಂದು ಅನುಮಾನ ವ್ಯಕ್ತವಾಗಿದೆ. ಹಣ ಸಾಗಣೆಗೆ ತಿರುಪತಿಯಲ್ಲಿ ಇನೊವಾ ಕಾರು ಬಳಕೆ ಮಾಡಲಾಗಿದ್ದು ಅದನ್ನು ಜಪ್ತಿ ಮಾಡಲಾಗಿದೆ. ಕಾರಿನಲ್ಲಿದ್ದ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆಂದು ವರದಿಯಲ್ಲಿ ತಿಳಿದುಬಂದಿತ್ತು. ಈ ಸಂಬಂಧ ಪ್ರಕರಣದ ತನಿಖೆ ಇನ್ನಷ್ಟು ಚುರುಕುಗೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ಚಳಿಗಾಲದ ಆರೋಗ್ಯ ಮತ್ತು ಫ್ಯಾಷನ್ ಗೈಡ್ - ಸೇವಿಸಬೇಕಾದ ಆಹಾರಗಳು ಮತ್ತು ಧರಿಸಬೇಕಾದ ಬಟ್ಟೆಗಳು