ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ಸಂವಿಧಾನದ 240 ನೇ ವಿಧಿಗೆ ಸೇರ್ಪಡಿಸಿ, ರಾಷ್ಟ್ರಪತಿಯಿಂದ ಪ್ರತ್ಯೇಕ ಲೆಫ್ಟಿನೆಂಟ್ ಗವರ್ನರ್ ನೇಮಿಸುವ ಮಸೂದೆ ಮಂಡನೆಯನ್ನು ಕೇಂದ್ರ ಸರ್ಕಾರವು ಯೋಜಿಸಿದೆ. ಡಿಸೆಂಬರ್ 1 ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನದ 131ನೇ ತಿದ್ದುಪಡಿಯ ಮಸೂದೆಯನ್ನು ಪರಿಚಯಿಸಲು ಮುಂದಾಗಿದೆ ಎನ್ನಲಾಗಿದೆ. ಈ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.
ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ರಾಜಕೀಯ ವಿವಾದ ಭುಗಿಲೆದಿದ್ದು, ಈ ಕುರಿತ ಭಾರಿ ವಿರೋಧ ಕೇಳಿಬಂದಿದೆ. ಪಂಜಾಬ್ ರಾಜ್ಯದ ಆಡಳಿತಾರೂಢಿ ಆಮ್ ಆದಿ ಪಕ್ಷ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ನಿಂದ ಕಳವಳ ವ್ಯಕ್ತವಾಗಿದ್ದು, ಕೇಂದ್ರದ ಈ ಕ್ರಮವು “ಪಂಜಾಬ್ ವಿರೋಧಿ” ಎಂದು ಕರೆದಿದ್ದಾರೆ. iQOO Z10 Lite 5G (Cyber Green, 6GB RAM, 128GB Storage) | 6000 mAh Battery | Dimensity 6300 5G Processor with 433K+* AnTuTu Score | IP64 Rated & Military Grade Shock-Resistance*
240 ವಿಧಿ ಏನು ಹೇಳುತ್ತದೆ?
ಈ ವಿಧಿಯು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಂತಿ, ಪ್ರಗತಿ ಹಾಗೂ ಉತ್ತಮ ಸರ್ಕಾರಗಳ ನಿಯಮಗಳನ್ನು ರಚಿಸಲು ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ನಿರ್ಧಿಷ್ಟ ಅಧಿಕಾರವನ್ನು ನೀಡುತ್ತದೆ. ಈ ಅಧಿಕಾರವು ವಿಶೇಷವಾಗಿ, ತಮ್ಮದೇ ಆದ ಶಾಸಕಾಂಗ ಸಭೆಗಳನ್ನು ಹೊಂದಿರದ ಪ್ರದೇಶಗಳಿಗೆ ಮಹತ್ವದ್ದಾಗಿದೆ. ಇದನ್ನೂ ಓದಿ: ವಾರಾಂತ್ಯದಲ್ಲಿ ನಗರದಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಎಷ್ಟಿವೆ ಗೊತ್ತಾ?