Skip to main content
ವಿಡಿಯೋ
1/3
crime

ಮಾನಸಿಕ ಖಿನ್ನತೆಯಿಂದ ತಾಯಿ ಆತ್ಮಹತ್ಯೆ, ಇಬ್ಬರು ಮಕ್ಕಳು ಅನಾಥ..!

By Sushmitha R
ಮಾನಸಿಕ ಖಿನ್ನತೆಯಿಂದ ತಾಯಿ ಆತ್ಮಹತ್ಯೆ, ಇಬ್ಬರು ಮಕ್ಕಳು ಅನಾಥ..!

ಬೆಂಗಳೂರು ಉತ್ತರ ತಾಲ್ಲೂಕಿನ ತೋಟದ ಗುಡ್ಡದಹಳ್ಳಿಯ ಸಾಯಿ ರಾಮ ಲೇಔಟ್‌ನಲ್ಲಿ ಅತ್ಯಂತ ದುಃಖಕರ ಘಟನೆ ನಡೆದಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ತೋಟದ ಗುಡ್ಡದಹಳ್ಳಿಯ ಸಾಯಿ ರಾಮ ಲೇಔಟ್‌ನಲ್ಲಿ ಅತ್ಯಂತ ದುಃಖಕರ ಘಟನೆ ನಡೆದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ 31 ವರ್ಷದ ಸೌಭಾಗ್ಯ ಎಂಬ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ದುರಂತದಿಂದಾಗಿ ಅವರ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ. ಕೈವಾರದ ಮೂಲದವರಾದ ಸೌಭಾಗ್ಯ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ತಮ್ಮ ಗಂಡನನ್ನು ಕಳೆದುಕೊಂಡ ನಂತರ ಸೌಭಾಗ್ಯ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.GoSriKi Women's Rayon Viscose Straight Bandhej Printed Kurta with Pant & Dupatta

ಬಾಡಿಗೆ ಮನೆಯಲ್ಲಿ ವಾಸವಿದ್ದ ಅವರು, ದೇವಸ್ಥಾನವೊಂದರಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆ ಮತ್ತು ದೇವಸ್ಥಾನ ಬಿಟ್ಟು ಬೇರೆಲ್ಲೂ ಹೋಗದೆ ಏಕಾಂಗಿಯಾಗಿದ್ದರು.

ಮಾನಸಿಕ ಒತ್ತಡವನ್ನು ಸಹಿಸಲಾಗದೆ ಈ ನಿರ್ಧಾರ ತೆಗೆದುಕೊಂಡಿರುವ ಸೌಭಾಗ್ಯ, ಸಾವಿಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿಯ ಅಕಾಲಿಕ ಸಾವಿನಿಂದ ಮಕ್ಕಳ ಭವಿಷ್ಯ ಅತಂತ್ರವಾಗಿದೆ.ಇದನ್ನು ಓದಿ: ಸೈಬರ್‌ ಕಿರುಕುಳ - ಇದು ಮಹಿಳೆಯರಿಗಾಗುತ್ತಿರುವ ಆನ್‌ಲೈನ್‌ ದೌರ್ಜನ್ಯದ ಕರಾಳ ಮುಖ!