Skip to main content
ವಿಡಿಯೋ
1/2
cinema

ಯುದ್ಧಕ್ಕೆ ಸಿದ್ಧ ಎಂದು ಸುದೀಪ್..ತಲೆ ಕೆಡಿಸ್ಕೋಬೇಡಿ ಅಭಿಮಾನಿಗಳೇ ಎಂದ ವಿಜಯಲಕ್ಷ್ಮಿ! ಇಲ್ಲಿದೆ ಮಾಹಿತಿ

By Ram Chethan
ಯುದ್ಧಕ್ಕೆ ಸಿದ್ಧ ಎಂದು ಸುದೀಪ್..ತಲೆ ಕೆಡಿಸ್ಕೋಬೇಡಿ  ಅಭಿಮಾನಿಗಳೇ ಎಂದ ವಿಜಯಲಕ್ಷ್ಮಿ! ಇಲ್ಲಿದೆ ಮಾಹಿತಿ

‘ಮಾರ್ಕ್’ ಚಿತ್ರದ ಪ್ರಚಾರದ ವೇಳೆ ಸುದೀಪ್ ನೀಡಿದ “ಯುದ್ಧಕ್ಕೆ ಸಿದ್ಧ” ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದು, ಸೋಷಲ್ ಮೀಡಿಯಾದಲ್ಲಿ ಅಭಿಮಾನಿಗಳ ನಡುವೆ ಮಾತಿನ ಯುದ್ಧಕ್ಕೆ ಕಾರಣವಾಗಿದೆ.

ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ. ಸಿನಿಮಾದ ಪ್ರಚಾರ ಭರದಿಂದ ನಡೆಯುತ್ತಿದೆ.

ಡಿಸೆಂಬರ್ 20ರಂದು ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದರು. ತಮ್ಮ ಸಿನಿಮಾದ ವಿರುದ್ಧ ಕೆಟ್ಟ ಪ್ರಚಾರ ಮಾಡುತ್ತಿರುವ ಕೆಲವರಿಗೆ ಅವರು ಪರೋಕ್ಷವಾಗಿ ಎಚ್ಚರಿಕೆ ನೀಡಿದರು. "ಯುದ್ಧಕ್ಕೆ ನಾವು ಸಿದ್ಧ" ಎಂದು ಹೇಳಿ ಅಭಿಮಾನಿಗಳನ್ನು ಉತ್ಸಾಹಗೊಳಿಸಿದರು.Arayna Women's Cotton Printed Floral Straight Kurta with Palazzo Pants and Dupatta


ಇದಕ್ಕೆ ಪ್ರತಿಕ್ರಿಯೆಯಾಗಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದಾವಣಗೆರೆಯಲ್ಲಿ ಮಾತನಾಡಿದರು. ಅವರು ಯಾರ ಹೆಸರನ್ನೂ ಹೇಳದೇ ಸುದೀಪ್‌ಗೆ ಟಾಂಗ್ ಕೊಟ್ಟರು. "ದರ್ಶನ್ ಜೈಲಿನಲ್ಲಿರುವಾಗ ಕೆಲವರು ಅವರ ಬಗ್ಗೆಯೂ, ಅಭಿಮಾನಿಗಳ ಬಗ್ಗೆಯೂ ಹೊರಗೆ ಮತ್ತು ಮಾಧ್ಯಮಗಳಲ್ಲಿ ಮಾತನಾಡುತ್ತಾರೆ. ಆದರೆ ದರ್ಶನ್ ಇದ್ದಾಗ ಅವರು ಗೊತ್ತೇ ಆಗದಂತೆ ಇರುತ್ತಾರೆ. ಬೆಂಗಳೂರಿನಲ್ಲಿದ್ದಾರಾ ಎಂದೇ ಗೊತ್ತಾಗುವುದಿಲ್ಲ" ಎಂದು ಹೇಳಿದರು.ದರ್ಶನನ್ನು ಒಂದು ಸಲ ಭೇಟಿ ಮಾಡಿಸಿ ಎಂದು ಬೇಡಿಕೊಂಡ ಪವಿತ್ರಾ ಗೌಡ.. ಇಲ್ಲಿದೆ ಸಂಪೂರ್ಣ ಮಾಹಿತಿ..!

ಇದಲ್ಲದೇ, "ದರ್ಶನ್ ಯಾರನ್ನೂ ಟೀಕಿಸುವುದಿಲ್ಲ, ಬೇಜಾರು ಮಾಡಿಕೊಳ್ಳುವುದಿಲ್ಲ. ನೀವೂ ಅಭಿಮಾನಿಗಳು ತಲೆ ಕೆಡಿಸಿಕೊಳ್ಳಬೇಡಿ" ಎಂದು ಫ್ಯಾನ್ಸ್‌ಗೆ ಸಲಹೆ ನೀಡಿದರು.

ಈ ಮಾತುಗಳು ಸೋಷಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿವೆ. ಅಭಿಮಾನಿಗಳ ನಡುವೆ ಮಾತಿನ ಯುದ್ಧ ಶುರುವಾಗಿದೆ. ಆದರೆ ಎಲ್ಲರೂ ಶಾಂತಿಯಿಂದ ಇರಬೇಕು ಎಂದು ಹಲವರು ಹೇಳುತ್ತಿದ್ದಾರೆ.