Skip to main content
ವಿಡಿಯೋ
1/2
cinema

ಕ್ಯಾನ್ಸರ್ ಗೆದ್ದದ್ದು ಹೇಗೆ ಶಿವಣ್ಣ? ‘45’ ರಿಲೀಸ್ ಜೊತೆ ಬಹಿರಂಗವಾದ ಅಸಲಿ ಸತ್ಯ..!

By Ram Chethan
ಕ್ಯಾನ್ಸರ್ ಗೆದ್ದದ್ದು ಹೇಗೆ ಶಿವಣ್ಣ? ‘45’ ರಿಲೀಸ್ ಜೊತೆ ಬಹಿರಂಗವಾದ ಅಸಲಿ ಸತ್ಯ..!

ಕಳೆದ ವರ್ಷ ಕ್ಯಾನ್ಸರ್ ಚಿಕಿತ್ಸೆಗೆ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ನಟ ಡಾ. ಶಿವರಾಜ್‌ಕುಮಾರ್, ಇಂದು ಸಂಪೂರ್ಣ ಆರೋಗ್ಯದೊಂದಿಗೆ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡಿಸೆಂಬರ್ 25ಕ್ಕೆ ‘45’ ಸಿನಿಮಾ ರಿಲೀಸ್ ಆಗುತ್ತಿದ್ದು, ಶಿವಣ್ಣನ ಜೀವನ ಹೋರಾಟ ಅಭಿಮಾನಿಗಳಿಗೆ ಹೊಸ ಶಕ್ತಿ ಮತ್ತು ಪ್ರೇರಣೆಯಾಗುತ್ತಿದೆ.

ನಟ ಡಾ. ಶಿವರಾಜ್‌ಕುಮಾರ್ ಅಭಿನಯದ ‘45’ ಸಿನಿಮಾ ಡಿಸೆಂಬರ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿನ ಸಂಭ್ರಮದ ಹಿಂದೆ ಒಂದು ವರ್ಷ ಹಿಂದಿನ ಕಠಿಣ ದಿನಗಳ ಕಥೆಯೂ ಇದೆ. ಕಳೆದ ವರ್ಷ ಇದೇ ಸಮಯದಲ್ಲಿ ಶಿವಣ್ಣ ಅಮೆರಿಕದ ಮಿಯಾಮಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಡಿಸೆಂಬರ್ 24ರಂದು ಅವರ ಶಸ್ತ್ರಚಿಕಿತ್ಸೆಗೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ.

ಶಿವರಾಜ್‌ಕುಮಾರ್ ಅವರಿಗೆ ಮೂತ್ರಕೋಶದ ಕ್ಯಾನ್ಸರ್ ಕಂಡುಬಂದಾಗ ಅಭಿಮಾನಿಗಳಲ್ಲಿ ಆತಂಕ ಉಂಟಾಗಿತ್ತು. ಆದರೂ ಅವರು ಧೈರ್ಯ ಕಳೆದುಕೊಳ್ಳದೇ, ಈಗಾಗಲೇ ಒಪ್ಪಿಕೊಂಡಿದ್ದ ಸಿನಿಮಾಗಳ ಕೆಲಸವನ್ನು ಪೂರ್ಣಗೊಳಿಸಿದರು. ನಂತರ ಅಮೆರಿಕದ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆಗೆ ತೆರಳಿದರು. 2024ರ ಡಿಸೆಂಬರ್ 24ರಂದು ನಡೆದ ಈ ಆಪರೇಷನ್ ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ನಡೆಯಿತು. ಭಾರತೀಯ ಮೂಲದ ವೈದ್ಯ ಡಾ. ಮುರುಗೇಶ್ ಅವರ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿಯಿತು.Arayna Women's Cotton Printed Floral Straight Kurta with Palazzo Pants and Dupatta

ಶಸ್ತ್ರಚಿಕಿತ್ಸೆಯ ನಂತರ ಶಿವಣ್ಣ ನಿಧಾನವಾಗಿ ಚೇತರಿಸಿಕೊಂಡರು. ಅಮೆರಿಕದಿಂದ ಬೆಂಗಳೂರಿಗೆ ಬಂದ ಬಳಿಕ ಸ್ವಲ್ಪ ದಿನ ವಿಶ್ರಾಂತಿ ಪಡೆದ ಅವರು, ಬಳಿಕ ಮತ್ತೆ ಕೆಲಸಕ್ಕೆ ಮರಳಿದರು. ಈಗ ಅವರು ಸಂಪೂರ್ಣವಾಗಿ ಕ್ಯಾನ್ಸರ್ ಮುಕ್ತರಾಗಿದ್ದು, ಮೊದಲಿನಂತೆಯೇ ಚುರುಕಾಗಿ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.ಇದನ್ನು ಓದಿ:ಗಿಲ್ಲಿಗೆ ಹೊಸ ಲುಕ್‌ ಕೊಟ್ಟ ಮನೆ ಮಂದಿ...ಲುಕ್‌ ನೋಡಿ ನೆಟ್ಟಿಗರು ಖುಷಿಯಾಗಿದ್ಯಾಕೆ?

ಶಿವರಾಜ್‌ಕುಮಾರ್ ಅವರು ಕನ್ನಡ ಸಿನಿಮಾಗಳ ಜೊತೆಗೆ ಪರಭಾಷೆಯಲ್ಲೂ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ‘ಜೈಲರ್ 2’ ಚಿತ್ರದ ಶೂಟಿಂಗ್‌ನಲ್ಲೂ ಭಾಗಿಯಾಗಿದ್ದಾರೆ. ‘ಉತ್ತರಕಾಂಡ’ ಸಿನಿಮಾದಲ್ಲೂ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಆರೋಗ್ಯದ ಹೋರಾಟದ ನಂತರ ಮತ್ತೆ ಬೆಳ್ಳಿತೆರೆಗೆ ಗಟ್ಟಿಯಾಗಿ ಮರಳಿರುವ ಶಿವರಾಜ್‌ಕುಮಾರ್ ಅವರ ಪ್ರಯಾಣ ಎಲ್ಲರಿಗೂ ಪ್ರೇರಣೆಯಾಗಿದೆ.