Skip to main content
ವಿಡಿಯೋ
1/2
general

ಕರ್ನಾಟಕದಲ್ಲಿ ಚಾಲಾಕಿ ಕಳ್ಳರ ಅಟ್ಟಹಾಸ: ಪೊಲೀಸರಿಗೆ ಪತ್ತೆ ಮಾಡುವುದೇ ಸವಾಲು; ಹೆಚ್ಚುತ್ತಿರುವ ಕಳ್ಳತನಕ್ಕೆ ಬಡತನ, ನಿರುದ್ಯೋಗವೇ ಕಾರಣವೇ?

By Sushmitha R
ಕರ್ನಾಟಕದಲ್ಲಿ ಚಾಲಾಕಿ ಕಳ್ಳರ ಅಟ್ಟಹಾಸ: ಪೊಲೀಸರಿಗೆ ಪತ್ತೆ ಮಾಡುವುದೇ ಸವಾಲು; ಹೆಚ್ಚುತ್ತಿರುವ ಕಳ್ಳತನಕ್ಕೆ ಬಡತನ, ನಿರುದ್ಯೋಗವೇ ಕಾರಣವೇ?

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ನಡುವೆಯೂ ಕಳ್ಳತನದ ಪ್ರಕರಣಗಳು ನಾಗಾಲೋಟದಲ್ಲಿ ಸಾಗುತ್ತಿವೆ.

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ನಡುವೆಯೂ ಕಳ್ಳತನದ ಪ್ರಕರಣಗಳು ನಾಗಾಲೋಟದಲ್ಲಿ ಸಾಗುತ್ತಿವೆ. ಕಳೆದ ಮೂರು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ಪೊಲೀಸರು ಭೇದಿಸುತ್ತಿರುವ ಪ್ರಕರಣಗಳಿಗಿಂತ ಪತ್ತೆಯಾಗದ ಪ್ರಕರಣಗಳ ಸಂಖ್ಯೆಯೇ ಹೆಚ್ಚಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಪತ್ತೆಯಾಗದ ಪ್ರಕರಣಗಳೇ ಅಧಿಕ!

ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರತಿದಿನ ಸರಾಸರಿ ಒಂದಲ್ಲಾ ಒಂದು ಕಳ್ಳತನದ ದೂರು ದಾಖಲಾಗುತ್ತಲೇ ಇವೆ. ಅದರಲ್ಲೂ ವಾಹನ ಕಳ್ಳತನ ಮತ್ತು ಸಾಮಾನ್ಯ ಕಳ್ಳತನ ಪ್ರಕರಣಗಳು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ.

2025ರ ಕಹಿ ವಾಸ್ತವ: ಕಳೆದ ವರ್ಷ ದಾಖಲಾದ ಒಟ್ಟು 30,876 ಪ್ರಕರಣಗಳಲ್ಲಿ ಪೊಲೀಸರು ಭೇದಿಸಲು ಸಾಧ್ಯವಾಗಿದ್ದು ಕೇವಲ 7,236 ಕೇಸ್‌ಗಳನ್ನು ಮಾತ್ರ. ಅಂದರೆ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ. 75ಕ್ಕೂ ಹೆಚ್ಚು ಕೇಸ್‌ಗಳು ಇಂದಿಗೂ ಸುಳಿವೇ ಸಿಗದಂತೆ ಉಳಿದಿವೆ.YouBella Jewellery for Women Evil Eye Bracelet for Girls and Women

ಕಳ್ಳತನಕ್ಕೆ ಪ್ರಮುಖ ಕಾರಣಗಳೇನು?

ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ವ್ಯವಸ್ಥೆಯಲ್ಲಿನ ಕೆಲವು ಲೋಪದೋಷಗಳೇ ಕಾರಣ:

1. ನಿರುದ್ಯೋಗ ಮತ್ತು ಬಡತನ: ಸರಿಯಾದ ಕೆಲಸವಿಲ್ಲದೆ ಹತಾಶರಾದ ಯುವಕರು ಸುಲಭವಾಗಿ ಹಣ ಮಾಡುವ ದಾರಿಯಾಗಿ ಕಳ್ಳತನವನ್ನು ಆರಿಸಿಕೊಳ್ಳುತ್ತಿದ್ದಾರೆ.ಇದನ್ನು ಓದಿ: ದೇಶದ ಆರ್ಥಿಕ ಬೆಳವಣಿಗೆ - ಶೇ.7.4 ಜಿಡಿಪಿ - ಕೇಂದ್ರ ಸರ್ಕಾರದ ಅಂದಾಜು

2. ದುರಾಸೆ: ಅತೀ ಬೇಗ ಶ್ರೀಮಂತರಾಗಬೇಕೆಂಬ ಹಂಬಲ ಕೆಲವರನ್ನು ಅಪರಾಧ ಲೋಕಕ್ಕೆ ದೂಡುತ್ತಿದೆ.

3. ಸರ್ಕಾರದ ವೈಫಲ್ಯ: ನಿರುದ್ಯೋಗಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳದ ಸರ್ಕಾರದ ನಡೆಯಿಂದಾಗಿ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಕೆಲವು ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕಳ್ಳರ ಪಾಲಿನ 'ಸೇಫ್' ತಾಣ?

ರಾಜ್ಯದಲ್ಲಿ ದಾಖಲಾಗುವ ಒಟ್ಟು ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ರಾಜಧಾನಿ ಬೆಂಗಳೂರಿನಲ್ಲೇ ನಡೆಯುತ್ತಿವೆ. ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳಿದ್ದರೂ, ಕಳ್ಳರು ಮಾತ್ರ ಪೊಲೀಸರಿಗೆ ಸವಾಲೆಸೆಯುತ್ತಿದ್ದಾರೆ.ಇದನ್ನು ಓದಿ: ಡಿಜಿಟಲ್ ಸಾಲದ ಆ್ಯಪ್‌ಗಳಿಂದ ದತ್ತಾಂಶ ಸೋರಿಕೆ ಆರೋಪ: ಆರ್‌ಬಿಐಗೆ ದೆಹಲಿ ಹೈಕೋರ್ಟ್ ನೋಟಿಸ್!

2023: 45,999 ಪ್ರಕರಣಗಳಲ್ಲಿ 27,587 ಪತ್ತೆಯಾಗಿಲ್ಲ.

2024: 40,628 ಪ್ರಕರಣಗಳಲ್ಲಿ 23,057 ಪತ್ತೆಯಾಗಿಲ್ಲ.

ಪೊಲೀಸರ ಅಸಡ್ಡೆ ಎಂಬ ಆರೋಪ:

ಕಳ್ಳರು ತಂತ್ರಜ್ಞಾನ ಬಳಸಿ ಚಾಣಾಕ್ಷತನ ಮೆರೆಯುತ್ತಿದ್ದರೆ, ಪೊಲೀಸರು ಸಾಮಾನ್ಯ ಕಳ್ಳತನದಂತಹ ಪ್ರಕರಣಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ತನಿಖೆಯಲ್ಲಿನ ವಿಳಂಬದಿಂದಾಗಿ ಸಂತ್ರಸ್ತರಿಗೆ ನ್ಯಾಯ ಸಿಗದಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಇದನ್ನು ಓದಿ: ಪ್ರತಿದಿನ ಬಾದಾಮಿ ತಿಂದರೆ ಆರೋಗ್ಯಕ್ಕೆ ಏನೆಲ್ಲಾ ಲಾಭ? ಹೃದಯ, ಮೆದುಳಿನ ರಕ್ಷಣೆಯ ಜೊತೆಗೆ ತ್ವಚೆಯ ಕಾಂತಿಗೂ ಇದು ಬೆಸ್ಟ್..!